ಕರ್ನಾಟಕ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಕರ್ನಾಟಕ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಭಾನುವಾರ, ಸೆಪ್ಟೆಂಬರ್ 19, 2021

ಪ್ರತಿಮೆಗಳನ್ನು ಅನಾಥವಾಗಿಸುವುದು ಸರಿಯೇ?

 ನಾಡು, ನುಡಿ, ದೇಶಕ್ಕೆ ಸೇವೆ ಸಲ್ಲಿಸಿದ ಮಹನೀಯರ ಪ್ರತಿಮೆಗಳನ್ನು ಸ್ಥಾಪಿಸಿ ಗೌರವಿಸುವುದು ಸಂಪ್ರದಾಯ. ಆದರೆ ಅವುಗಳ ರೂಪುರೇಷೆ, ನಿರ್ವಹಣೆಯ ಅರಿವಿಲ್ಲದೆ ಕ್ಷಣಕಾಲದ ಉತ್ತೇಜನೆಗೆ ಒಳಗಾಗಿ ಸ್ಥಾಪಿಸುವ ಪ್ರತಿಮೆಗಳು ಸಾರ್ವಜನಿಕರಿಗೆ ಕಿರಿಕಿರಿ, ಸಂಚಾರ ದಟ್ಟಣೆ ಜತೆಗೆ ಮಹನೀಯರಿಗೂ ಅವಮಾನವಾಗುವಂತೆ ಕಸಕಡ್ಡಿಗಳ ನಡುವೆ ತುಂಬಿವೆ. ಧೂಳು ಹಿಡಿದಿರುವ ಪ್ರತಿಮೆಗಳನ್ನು ಕಂಡರೆ ಬೇಸರವಾಗುತ್ತದೆ. ಸುಪ್ರೀಂಕೋರ್ಟ್‌ ಗಮನಕ್ಕೂ ಈ ವಿಚಾರ ಬಂದು ಪ್ರತಿಮೆಗಳನ್ನು ತೆರವುಗೊಳಿಸಲು ಆದೇಶಿಸಿದ್ದು, ಸಮಸ್ಯೆ ಉಲ್ಬಣವಾಗಲು ಸರ್ಕಾರದ ಅನಾಸಕ್ತಿಯೂ ಕಾರಣ.

Web Link: ಪ್ರತಿಮೆಗಳನ್ನು ಸ್ಥಾಪಿಸಿದರೆ ಸಾಕೆ?

(ವಿ.ಸೂ: ಚಿತ್ರವನ್ನು ಡೌನ್‌ಲೋಡ್‌ ಮಾಡಿಕೊಂಡು ಗ್ಯಾಲರಿಯಿಂದ ತೆರೆದರೆ ಲೇಖನವನ್ನು ಸ್ಪಷ್ಟವಾಗಿ ಓದಬಹುದು)



ಗುರುವಾರ, ಜುಲೈ 01, 2021

ಚೀನಾ ಕಮ್ಯುನಿಸ್ಟ್‌ ಸರ್ಕಾರದ ಸಾಫ್ಟ್‌ ಪವರ್‌ ಭಾರತದಲ್ಲೂ ಇದೆ: ತನಿಖಾ ವರದಿ

ಚೀನಾದಲ್ಲಿ ಆಡಳಿತ ನಡೆಸುತ್ತಿರುವ ಕಮ್ಯುನಿಸ್ಟ್‌ ಸರ್ಕಾರಕ್ಕೆ ಇಂದಿಗೆ ನೂರು ವರ್ಷವಾಗಿದೆ. ರಾಷ್ಟ್ರೀಯವಾದಿ ರಿಪಬ್ಲಿಕ್‌ ಆಫ್‌ ಚೀನಾ ಸರ್ಕಾರದ ಜತೆಗೆ ನಾಗರಿಕ ಸಂಘರ್ಷದ ನಂತರ 1949ರಲ್ಲಿ ಪೀಪಲ್ಸ್‌ ರಿಪಬ್ಲಿಕ್‌ ಆಫ್‌ ಚೈನಾ(ಪಿಆರ್‌ಸಿ) ಹೆಸರಿನಲ್ಲಿ ಸರ್ಕಾರ ಸ್ಥಾಪನೆ ಮಾಡಲಾಯಿತು. ತನ್ನ ಸರ್ಕಾರದ ಕುರಿತು ಸದಭಿಪ್ರಾಯ, ಸಾಫ್ಟ್‌ಕಾರ್ನರ್‌ ಹಾಗೂ ರಾಜತಾಂತ್ರಿಕ ಮೇಲುಗೈ ಸಾಧನೆಗೆ ವಿಶ್ವದ ಅನೇಕ ದೇಶಗಳಲ್ಲಿ ಸಮಾನಾಂತರ ಮಾರ್ಗವನ್ನು ಪಿಆರ್‌ಸಿ ಕಂಡುಕೊಂಡಿದೆ. ಅಂತಹ "ಫ್ರೆಂಡ್‌ಷಿಪ್ ಅಸೋಸಿಯೇಷನ್‌"ಗಳ ಕುರಿತು ಈ ತನಿಖಾ ವರದಿ.


ಚೀನಾ ಸ್ನೇಹ ಜಾಲ

"ಈಚೆಗೆ 1962 ರಲ್ಲಿ ಚೀನಾ ನಮ್ಮ ದೇಶದ ಮೇಲೆ ಆಕ್ರಮಣ ಮಾಡಿ ‘ದಾಗಲೂ ಪೀಕಿಂಗ್‌ವಾದಿ ಕಮ್ಯುನಿಸ್ಟರು ಅದನ್ನು ಆಕ್ರಮಣ ಎಂದು ಕರೆಯಲು ಸಿದ್ಧರಾಗಲಿಲ್ಲ. ಬದಲಾಗಿ, ಭಾರತವೇ ಚೀನದ ಭೂಭಾಗಗಳನ್ನು ಆಕ್ರಮಿಸಿದೆ ಎಂದು ಆಪಾದಿಸಿದರು. ಸರಕಾರವು ಭದ್ರತಾ ಕ್ರಮವಾಗಿ ಕೆಲವು ಪ್ರಮುಖ ಪೀಕಿಂಗ್‌ವಾದಿ ಪಿತೂರಿಗಾರ ಕಮ್ಯುನಿಸ್ಟರನ್ನು ಬಂಧಿಸಿದೊಡನೆ ಇಡೀ ಕಮ್ಯುನಿಸ್ಟ್ ಲೋಕವೆಲ್ಲ - ಎಡ, ಬಲ, ಮಧ್ಯ ಎಲ್ಲ’ಒಂದೇ ಸಮನೆ ಬೊಬ್ಬೆ ಇಟ್ಟವು. ರಷ್ಯದ ʼಪ್ರಾವ್ಡಾ’ ಭಾರತ ಸರ್ಕಾರದ ಕ್ರಮವನ್ನು ಉಗ್ರವಾಗಿ ಟೀಕಿಸಿತು. ಭಾರತ ಸರ್ಕಾರವೂ ಅದಕ್ಕೆ ಮಣಿದು -ಕೂಡಲೇ ಅವರೆಲ್ಲರನ್ನೂ ಬಿಡುಗಡೆ ಮಾಡಿತು..."

"ಇದುವರೆಗಿನ ಮಿಕ್ಕೆಲ್ಲ ಆಕ್ರಮಣಕಾರಿಗಳಿಗಿಂತ ರಷ್ಯ-ಚೀನ ಆಕ್ರಮಣದ ಈ ಸ್ವರೂಪವು ಸಾವಿರ ಪಾಲು ಘಾತಕರವಾಗಿದೆ. ಏಕೆಂದರೆ ಈ ಆಕ್ರಮಣವನ್ನು ಆಕ್ರಮಣವೆಂದೇ ಭಾವಿಸದೆ ಅದನ್ನು ತಾತ್ವಿಕವಾಗಿ ಸ್ವಾಗತಿಸುವ ಗುಂಪು ಒಂದೊಂದು ದೇಶದಲ್ಲಿ ತಯಾರಾಗುತ್ತದೆ. ಇದು ವರೆಗಿನ ಅನ್ಯಾನ್ಯ ಆಕ್ರಮಕರು ಪರದೇಶದವರಾಗಿದ್ದು, ಅವರೇ ನೇರವಾಗಿ ಬಂದು ತಮ್ಮ ರಾಜ್ಯ ಚಲಾಯಿಸುತ್ತಿದ್ದುದರಿಂದ ಅವರನ್ನು ಶತ್ರುಗಳೆಂದು ಗುರುತಿಸಲು ಅಲ್ಲಿನ ಜನಕ್ಕೆ ಸಾಧ್ಯವಾಗುತ್ತಿತ್ತು. ಕಮ್ಯುನಿಸ್ಟರಾದರೋ ಆಯಾ ದೇಶದವರೇ ಆಗಿರುವ ಕಾರಣ, ಅವರ ನಿಜವಾದ ಬಣ್ಣ ಗೊತ್ತಾಗುವುದು ಸಾಮಾನ್ಯ ಜನಕ್ಕೆ ಕಷ್ಟವಾಗುತ್ತದೆ..."

ಇವು ಕರ್ನಾಟಕದ ಪ್ರಮುಖ ಚಿಂತಕರಲ್ಲೊಬ್ಬರಾದ ಹೊ.ವೆ. ಶೇಷಾದ್ರಿ ಅವರು ತಮ್ಮ ಕ್ರಾಂತಿಯಲ್ಲ, ಭ್ರಾಂತಿ(1970) ಕೃತಿಯಲ್ಲಿ ಕಮ್ಯುನಿಸ್ಟ್ ಕುರಿತು ಹೇಳುವ ಮಾತುಗಳು.

ಇನ್ನೊಂದೆಡೆ ಚಿಂತಕ ದೀನದಯಾಳ್ ಉಪಾಧ್ಯಾಯ ಅವರು ದೇಶದ ಪ್ರಥಮ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರೂ ಅವರ ಬಗ್ಗೆ ಹೀಗೆ ಬರೆಯುತ್ತಾರೆ. "ದೇಶದಲ್ಲಿ ಕಮ್ಯುನಿಸ್ಟ್ ಶಕ್ತಿಗೆ ನೆರವಾಗುತ್ತಿರುವ ಅತ್ಯಂತ ಹೆಚ್ಚಿನ ಒಂದೇ ಒಂದು ಸಹಕಾರೀ ಅಂಶವೆಂದರೆ ಪ್ರಧಾನ ಮಂತ್ರಿಯವರು ಅದರ ಬಗೆಗೆ ತಳೆದಿರುವ ಮೃದುಧೋರಣೆ, ಕಮ್ಯುನಿಸಮ್ ಸರಿಯಾದದ್ದೇ ಆಗಿದೆ. ಆದರೆ ಭಾರತದ ಕಮ್ಯುನಿಸ್ಟರು ಮಾತ್ರ ಕೆಟ್ಟವರೆಂಬ ಅವರ ಸಿದ್ಧಾಂತವು ದೇಶದಲ್ಲಿ ಕಮ್ಯುನಿಸಮ್ ಅನ್ನು ಗೌರವಾರ್ಹವನ್ನಾಗಿ ಮಾಡಿದೆ. ಅವರು ಮತ್ತು ಕಾಂಗ್ರೆಸ್ಸಿನ ಇತರ ಅವರ ಸಹ ಪ್ರಯಾಣಿಕರು ಸಿಪಿಐನ ನಿಜವಾದ ಶಕ್ತಿಯಾಗಿದ್ದಾರೆ. (ಪಂಡಿತ್ ದೀನದಯಾಳ ಉಪಾಧ್ಯಾಯ ಅವರ ಸಮಗ್ರ ಬರೆಹಗಳು- ಸಂಪುಟ 8- ಪುಟ76)".

ಭಾರತದ ರಾಜಕಾರಣ ಹಾಗೂ ಯುದ್ಧದ ಮೇಲೆ ಚೀನಾ ಪ್ರಭಾವದ ಕುರಿತು ರಾಷ್ಟ್ರೀಯ ಮಟ್ಟದ ಅನೇಕ ಚಿಂತಕರು ಈ ಮೇಲಿನಂತೆ ಗಮನ ಸೆಳೆದಿದ್ದಾರೆ. ಚೀನಾ ಎಂದೊಡನೆ ಪ್ರಮುಖವಾಗಿ ಅಲ್ಲಿನ ಕಮ್ಯುನಿಸ್ಟ್ ಪಕ್ಷದ ಸರ್ಕಾರದ ಮೇಲೆ ಸಹಜವಾಗಿ ದೃಷ್ಟಿ ಹರಿಯುತ್ತದೆ. ಎರಡನೆಯದು, 1962ರಲ್ಲಿ ಭಾರತದ ವಿರುದ್ಧ ಚೀನಾ ಯುದ್ಧ ಸಾರಿದಾಗ ನಮ್ಮ ನಾಯಕರು(ಪ್ರಧಾನಿ ನೆಹರೂ) ಸರಿಯಾಗಿ ನಿಭಾಯಿಸದೆ ತಲೆತಗ್ಗಿಸುವಂತಹ ಸೋಲನುಭವಿಸಬೇಕಾಯಿತು ಎಂಬುದು. ಮೂರನೆಯದು, ನಮ್ಮ ದೇಶದಲ್ಲಿರುವ ಕಮ್ಯುನಿಸ್ಟರು ಭಾರತದ ಸಂವಿಧಾನಕ್ಕೆ ಬದ್ಧವಾಗಿರದೆ ಚೀನಾ ಪರ ವಾಲುತ್ತಾರೆ ಎನ್ನುವುದು. ನಾಲ್ಕನೆಯದು, ಇತ್ತೀಚಿನ ದಶಕಗಳಲ್ಲಿ ಚೀನಾ ತನ್ನ ಅಗ್ಗದ ಸರಕನ್ನು ಭಾರತದಲ್ಲಿ ಡಂಪಿಂಗ್ ಮಾಡುತ್ತ ದೇಶಿ ಮಾರುಕಟ್ಟೆಯನ್ನು ಕಸಿದುಕೊಳ್ಳುತ್ತಿದೆ ಎಂಬುದು. ರಾಷ್ಟ್ರೀಯ ವಿಚಾರಧಾರೆಯ ಸಾಕಷ್ಟು ಚರ್ಚೆಗಳಲ್ಲಿ ಈ ವಿಚಾರಗಳು ವಿಸ್ತೃತವಾಗಿ ಬಹಿರಂಗಗೊಂಡಿವೆ. ಆದರೆ ಹೆಚ್ಚು ಪ್ರಚಲಿತವಿಲ್ಲದ ಅಂಶವೆಂದರೆ ಸದ್ಯ ಚೀನಾದಲ್ಲಿ ಅಧಿಕಾರದಲ್ಲಿರುವ ಕಮ್ಯುನಿಸ್ಟ್ ಪಾರ್ಟಿ ಆಫ್ ಚೀನಾ ನಿಯಂತ್ರಣದಲ್ಲಿರುವ ಪೀಪಲ್ಸ್ ರಿಪಬ್ಲಿಕ್ ಆಫ್ ಚೈನಾ(ಪಿಆರ್‌ಸಿ) ಎಂಬ ಆಡಳಿತವು ಸರ್ಕಾರ ಭಾರತ ಸೇರಿದಂತೆ ವಿವಿಧ ದೇಶಗಳ ಜನರಲ್ಲಿ ತನ್ನ ಪರ ಮೃದು ಧೋರಣೆ ತಳೆಯಲು ಬಳಸುವ ತಂತ್ರಗಳು.


ಫ್ರೆಂಡ್‌ಷಿಪ್ ಅಸೋಸಿಯೇಷನ್‌ಗಳು

ಚೀನಾ ಗಣತಂತ್ರವನ್ನು ಸೋಲಿಸಿದ ನಂತರ 1949ರಿಂದ ‘ಪೀಪಲ್ಸ್ ರಿಪಬ್ಲಿಕ್ ಆಫ್ ಚೈನಾ(ಪಿಆರ್‌ಸಿ)’ ಹೆಸರಲ್ಲಿ ಆಡಳಿತ ನಡೆಸುತ್ತಿರುವ ಚೀನಾ ಕಮ್ಯುನಿಸ್ಟ್ ಪಕ್ಷ ಪ್ರಾರಂಭದಲ್ಲಿ ಐಡೆಂಟಿಟಿ ಪಡೆಯಬೇಕಿತ್ತು. ಹಾಂಗ್‌ಕಾಂಗ್, ಟಿಬೆಟ್, ತೈವಾನ್ ಸೇರಿ ಅನೇಕ ಭೂಭಾಗದ ಜನರು ಪಿಆರ್‌ಸಿ ವಿರುದ್ಧ ಹೋರಾಟ ನಡೆಸುತ್ತಿದ್ದವು. ಈಗಾಗಲೆ ವಿಶ್ವಮಾನ್ಯತೆ ಪಡೆದ ದೇಶಗಳು ಪಿಆರ್‌ಸಿಯನ್ನು ತನ್ನ ಅಧಿಕೃತ ಸಂಪರ್ಕದ ಕೊಂಡಿಯಾಗಿ, ಅಂದರೆ ಒಂದು ದೇಶದ ಆಡಳಿತ ಎಂದು ಗುರುತಿಸಬೇಕಿತ್ತು.

Formation of Sino -India Friendship Association in may 16, 1952
1952ರ ಮೇ 16ರಂದು ಚೀನಾ-ಭಾರತ ಫ್ರೆಂಡ್‌ಷಿಪ್‌
ಅಸೋಸಿಯೇಷನ್‌ ಉದ್ಘಾಟನೆ.

ಈಗಾಗಲೆ ಅನೇಕರು ತಿಳಿಸಿರುವಂತೆ ಪಿಆರ್‌ಸಿ ಕುರಿತು ಅಂದಿನ ಭಾರತದ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರೂ ಅವರಿಗೆ ಅಭಿಮಾನ. ಪಿಆರ್‌ಸಿಯನ್ನು ಒಂದು ದೇಶವಾಗಿ ಅನೇಕ ದೇಶಗಳಿಗೂ ಮೊದಲೇ ಗುರುತಿಸಿದರು. ಆದರೆ ಚೀನಾದ ಆಡಳಿತ, ನೆಹರೂ ತಿಳಿದಷ್ಟು ಪಾರದರ್ಶಕವಾಗಿರಲಿಲ್ಲ. ವಿಸ್ತಾರ ಮನೋಭಾವ ಹೊಂದಿದ್ದ ಚೀನಾ ಕಮ್ಯುನಿಸ್ಟ್ ಪಕ್ಷಕ್ಕೆ, ದೇಶವಿದೇಶಗಳ ಗೌಪ್ಯ ಮಾಹಿತಿ ಸಂಗ್ರಹಿಸಿ ನೀಡಲು ಯುನೈಟೆಡ್ ಫ್ರಂಟ್ ವರ್ಕ್ ಡಿಪಾರ್ಟ್‌ಮೆಂಟ್ ಸ್ಥಾಪನೆ ಮಾಡಿಕೊಂಡಿತು. ವಿವಿಧ ದೇಶಗಳಲ್ಲಿ ಪಿಆರ್‌ಸಿ ಕುರಿತು ಮೃದು ಧೋರಣೆ ತಳೆಯುವಂತೆ ಮಾಡಲು ಹಾಗೂ ಕಾಲಕ್ರಮೇಣ ಅಲ್ಲಿನ ಸಂಸ್ಕೃತಿ, ರಾಜಕೀಯ ಪ್ರಭುತ್ವವನ್ನು ಆಕ್ರಮಿಸಲು ಚೈನೀಸ್ ಪೀಪಲ್ಸ್ ಅಸೋಸಿಯೇಷನ್ ಫಾರ್ ಫ್ರೆಂಡ್‌ಷಿಪ್ ವಿತ್ ಫಾರಿನ್ ಕಂಟ್ರೀಸ್(ಸಿಪಿಎಎಫ್‌ಎಫ್‌ಸಿ) ಸ್ಥಾಪಿಸಿತು. ಸಿಪಿಎಎಫ್‌ಎಫ್‌ಸಿ ಮೂಲಕ ಭಾರತದಲ್ಲಿ ಐಸಿಎಫ್‌ಎ ಸೇರಿದಂತೆ 40 ದೇಶಗಳಲ್ಲಿ ಫ್ರೆಂಡ್‌ಷಿಪ್ ಅಸೋಸಿಯೇಷನ್‌ಗಳನ್ನು ಸ್ಥಾಪಿಸಿದೆ.

ಅನೇಕ ವಿದೇಶಾಂಗ ತಜ್ಞರು ಹೇಳಿರುವಂತೆ, ಸಿಪಿಎಎಫ್‌ಎಫ್‌ಸಿ ಎಂಬುದು ಯುನೈಟೆಡ್ ಫ್ರಂಟ್ ವರ್ಕ್ ಡಿಪಾರ್ಟ್‌ಮೆಂಟ್‌ನ ಮುಖವಾಡ. ಆದರೆ ವಿದ್ಯಾರ್ಥಿಗಳಿಗೆ ಶಿಕ್ಷಣದ ಅವಕಾಶ, ಚೀನಾದ ಕೃಷಿ-ಕೈಗಾರಿಕೆ ಕುರಿತು ಪ್ರಾತ್ಯಕ್ಷಿಕೆ, ಪ್ರವಾಸ ಉತ್ತೇಜನದ ಹೆಸರಿನಲ್ಲಿ ನಡೆಸುತ್ತಿರುವ ಐಸಿಎಫ್‌ಎ ಹಿನ್ನೆಲೆ ಬಹುತೇಕರಿಗೆ ತಿಳಿದಿಲ್ಲ. 1962ರಲ್ಲಿ ಚೀನಾ ಜತೆಗೆ ಯುದ್ಧ ನಡೆದಾಗ ಐಸಿಎಫ್‌ಎ ರದ್ದುಪಡಿಸಲಾಗಿತ್ತು. ಮತ್ತೆ 1992ರಿಂದ ಚಾಲನೆ ನೀಡಲಾಗಿದ್ದು, ಕರ್ನಾಟಕ ಸೇರಿ ಅನೇಕ ರಾಜ್ಯಗಳಲ್ಲಿ ಇದರ ಶಾಖೆಗಳಿವೆ.


ಭಾರತದಲ್ಲಿ ಹೆಚ್ಚಿದ ಮೃದು ಧೋರಣೆ

ದೇಶದಲ್ಲಿ ಐಸಿಎಫ್‌ಎ ಸ್ಥಾಪನೆಯಾದಾಗ ಅದರ ಮೊದಲ ಪ್ರಧಾನ ಕಾರ್ಯದರ್ಶಿ ಆದವರು ಕಲ್ಕತ್ತಾ ವಿವಿಯ ಚೀನಾ ಇತಿಹಾಸ ಪ್ರೊಫೆಸರ್ ತ್ರಿಪುರಾರಿ ಚಕ್ರವರ್ತಿ. ಬಹುತೇಕ ಕಮ್ಯುನಿಸ್ಟ್ ಚಿಂತಕರು ಹಾಗೂ ದೇಶದ ಘಟಾನುಘಟಿ ಚಿಂತಕರ ಗುಂಪನ್ನು ಚೀನಾ ಪ್ರವಾಸಕ್ಕೆ ಕರೆದೊಯ್ಯಲಾಯಿತು. ಈ ನಂತರದಲ್ಲಿ ಇಂಗ್ಲಿಷ್ ಹಾಗೂ ಭಾರತೀಯ ಭಾಷೆಗಳಿಗೆ ಮಾವೋ ತ್ಸೆ ತುಂಗ್ ಕೃತಿಗಳು ದೊಡ್ಡ ಪ್ರಮಾಣದಲ್ಲಿ ಅನುವಾದಗೊಂಡವು. ಕರ್ನಾಟಕ ಸೇರಿದಂತೆ ದೇಶದ ವಿವಿಧ ರಾಜ್ಯಗಳಲ್ಲಿ ಐಸಿಎಫ್‌ಎ ಶಾಖೆಗಳನ್ನು ಸ್ಥಾಪಿಸಲಾಯಿತು. ಮೇ ಡೇ ಆಚರಣೆಗೆ ದೇಶದ ಕಾರ್ಮಿಕ ಸಂಘಟನೆಗಳ ಪ್ರತಿನಿಧಿಗಳು, ಪ್ರಧಾನಿ ನೆಹರೂ ಸಹೋದರಿ ವಿಜಯಲಕ್ಷ್ಮೀ ಪಂಡಿತ್ ನೇತೃತ್ವದ ಸರ್ಕಾರಿ ನಿಯೋಗ ಸೇರಿ ಅನೇಕರು ತಂಡೋಪತಂಡಗಳಲ್ಲಿ ಚೀನಾ ಪ್ರವಾಸ ನಡೆಸಿ ಈ ಕುರಿತು ಭಾರತದಲ್ಲಿ ಮೃದು ಧೋರಣೆ ಪ್ರಸಾರ ಮಾಡಿದರು.



2001ರಲ್ಲಿ ಚೀನಾ ಪ್ರವಾಸ ಕೈಗೊಂಡಿದ್ದ ಕರ್ನಾಟಕದ ನಿಯೋಗದಲ್ಲಿ ಸಿದ್ದರಾಮಯ್ಯ, ಕಾಗೋಡು ತಿಮ್ಮಪ್ಪ, ಬಿ.ಎಲ್. ಶಂಕರ್, ಮೋಹನ್ ಕೊಂಡಜ್ಜಿ, ಆರ್.ವಿ. ದೇಶಪಾಂಡೆ, ಸಿ. ಭೈರೇಗೌಡ ಮುಂತಾದವರು.

ಸಿಪಿಎಎಫ್‌ಎಫ್‌ಸಿ ಎಂಬುದು ಸುಮ್ಮನೆ ಹಾಡು, ಕುಣಿತಕ್ಕೆ, ಮನರಂಜನೆಗೆ ಸೀಮಿತವಾದ ಸಂಸ್ಥೆಯಲ್ಲ ಎಂಬುದಕ್ಕೆ ಇತ್ತೀಚೆಗೆ ನಡೆದ ಬೆಳವಣಿಗೆಯೇ ಉದಾಹರಣೆ. ಸಿಪಿಎಎಫ್‌ಎಫ್‌ಸಿಯ ಈಗಿನ ಅಧ್ಯಕ್ಷ ಲಿನ್ ಸಾಂಗ್ಟಿಯಾನ್. ಕಳೆದ ವರ್ಷದ ಏಪ್ರಿಲ್‌ವರೆಗೆ ದಕ್ಷಿಣ ಆಫ್ರಿಕಾದಲ್ಲಿ ಚೀನಾ ರಾಯಭಾರಿಯಾಗಿದ್ದ ಲಿನ್ ಸಾಂಗ್ಟಿಯಾನ್, ಇದೀಗ ವಿಶ್ವವನ್ನೇ ಕಾಡುತ್ತಿರುವ ಕರೊನಾ ವೈರಸ್ ಕುರಿತು ಸುದ್ದಿಯಾಗಿದ್ದರು. ಚೀನಾದ ವುಹಾನ್‌ನಲ್ಲಿ ಕರೊನಾ ವೈರಸ್ ಹರಡುವಿಕೆ ಆರಂಭವಾಯಿತು ಎನ್ನುವುದು ಇದೀಗ ಬಹುತೇಕ ಎಲ್ಲರೂ ಒಪ್ಪುವ ಮಾತು. ಆದರೆ ಚೀನಾದಲ್ಲಿ ಈ ಕುರಿತ ಅನೇಕ ಅಂತೆ ಕಂತೆಗಳು ಚಾಲ್ತಿಯಲ್ಲಿವೆ. ವುಹಾನ್‌ಗೆ ಕಳೆದ ವರ್ಷ ಕ್ರೀಡಾಕೂಟಕ್ಕೆ ಆಗಮಿಸಿದ್ದ ಅಮೆರಿಕನ್ನರು ಕರೊನಾ ವೈರಸನ್ನು ಬಿಟ್ಟು ತೆರಳಿದ್ದರು ಎಂಬುದು ಈ ಕಥೆಗಳ ಕೇಂದ್ರಬಿಂದು. ಇದೇ ಕಥೆಯನ್ನು ಜಗತ್ತಿಗೆ ಮಾರಲು ಹೊರಟ ಮೊದಲಿಗರೆಂದರೆ ಚೀನಾ ವಿದೇಶಾಂಗ ಸಚಿವಾಲಯದ ವಕ್ತಾರ ಜಾವ್ ಲಿಜಿಯಾನ್. ಬಹುಶಃ ವುಹಾನ್‌ಗೆ ಚೀನಾ ಸೇನೆಯು ಕರೊನಾ ವೈರಸ್ ಅನ್ನು ಪಸರಿಸಿತು ಎಂದು ಅವರು ತಿಳಿಸಿದ್ದರು. ನಂತರದಲ್ಲಿ ವಿಶ್ವದ ವಿವಿಧ ಭಾಗಗಳಲ್ಲಿ ಈ ಕಥೆ ಮಾರಲು ಸಹಾಯ ಮಾಡಿದವರು ಆ ಸಮಯದಲ್ಲಿ ದಕ್ಷಿಣ ಆಫ್ರಿಕಾದಲ್ಲಿ ಚೀನಾ ರಾಯಭಾರಿಯಾಗಿದ್ದ ಲಿನ್ ಸಾಂಗ್ಟಿಯಾನ್. ಈ ಹೇಳಿಕೆಗಳಿಗೆ ಕೆರಳಿದ್ದ ಅಂದಿನ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಕರೊನಾ ವೈರಸ್ ಅನ್ನು ಚೀನಾ ವೈರಸ್ ಎಂದು ಸಂಬೋಧಿಸಿದರು.

ಇಷ್ಟ ಮಟ್ಟಿಗೆ ಚೀನಾ ಕಮ್ಯುನಿಸ್ಟ್ ಪಕ್ಷದ ನೆಚ್ಚಿನ ಸೇನಾನಿಯಾದ ಲಿನ್ ಸಾಂಗ್ಟಿಯಾನ್‌ರನ್ನು ದಕ್ಷಿಣ ಆಫ್ರಿಕಾದ ರಾಯಭಾರಿ ಸ್ಥಾನದಿಂದ ಮಾರ್ಚ್‌ನಲ್ಲಿ ಇದ್ದಕ್ಕಿದ್ದಂತೆ ಹಿಂಪಡೆಯಲಾಯಿತು. ಒಂದು ವರ್ಷದಿಂದ ದಕ್ಷಿಣ ಆಫ್ರಿಕಾ ದೇಶವು ಚೀನಾದ ಬೀಜಿಂಗ್‌ನಲ್ಲಿ ತನ್ನ ರಾಯಭಾರಿಯನ್ನು ನೇಮಿಸದೆ ಅವಮಾನ ಮಾಡಿದೆ, ಈ ಸಿಟ್ಟಿಗಾಗಿ ದಕ್ಷಿಣ ಆಫ್ರಿಕಾದಿಂದ ತನ್ನ ರಾಯಭಾರಿಯನ್ನು ಕರೆಸಿಕೊಳ್ಳುತ್ತಿದೆ ಎಂದು ಸುದ್ದಿ ಹಬ್ಬಿಸಲಾಯಿತು. ಆದರೆ ಕೆಲವೇ ದಿನಗಳಲ್ಲಿ ಅಸಲಿ ಬಣ್ಣ ಬಯಲಾಯಿತು. ಲಿನ್ ಸಾಂಗ್ಟಿಯಾನ್‌ರನ್ನು ಸಿಪಿಎಎಫ್‌ಎಫ್‌ಸಿ ಅಧ್ಯಕ್ಷರಾಗಿ ನೇಮಕ ಮಾಡಲಾಯಿತು.

ಚೀನಾದ, ಅದಕ್ಕಿಂತಲೂ ಹೆಚ್ಚಾಗಿ ಈಗಿನ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಮಹತ್ವಾಕಾಂಕ್ಷೆಯ ಬೆಲ್ಟ್ ಆಂಡ್ ರೋಡ್ ಇನಿಷಿಯೇಟಿವ್(ಬಿಆರ್‌ಐ) ಯೋಜನೆಯನ್ನು ಸಾಕಾರಗೊಳಿಸಲು ಹಾದಿ ಸುಗಮಗೊಳಿಸುವುದು ಈ ನೇಮಕದ ಉದ್ದೇಶ. ಬಿಆರ್‌ಐ ಬಲವಾದ ಸಮರ್ಥಕರಾದ ಲಿನ್, ಚೀನಾದ ಸಾಧನೆಯನ್ನು ತಡೆಯಲಾಗದವರು ಮಾತ್ರ ಇದನ್ನು ವಿರೋಧಿಸುತ್ತಾರೆ ಎಂದು ಅನೇಕ ಬಾರಿ ಸ್ಪಷ್ಟವಾಗಿ ಹೇಳಿದ್ದಾರೆ. ಈ ಬಿಆರ್‌ಐ ಯೋಜನೆಯು ಭಾರತದ ಸಾರ್ವಭೌಮತೆಗೆ ಧಕ್ಕೆ ಉಂಟು ಮಾಡುತ್ತದೆ ಎಂಬ ಕಾರಣಕ್ಕೆ ಭಾರತ ಈಗಲೂ ವಿರೋಧ ಮಾಡುತ್ತಲೇ ಬಂದಿದೆ. ಆದರೆ ಸ್ನೇಹದ ಕುರಿತ ವೇದಿಕೆಯೊಂದಕ್ಕೆ ಆಕ್ರಮಣಕಾರಿ ಮನೋಭಾವದ ವ್ಯಕ್ತಿಯನ್ನು ಚೀನಾ ನೇಮಕ ಮಾಡಿರುವುದರಿಂದಲೇ ಈ ಸಿಪಿಎಎಫ್‌ಎಫ್‌ಸಿ ಒಟ್ಟಾರೆ ಮನೋಭಾವನೆ ತಿಳಿಯುತ್ತದೆ.



ಅನೇಕ ಸಂದರ್ಭಗಳಲ್ಲಿ ಇಂಡೋ-ಚೀನಾ ರೆಂಡ್‌ಷಿಪ್‌ ಅಸೋಸಿಯೇಷನ್‌ ಕಾರ್ಯಕ್ರಮದಲ್ಲಿ ಭಾಗವಹಿಸಿರುವ ಕರ್ನಾಟಕದ ಪ್ರಮುಖ ರಾಜಕಾರಣಿಗಳು ಹಾಗೂ ಆಹ್ವಾನ ಪತ್ರಿಕೆ.

ದೇಶ ವಿದೇಶಗಳಲ್ಲಿ ಚೀನಾ ಕಮ್ಯುನಿಸ್ಟ್ ಪಕ್ಷದ ಆಡಳಿತಕ್ಕೆ ಅಧಿಕೃತತೆ ಒದಗಿಸಿಕೊಡುವುದು ಈ ಸಂಸ್ಥೆಯ ಉದ್ದೇಶ. ಆಯಾ ದೇಶದ ಪ್ರಮುಖ ರಾಜಕೀಯ, ಸಾಂಸ್ಕೃತಿಕ ನಾಯಕರ ಗಮನ ಸೆಳೆಯುವುದು. ಉಚಿತವಾಗಿ ಕ್ಯುರೇಟೆಡ್ ಚೀನಾ ಪ್ರವಾಸ ಆಯೋಜಿಸುವುದು. ಕಮ್ಯುನಿಸ್ಟ್ ಪಕ್ಷದ ಸರ್ಕಾರದ ಆಡಳಿತದಲ್ಲಿನ ದಕ್ಷತೆ, ಶಿಸ್ತು, ಅದರಿಂದ ದೇಶದ ಕೃಷಿ, ಕೈಗಾರಿಕೆ, ಶಿಕ್ಷಣ ವ್ಯವಸ್ಥೆಯಲ್ಲಿ ಉಂಟಾಗಿರುವ ಅಗಾಧ ಸುಧಾರಣೆಗಳನ್ನು ಪ್ರವಾಸಿಗರ ಮನಸ್ಸಿನಲ್ಲಿ ಬಿತ್ತುವುದು. ಭಾರತದಲ್ಲಿ ಫ್ರೆಂಡ್‌ಷಿಪ್ ಅಸೋಸಿಯೇಷನ್‌ಗಳ ಮೂಲಕ ಕಾರ್ಯಕ್ರಮಗಳನ್ನು ಆಯೋಜಿಸಿ ಭಾರತ-ಚೀನ ಪಾರಂಪರಿಕ ಸಾಂಸ್ಕೃತಿಕ ಸಂಬಂಧಗಳ ಬಗ್ಗೆ ಹೊಗಳುವುದು ಇದರ ಉದ್ದೇಶ. ಅಷ್ಟಕ್ಕೂ ಪ್ರಾಚೀನ ಚೀನ ಹಾಗೂ ಭಾರತದ ಸಂಸ್ಕೃತಿಯ ನಡುವೆ ಅನೇಕ ಸಾಮ್ಯತೆಗಳಿವೆ. ಆದರೆ ಈಗ 7 ದಶಕದಿಂದ ಚೀನಾದಲ್ಲಿ ಅಧಿಕಾರದಲ್ಲಿರುವ ಪಕ್ಷಕ್ಕೂ ಆ ಸಂಸ್ಕೃತಿಗೂ ಸಂಬಂಧವಿಲ್ಲ ಎಂಬುದು ಮೇಲ್ನೋಟಕ್ಕೆ ತಿಳಿಯುವುದಿಲ್ಲ.


ಇಂತಹ ಪ್ರವಾಸ ಆಯೋಜನೆಯ ಬಲೆಗೆ ಭಾರತದ, ಅದರಲ್ಲೂ ಕರ್ನಾಟಕದ ರಾಜಕಾರಣಿಗಳೂ ಬಿದ್ದಿದ್ದಾರೆ. 2001ರಲ್ಲಿ ಈ ರೀತಿಯ ಕರ್ನಾಟಕದ ನಿಯೋಗದಲ್ಲಿ ಸಿದ್ದರಾಮಯ್ಯ, ಕಾಗೋಡು ತಿಮ್ಮಪ್ಪ, ಬಿ.ಎಲ್. ಶಂಕರ್, ಮೋಹನ್ ಕೊಂಡಜ್ಜಿ, ಆರ್.ವಿ. ದೇಶಪಾಂಡೆ, ಸಿ. ಭೈರೇಗೌಡ ಮುಂತಾದವರು ತೆರಳಿದ್ದರು. ಇದೀಗ ಅಖಿಲ ಭಾರತ ಪಟ್ಟದ ಐಸಿಎಎಫ್‌ಗೆ ಕರ್ನಾಟಕದವರೇ ಆದ ಹಿರಿಯ ರಾಜಕಾರಣಿ ಪಿ.ಜಿ.ಆರ್. ಸಿಂಧ್ಯಾ ಅಧ್ಯಕ್ಷರು. ಕರ್ನಾಟಕ ಶಾಖೆಗೆ ಕೋಲಾರ ಶಾಸಕ ಕೆ. ಶ್ರೀನಿವಾಸ ಗೌಡ ಅಧ್ಯಕ್ಷರು, ವಿ. ಭಾಸ್ಕರನ್ ಪ್ರಧಾನ ಕಾರ್ಯದರ್ಶಿ. 2020ರ ಜ.19ಕ್ಕೆ ಕ್ಯಾಪಿಟಲ್ ಹೋಟೆಲ್‌ನಲ್ಲಿ ಐಸಿಎಫ್‌ಎನ 70ನೇ ವರ್ಷದ ಕಾರ್ಯಕ್ರಮ ನಡೆಯಿತು. ಭಾರತಲ್ಲಿರುವ ಚೀನಾ ರಾಯಭಾರಿ ಸನ್ ವೀಡಾಂಗ್ ಸೇರಿ ಅನೇಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಚೀನಾವನ್ನು ಹಾಡಿ ಹೊಗಳಿದ್ದರು.

ಈ ಹಿಂದೆ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು, ಮಾಜಿ ಮಂತ್ರಿ ಎಂ.ವಿ. ರಾಜಶೇಖರನ್ ಅವರು ಸೇರಿ ದೇಶದ ಗಣ್ಯ ರಾಜಕಾರಣಿಗಳನ್ನು ಈ ಕಾರ್ಯಕ್ರಮಗಳಿಗೆ ಆಹ್ವಾನಿಸಿ ಚೀನಾ-ಭಾರತ ಸಂಬಂಧಗಳ ಬಗ್ಗೆ ಮೃದುಧೋರಣೆ ಮೂಡಿಸುವ ಕೆಲಸ ಆಗಿದೆ. ಇದೇ ಮುಂದುವರಿದ ಭಾಗವಾಗಿ ಕರ್ನಾಟಕದಲ್ಲಿ 2004ರಲ್ಲಿ ನಡೆದ ಐಸಿಎಫ್‌ಎ ಕಾರ್ಯಕ್ರಮದಲ್ಲಿ ಮಾತನಾಡಿದ್ದ ರಾಜ್ಯದ ಹಿರಿಯ ರಾಜಕಾರಣಿ ಹಾಗೂ ಅಂದಿನ ಕೇಂದ್ರ ಸಚಿವ ದಿವಂಗತ ಎಂ.ವಿ. ರಾಜಶೇಖರನ್ ಅವರು, ಚೀನಾದ ಇತ್ತೀಚಿನ ಭೇಟಿಯಿಂದ ತಮ್ಮ ಮೇಲೆ ಬೀರಿದ್ದ ಪ್ರಭಾವವನ್ನು ವರ್ಣಿಸಿದ್ದರು. ಇದೇ ಕಾರ್ಯಕ್ರಮದಲ್ಲಿ ಹಿರಿಯ ರಾಜಕಾರಣಿ ಕಾಗೋಡು ತಿಮ್ಮಪ್ಪ, ಸ್ಪೀಕರ್ ಕೃಷ್ಣ ಸಹ ಭಾಗವಹಿಸಿದ್ದರು. ಇಂತಹ ಬಹುತೇಕ ಕಾರ್ಯಕ್ರಮಗಳಿಗೆ ಭಾರತದಲ್ಲಿರುವ ಚೀನಾ ರಾಯಭಾರಿ ಆಗಮಿಸುತ್ತಾರೆ, ಚೀನಾದ ಸಾಧನೆಗಳನ್ನು ವಿವರಿಸುತ್ತಾರೆ. ಇದರಿಂದಾಗಿಯೇ, ಭಾರತದಲ್ಲಿ ಪಾಕಿಸ್ತಾನದ ವಿರುದ್ಧ ವ್ಯಕ್ತವಾದಷ್ಟು ಧೋರಣೆಗಳು ಚೀನಾ ವಿರುದ್ಧ ಆಗುವುದೇ ಇಲ್ಲ. ಹಾಗೆಂದು ಈ ಸಂಘಟನೆ ಜತೆಗೆ ಗುರುತಿಸಿಕೊಂಡ ಮೇಲಿನ ಯಾವುದೇ ರಾಜಕೀಯ ನಾಯಕರ ದೇಶಭಕ್ತಿ ಪ್ರಶ್ನಿಸುವುದು ಇಲ್ಲಿನ ಉದ್ದೇಶವಲ್ಲ. ಅವರಿಗೇ ಅರಿವಿಲ್ಲದಂತೆ ಚೀನಾ ಯಾವ ರೀತಿ ತನ್ನ ಕೆಲಸವನ್ನು ಮಾಡಿಕೊಳ್ಳುತ್ತಿದೆ ಎಂಬುದನ್ನು ಗಮನಿಸಬೇಕು.

ನೇರವಾಗಿ ಕಮ್ಯುನಿಸ್ಟರ ಜತೆಗೆ ಗುರುತಿಸಿಕೊಂಡವರು 1962ರ ಯುದ್ಧದಲ್ಲಿ ಭಾರತದ ಸೇನೆಯನ್ನೇ ಟೀಕಿಸಿದ್ದರು. ಆದರೆ ಇದೀಗ ಚೀನಾದ ಈ ಸ್ನೇಹ ಜಾಲಕ್ಕೆ ಸಿಲುಕುವ ಅನೇಕ ನೀತಿ ನಿರೂಪಕರು ಚೀನಾ ವಿರುದ್ಧ ಮಾತನಾಡದೆ ಮೌನಕ್ಕೆ ಶರಣಾಗುತ್ತಾರೆ. ಅಷ್ಟರ ಮಟ್ಟಿಗೆ ಚೀನಾ ಗೆದ್ದಂತೆ. ದೇಶದೊಳಗಿನವರ ಮನಸ್ಸಿನಲ್ಲಿ ತನ್ನ ಪರ ಧೋರಣೆಯನ್ನು ಬಿತ್ತಿ ಬಿಆರ್‌ಐನಂತಹ ಭಾರತ ವಿರೋಧಿ ಯೋಜನೆಯನ್ನು ಸಲೀಸಾಗಿ ಜಾರಿಗೊಳಿಸುವುದು ಚೀನಾದ ಉದ್ದೇಶ. ಭವಿಷ್ಯದಲ್ಲಿ ಬಿಆರ್‌ಐ ಕುರಿತ ಚರ್ಚೆ ಸಂಸತ್ತಿನಲ್ಲೊ, ಸಾರ್ವಜನಿಕ ವಲಯದಲ್ಲೊ ಬಂದರೆ ಈ ಮೃದುಧೋರಣೆ ಹೊಂದಿರುವ ನಾಯಕರು ಚೀನಾ ಸಹಾಯಕ್ಕೆ ಬಂದೇ ಬರುತ್ತಾರೆ ಎಂಬ ನಂಬಿಕೆ ಆ ದೇಶದ್ದು.


(ವರದಿಯನ್ನು ಬೇರೆಡೆ ಬಳಸಬಹುದು. ಪೂರ್ಣ ಪ್ರಮಾಣದಲ್ಲಿ ಅಥವಾ ಭಾಗಶಃ ಬಳಸಿಕೊಂಡರೆ ಮೂಲ ಲೇಖಕರ ಹಾಗೂ ಬ್ಲಾಗ್‌ ವಿಳಾಸವನ್ನು ನಮೂದಿಸುವಂತೆ ಮನವಿ

ಶುಕ್ರವಾರ, ಅಕ್ಟೋಬರ್ 02, 2020

ಇತಿಹಾಸದ ಪುಟಗಳಿಗೆ ಮರಳಲು ಬಯಸುವವರಿಗೆ 'ಬಿಜೆಪಿ 25+1' ಕೃತಿ ದಾರಿದೀಪ! - ಮೇಜರ್ ಡಾ. ಕುಶ್ವಂತ್ ಕೋಳಿಬೈಲು ಅವರ ವಿಮರ್ಶೆ

 ರಮೇಶ ದೊಡ್ಡಪುರರು ಬರೆದ BJP 25 + 1 ಪುಸ್ತಕವನ್ನು ಸುಮಾರು ಒಂದು ವಾರದ ಕೆಳಗೆ ಓದಿ ಕೆಳಗಿಟ್ಟಿದ್ದೆ. ನಿನ್ನೆಯ ದಿನ ಅವರ ಜೊತೆ ಮಾತನಾಡಿದ ನಂತರ ( ಆಫ್ ದಿ ರೆಕಾರ್ಡ್ !!)  ಪುಸ್ತಕದ ಬಗ್ಗೆ ಒಂದಷ್ಟು ಬರೆಯಬೇಕೆನಿಸಿತು.ಸಮಕಾಲೀನ ರಾಜಕೀಯ ಬೆಳವಣಿಗೆಗಳ ವಿಶ್ಲೇಷಣೆಯಿರುವ ಈ ಪುಸ್ತಕ ರಾಜ್ಯದ ಕಳೆದ ದಶಕದ ರಾಜಕೀಯ ಬೆಳವಣಿಗೆಗಳ ಅನೇಕ ಸೂಕ್ಷ್ಮ ವಿಚಾರಗಳ ಮೇಲೆ ಬೆಳಕು ಚೆಲ್ಲಿದೆ. ಅಂತರಾಷ್ಟ್ರೀಯ ಮತ್ತು ರಾಷ್ಟ್ರೀಯ ರಾಜಕೀಯ ಮತ್ತು ಸಾಮಾಜಿಕ ಬೆಳವಣಿಗೆಗಳ ಬಗ್ಗೆ ಓದಿ ತಿಳಿಯುವ ಚಟವಿರುವ ನಾನು ಲೇಖಕರು  ಈ ಪುಸ್ತಕದಲ್ಲಿ ಸರಳ ರೀತಿಯಲ್ಲಿ ಅನೇಕ ಕುತೂಹಲಕಾರಿ ವಿಚಾರಗಳನ್ನು ಹೇಳಿದನ್ನು ಓದಿ ಅನುಭವಿಸಿದ್ದೇನೆ. ಸೋಜಿಗದ ಸಂಗತಿಯೆಂದರೆ ಅನೇಕ ಸೂಕ್ಷ್ಮ ವಿಚಾರಗಳನ್ನು ಅವರು ಬರೆಯದೆ ನಮ್ಮ ಗ್ರಹಿಕೆಗೆ ಬಿಟ್ಟುಬಿಟ್ಟಿದ್ದಾರೆ (ಉದಾಹರಣೆಗೆ - Why did not Bjp get a clear mandate in 2018 Vidhanasabha polls)

Click here to Purchase Book

ಆ ವಿಷಯಕ್ಕೆ ಆಮೇಲೆ ಬರುತ್ತೇನೆ..
ಮೊದಲಿಗೆ ಲೇಖಕರಿಗೆ ಶುಭಾಶಯಗಳನ್ನು ತಿಳಿಸಬೇಕಿದೆ.ಈ ಮಾದರಿಯ ಪುಸ್ತಕಗಳ ಆಯಾ ಕಾಲಘಟ್ಟದ ರಾಜಕೀಯ ಬೆಳವಣಿಗೆಗಳನ್ನು ದಾಖಲಿಸುವ ಮಹತ್ವದ ಕೆಲಸವನ್ನು ಮಾಡುತ್ತವೆ. ಕನ್ನಡದ ಪತ್ರಿಕೋದ್ಯಮ ವೈಬ್ರೆಂಟ್ ಮತ್ತು ಶಕ್ತಿಶಾಲಿಯಾಗಿದ್ದ ಕಾಲವೂ ಇತ್ತು. ಗುಂಡೂರಾಯರ ಸರಕಾರವನ್ನು ಅಲ್ಲಾಡಿಸುವಲ್ಲಿ ಲಂಕೇಶ್ ಪತ್ರಿಕೆ ಪ್ರಮುಖ ಪಾತ್ರವಹಿಸಿದಂತೆ. ಆದರೆ ಸಮಕಾಲೀನ ರಾಜಕೀಯ ವಿದ್ಯಮಾನಗಳ ಬಗೆಗೆ ಪುಸ್ತಕಗಳು ಕನ್ನಡದಲ್ಲಿ ಕಡಿಮೆ (ನನಗೆ ತಿಳಿದ ಮಟ್ಟಿಗೆ). ಹಾಗಾಗಿ ಈ ಪುಸ್ತಕ ಮುಂದಿನ ದಿನಗಳಲ್ಲಿ ಇತಿಹಾಸದ ಪುಟಗಳಿಗೆ ಮರಳಲು ಬಯಸುವವರಿಗೆ ದಾರಿದೀಪ!!
ಆಯಾ ಕಾಲಘಟ್ಟದ ಸಾಮಾಜಿಕ ಮತ್ತು ರಾಜಕೀಯ ವಿದ್ಯಮಾನಗಳನ್ನು ನಾನು ಈಗಿನ ತನಕ ಗ್ರಹಿಸಿಕೊಂಡದ್ದು ಆಗಿನ ಸಮಕಾಲೀನ‌ ನಾಯಕರ ಆತ್ಮಕಥೆಗಳ ಮೂಲಕ. ಆತ್ಮಕಥೆಗಳು ಅನೇಕ ಬಾರಿ ವಾಸ್ತವತೆಯಿಂದ ದೂರ ಸರಿದು ಸ್ವಪ್ರಶಂಸೆಗೆ ಸೀಮಿತವಾಗಿತ್ತದೆ ಮತ್ತು biased ಇರುವ ಸಂಭವವೂ ಇರುತ್ತದೆ. ಲೇಖಕರು Pro BJP ಪರವಾಗಿ / ಅಥವಾ ಬಲಪಂಥೀಯ ಸಿದ್ಧಾಂತದ ಪರವಾಗಿ  biased ಅಂತ ಅನಿಸದಿದ್ದರೂ ಒಂದಷ್ಟು ಸಾಫ್ಟನೆಸ್ ಇರುವುದಂತೂ ಸತ್ಯ.. After all we all are biased.. ನಮ್ಮ ನಮ್ಮ ಸ್ನೇಹಿತರೆಂದರೆ ಯಾರಿಗೆ ಇಷ್ವವಿರುವುದಿಲ್ಲ ಹೇಳಿ!! ಆದರೆ ಮೆಚ್ಚಬೇಕಾದ ಅಂಶವೆಂದರೆ ಲೇಖಕರು ಬಿಜೆಪಿಯ ಕಹಿಸತ್ಯಗಳ ಮೇಲೂ ಬೆಳಕು ಚೆಲ್ಲುವುದರ ಜೊತೆಗೆ ಬೇರೆ ನಾಯಕರ ಒಳ್ಳೆಯತನವನ್ನೂ ಗಮನಿಸಿದ್ದಾರೆ.
ಉದಾಹರಣೆಗೆ
೧) ಬೆಂಗಳೂರಿನ‌ ರಾಜಕೀಯ ನಾಯಕರ ಪಕ್ಷಾತೀತ ಸ್ನೇಹಗಳು ಮತ್ತು "ತಾಳ ಮೇಳ"
೨) ಶ್ರೀಮತಿ ತೇಜಸ್ವಿ ಅನಂತಕುಮಾರರಿಗೆ ಟಿಕೆಟ್ ಕೊಡದಿರುವ ಹಿಂದಿದ್ದ ಪೊಲಿಟಿಕಲ್ ದೂರದೃಷ್ಟಿ!!
೩) ಚುನಾವಣಾ ಪ್ರಣಾಳಿಕೆಗಳನ್ನು ಗಂಭೀರವಾಗಿ ತಗೆದುಕೊಂಡು ಕೊಟ್ಟ ಮಾತನ್ನು ಉಳಿಸಿಕೊಳ್ಳಲು ಪ್ರಯತ್ನಿಸಿದ ಆಗಿನ ಮುಖ್ಯಮಂತ್ರಿ ಸಿದ್ದರಾಮಯ್ಯರ ದಿಟ್ಟತನ.
ಈ ಪುಸ್ತಕದಲ್ಲಿ ಎರಡು ಪ್ರಮುಖ ವಿಷಯಗಳಿವೆ.
ಪುಸ್ತಕದ ಹೆಸರೇ ಹೇಳುವಂತೆ "ಬಿಜೆಪಿ 25+1" ೨೦೧೯ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಒಂದು ರಾಜಕೀಯ ಪಕ್ಷವಾಗಿ ಮಾಡಿದ ಅದ್ಭುತವಾದ ಸ್ಟ್ರಾಟಜಿಗಳು. ರಾಜಕೀಯ ಭಾಷೆಯಲ್ಲಿ ಹೇಳಬೇಕೆಂದರೆ ಪ್ರತಿ ಜಿಲ್ಲಾ ಮಟ್ಟದಲ್ಲಿ ಮಾಡಿದ ಸ್ಥಳೀಯ "ವರ್ಕೌಟುಗಳು"

ಮೇಜರ್ ಡಾ. ಕುಶ್ವಂತ್ ಕೋಳಿಬೈಲು

ಉದಾಹರಣೆಗೆ - ಖರ್ಗೆಸಂತ್ರಸ್ತರನ್ನು ಒಗ್ಗೂಡಿಸಿದ್ದು.. ಸುಮ್ಮನೆ ಸುಮಕ್ಕನ ಬೆನ್ನಿಗೆ ನಿಂತದ್ದು ಇತ್ಯಾದಿ..
ಮೇಲಿನ ವಿಷಯಗಳು ಈ ಪುಸ್ತಕದಲ್ಲಿ ಬಹಳ ಸ್ವಷ್ಟವಾಗಿ ಮೂಡಿಬಂದಿದೆ..
ಪುಸ್ತಕದ ಮೊದಲ  ಅರ್ಧ ಭಾಗದಲ್ಲಿ  ಕರ್ನಾಟಕದ 2018ರ ವಿಧಾನಸಭೆ ಚುನಾವಣೆಗಳ ಆಸುಪಾಸಿನ ಬೆಳವಣಿಗೆಗಳ ಬಗ್ಗೆ ಬರೆದಿದ್ದಾರೆ. ಆಡಳಿತಾರೂಢ ಸರಕಾರದ ವಿರುದ್ಧ ಅಲ್ಪಸಂಖ್ಯಾತರನ್ನು ಓಲೈಸುವದರ ಆಪಾದನೆಯ ಜೊತೆಗೆ ಒಕ್ಕಲಿಗ ಮತ್ತು ಲಿಂಗಾಯಿತ ವಿರೋಧಿ ಸರಕಾರವೆಂಬ ಬಲವಾದ #perception ಸೃಷ್ಟಿಯಾಗಿದ್ದರೂ ಬಿಜೆಪಿಗೆ ಯಾಕೆ ಸ್ಪಷ್ಟವಾದ ಬಹುಮತ ಬರಲಿಲ್ಲವೆಂಬ ಕಹಿ ಸತ್ಯಗಳನ್ನು ಅವರು ಹೇಳದೇ ಉಳಿಸಿದ್ದಾರೆ.
ಆ ಚುನಾವಣೆಯಲ್ಲಿ ಪವರ್ ಸೆಂಟರ್ಗಳಾದ ಯಡಿಯೂರಪ್ಪ , ಬಿ ಯಲ್ ಸಂತೋಷ್ ಮತ್ತು ದೆಹಲಿಯಿಂದ ಬಂದು ಹೆಡ್ ಮಾಸ್ಟರ್ ಮಾದರಿಯಲ್ಲಿ ಕೆಲಸ ಮಾಡುತ್ತಿದ್ದ ಅಮಿತ್ ಶಾ ಈ ಮೂವರೂ ಶಕ್ತಿ ಮೀರಿ ದುಡಿದರೂ ಬಹುಮತದ ಗುರಿಮುಟ್ಟದ ಬಗ್ಗೆ ಇನ್ನೂ ಆಳವಾಗಿ ಬರೆಯಬಹುದಿತ್ತು. ಅವರ individual brilliance ಅದರೆ collective failure ಬಗ್ಗೆ ಪತ್ರಕರ್ತ ಮತ್ತು ರಾಜಕೀಯ ವಿಶ್ಲೇಷಕರಾಗಿರುವ ಲೇಖಕರು ಕುಟುಕಬೇಕಿತ್ತು. ಹೊಗಳಲು ಅವರ ಅಭಿಮಾನಿಗಳು ಇದ್ದಾರೆ, ಪತ್ರಕರ್ತರ ಪೆನ್ನು ಇರುವುದೇ ತಿವಿಯಲು..


ಭಾನುವಾರ, ಜುಲೈ 14, 2019

ತಾರೆಗಳ ದಾಟುವೆವು- ಚಂದಿರನ ಮೀಟುವೆವು

ಚಂದ್ರನ ಮೇಲೆ ಮಾನವ ಕಾಲಿಟ್ಟ ೫೦ನೇ ವರ್ಷಕ್ಕೆ ಸರಿಯಾಗಿ ಭಾರತದ ಚಂದ್ರಯಾನ-೨ ಅರಂಭವಾಗುತ್ತಿದೆ. ಭಾರತೀಯನೊಬ್ಬ/ಒಬ್ಬಳು ಚಂದ್ರನ ಮೇಲೆ ಕಾಲಿಡುವ ಮುನ್ನ ಅಲ್ಲಿ ಅಶೋಕ ಚಕ್ರದ ಮುದ್ರೆ ಒತ್ತುವ ಕಾಲ. ಈ ಹೊತ್ತಿನಲ್ಲಿ ಇವತ್ತಿನ ವಿಜಯವಾಣಿ ವಿಜಯ_ವಿಹಾರದಲ್ಲಿ ಪರಿಚಯಾತ್ಮಕ ಲೇಖನ, ಸಣ್ಣ ವಿಶ್ಲೇಷಣೆ ಜತೆಗೆ.





ಶನಿವಾರ, ಫೆಬ್ರವರಿ 09, 2019

ನರೇಂದ್ರ ಮೋದಿ ಸರ್ಕಾರ 2014-2019- ಕರ್ನಾಟಕ

ಹಾಲು ಬೆಳಕಿನ ಉಜಾಲಾ ಯೋಜನೆ

ವಿದ್ಯುತ್ತನ್ನು ಉಳಿತಾಯ ಮಾಡುವುದು, ಹೆಚ್ಚಿನ ವಿದ್ಯುತ್ತನ್ನು ಉತ್ಪಾದಿಸುವುದಕ್ಕಿಂತಲೂ ಕಷ್ಟದ ಕೆಲಸ ಎಂದು ಪ್ರಧಾನಿ ನರೇಂದ್ರ ಮೋದಿಯವರು ತಿಳಿಸುವ ಮೂಲಕ ವಿದ್ಯುತ್ ಉಳಿತಾಯದ ಮಹತ್ವವನ್ನು 2015ರ ಜ.5ಕ್ಕೆ ಸಾರಿದ್ದರು. ಕಡಿಮೆ ವಿದ್ಯುತ್ ಬಳಸಿ ಹೆಚ್ಚಿನ ಪ್ರಕಾಶಮಾನವಾದ ಬೆಳಕು ನೀಡುವ, ದೀರ್ಘಕಾಲ ಬಾಳಿಕೆ ಬರುವ ಎಲ್‌ಇಡಿ ಬಲ್ಬ್‌ಗಳನ್ನು ಪ್ರಕಾಶ ಪಥ ಎಂದು ಬಣ್ಣಿಸಿದ್ದರು. ಜನಸಾಮಾನ್ಯನ ಬದುಕಿನಲ್ಲಿ ಹಾಲು ಬೆಳಕು ಚೆಲ್ಲುವ ಯೋಜನೆಗೆ ಉಜಾಲಾ ನಾಮಕರಣ ಮಾಡಿದ್ದರು.
ಮಾರುಕಟ್ಟೆಯಲ್ಲಿ 300-400 ರೂ. ಇದ್ದ ಎಲ್‌ಇಡಿ ಬಲ್ಬ್‌ಗಳನ್ನು ಬೃಹತ್ ಪ್ರಮಾಣದಲ್ಲಿ ಕಂಪನಿಯಿಂದ ಸರ್ಕಾರವೇ ಖರೀದಿಸಿದ್ದರಿಂದ ಬೆಲೆ ಕೇವಲ 130 ರೂ.ಗೆ ದೊರಕಿತ್ತು. ಸರ್ಕಾರದ ಪರಿಶ್ರಮ ಹಾಗೂ ಜನರ ತೆರಿಗೆ ಹಣವನ್ನು ವೆಚ್ಚ ಮಾಡುವ ಮುನ್ನ ಎಚ್ಚರಿಕೆ ವಹಿಸುವ ಪ್ರಧಾನಿ ಮೋದಿಯವರು, ಮೊದಲಿಗೆ ನವದೆಹಲಿಯ ಸೌತ್ ಬ್ಲಾಖ್‌ನಲ್ಲಿರುವ ತಮ್ಮ ಕಚೇರಿಗೆ ಎಲ್‌ಇಡಿ ಬಲ್ಬ್‌ಗಳನ್ನು ಅಳವಡಿಸಿ ಅದರ ಸಾಧಕ ಬಾಧಕ ಪರೀಕ್ಷೆ ಮಾಡಿದ್ದರು. ಪ್ರತಿ ತಿಂಗಳಿಗೆ 7 ಸಾವಿರ ಯುನಿಟ್ ವಿದ್ಯುತ್ ಉಳಿತಾಯ ಆಗುತ್ತದೆ ಎಂಬುದು ಖಾತ್ರಿಯಾದ ಬಳಿಕವಷ್ಟೆ ಸಾರ್ವಜನಿಕರಿಗೆ ವಿತರಣೆ ಆರಂಭಿಸಲಾಯಿತು.
2015ರಿಂದ ಇಲ್ಲಿವರೆಗೆ ದೇಶಾದ್ಯಂತ 32, 13, 45, 671(32.13 ಕೋಟಿ) ಎಲ್‌ಇಡಿ ಬಲ್ಬ್ ವಿತರಣೆ ಮಾಡಲಾಗಿದೆ. ಇದರಿಂದ ಪ್ರತಿ ವರ್ಷ 16,693 ಕೋಟಿ ರೂ. ಮೊತ್ತದ 41, 732 ದಶಲಕ್ಷ ಕಿ.ವ್ಯಾ ವಿದ್ಯುತ್ ಉಳಿತಾಯವಾಗುತ್ತಿದೆ. ಸಾಮಾನ್ಯ ಬಲ್ಬ್ ಬಳಕೆಯಿಂದ ಹೊರಸೂಸುವ ವಾರ್ಷಿಕ 3, 38, 03, 081 ಟನ್ ಇಂಗಾಲಾಮ್ಲವನ್ನು(ಸಿಒ2) ಇದರಿಂದ ಕಡಿಮೆ ಮಾಡಲಾಗಿದೆ.
ಕರ್ನಾಟಕದಲ್ಲಿ 2,19,25, 981 ಎಲ್‌ಇಡಿ ಬಲ್ಬ್ ವಿತರಣೆ ಮಾಡಲಾಗಿದೆ. ಇದರಿಂದ ಪ್ರತಿ ವರ್ಷ 1,139 ಕೋಟಿ ರೂ. ಮೊತ್ತದ 28,47, 461 ಮೆ. ವ್ಯಾ. ವಿದ್ಯುತ್ ಉಳಿತಾಯವಾಗುತ್ತಿದೆ. ಸಾಮಾನ್ಯ ಬಲ್ಬ್ ಬಳಕೆಯಿಂದ ಹೊರಸೂಸುವ 23, 06,44 ಟನ್ ವಾರ್ಷಿಕ ಇಂಗಾಲಾಮ್ಲವನ್ನು(ಸಿಒ2) ಕಡಿಮೆ ಮಾಡಲಾಗಿದೆ.
ಬಲ್ಬ್ ಮಾತ್ರವಲ್ಲದೆ, ಎಲ್ಲ ವಿದ್ಯುತ್ ಉಪಕರಣಗಳನ್ನು ಉತ್ತಮ ಗುಣಮಟ್ಟದ್ದೇ ಬಳಸುವುದರಿಂದ ವಿದ್ಯುತ್ ಉಳಿತಾಯ ಸಾಧ್ಯ ಎಂಬುದನ್ನು ಸಾರಲು, ಉಜಾಲಾ ಯೋಜನೆಯಲ್ಲಿ ಟ್ಯೂಬ್‌ಲೈಟ್ ಹಾಗೂ ಫ್ಯಾನ್‌ಗಳನ್ನೂ ವಿತರಣೆ ಮಾಡಲಾಗಿದೆ. ರಾಜ್ಯದಲ್ಲಿ 54,083 ಫ್ಯಾನ್ ಹಾಗೂ 3,92, 484 ಟ್ಯೂಬ್ ಲೈಟ್‌ಗಳನ್ನು ವಿತರಣೆ ಮಾಡಿ ಬಡವರ ಮನೆಗಳಲ್ಲಿ ಪ್ರತಿ ತಿಂಗಳು ಪಾವತಿಸುವ ವಿದ್ಯುತ್ ಬಿಲ್‌ನಲ್ಲಿ ಉಳಿತಾಯದ ಜತೆಗೆ ಪರಿಸರ ಸಂರಕ್ಷಣೆಯನ್ನೂ ಮಾಡಲಾಗುತ್ತಿದೆ.

ಜಿಲ್ಲಾವಾರು ಎಲ್‌ಇಡಿ ಬಲ್ಬ್ ವಿತರಣೆ(23.01.2019ರವರೆಗೆ)

ವಿಜಯಪುರ 26,149
ಬಾಗಲಕೋಟೆ 84,561
ಬೆಳಗಾವಿ 13,09,048
ಧಾರವಾಡ 3,98,305
ಹಾವೇರಿ 1,38,350
ಉತ್ತರ ಕನ್ನಡ 1,36,453
ಶಿವಮೊಗ್ಗ 10,27,836
ಚಿಕ್ಕಮಗಳೂರು 5,01,627
ಉಡುಪಿ 4,04,953
ಹಾಸನ  6,75,884
ದಕ್ಷಿಣ ಕನ್ನಡ  20,19,325
ಕೊಡಗು  4,72,674
ಬೀದರ್  75,561
ಕಲಬುರ್ಗಿ  3,66,993
ಯಾದಗಿರಿ  81,270
ಗದಗ  66,278
ರಾಯಚೂರು  1,38,067
ಕೊಪ್ಪಳ  72,394
ದಾವಣಗೆರೆ  2,99,869
ಬಳ್ಳಾರಿ  4,89,519
ಚಿತ್ರದುರ್ಗ  48,777
ತುಮಕೂರು  4,48,304
ಚಿಕ್ಕಬಳ್ಳಾಪುರ  3,41,415
ಬೆಂಗಳೂರು ಗ್ರಾ.  8,39,868
ಕೋಲಾರ  2,40,182
ಬೆಂಗಳೂರು ನ.  76,55,461
ಮಂಡ್ಯ  5,05,971
ರಾಮನಗರ  4,25,184
ಮೈಸೂರು  23,21,173
ಚಾಮರಾಜನಗರ  3,14,530
-------------------------------------------------------------

 ಉಜ್ವಲ ಯೋಜನೆ

ಮನೆಮಂದಿಗೆಲ್ಲ ಅಡುಗೆ ಮಾಡಿ ಬಡಿಸುವ ಗ್ರಾಮೀಣ ಹಾಗೂ ನಗರದ ಬಡ ಮಹಿಳೆಯರು ಪ್ರತಿ ದಿನ 400 ಸಿಗರೇಟ್‌ನಷ್ಟು ಹೊಗೆ ಸೇವಿಸುತ್ತಿದ್ದರು.!! ಹೌದು. ಯಾವುದೇ ದುಶ್ಚಟಗಳು ಇಲ್ಲದಿದ್ದಾಗ್ಯೂ, ಪ್ರತಿ ನಿತ್ಯ ಕಟ್ಟಿಗೆ ಒಲೆ ಎದುರು ಅಡುಗೆ ಮಾಡುತ್ತಿದ್ದ ತಾಯಂದಿರು ಇಷ್ಟು ಪ್ರಮಾಣದ ಸಿಗರೇಟ್ ಸೇದುವುದರಿಂದ ಬರುವಷ್ಟು ಹೊಗೆಯನ್ನು ಸೇವಿಸಿ ಶ್ವಾಸಕೋಶ ಸೇರಿ ಅನೇಖ ತೊಂದರೆಗಳಿಒಗೆ ಈಡಾಗುತ್ತಿದ್ದರು.
ಮಹಿಳೆಯರ ಈ ಸಂಕಷ್ಟವನ್ನು ಹೋಗಲಾಡಿಸಲು ಪ್ರಧಾಣಿ ನರೇಂದ್ರ ಮೋದಿ ಅವರು ಉಜ್ವಲಾ ಯೋಜನೆಯನ್ನು ಜಾರಿಗೆ ತಂದರು. ಸರ್ಕಾರದಿಂದ ಯೋಜನೆಗೆ ಹಣ ನೀಡುವುದು ಒಂದೆಡೆಯಾದರೆ, ಬಡ ಹಾಗೂ ಗ್ರಾಮೀಣ ಮಹಿಳೆಯರ ಬಗ್ಗೆ ಸಮಾಜದಲ್ಲಿ ಸಂವೇದನೆ ಹೆಚ್ಚಿಸುವತ್ತಲೂ ಪ್ರಧಾನಿಯವರು ದೃಢ ಹೆಜ್ಜೆ ಇಟ್ಟರು.
ಸಾಕಷ್ಟು ಉತ್ತಮ ಆದಾಯವಿರುವ, ಎಲ್‌ಪಿಜಿಗೆ ಸರ್ಕಾರದಿಂದ ನೀಡುವ ಸಬ್ಸಿಡಿ ಹಣದ ಅವಶ್ಯಕತೆ ಇಲ್ಲದೆ ಮಾರುಕಟ್ಟೆ ದರದಲ್ಲೆ ಖರೀದಿಸಬಲ್ಲ ಆರ್ಥಿಕ ಶಕ್ತಿ ಉಳ್ಳವರು ಸಬ್ಸಿಡಿ ಹಣವನ್ನು ತ್ಯಜಿಸುವ ಗಿವ್ ಇಟ್ ಅಪ್ ಯೋಜನೆಗೆ 27. ಮಾರ್ಚ್ 2015ರಲ್ಲಿ ಚಾಳನೆ ನೀಡಲಾಯಿತು. ಸಬ್ಸಿಡಿ ತ್ಯಜಿಸಿದ್ದರಿಂದ ಉಳಿತಾಯವಾಗುವ ಹಣದಲ್ಲಿ ಗ್ರಾಮೀಣ ಮಹಿಳೆಯರಿಗೆ ಉಚಿತ ಸಂಪರ್ಕ ನೀಡುವುದಾಗಿ ಘೋಷಿಸಲಾಯಿತು. ಸಮಾಜದಲ್ಲಿದ್ದ ಸಂವೇದನೆ, ಪ್ರಧಾನಿ ಮೋದಿಯವರ ಮನವಿಗೆ ಸ್ಪಂದಿಸಿತು. 2016ರ ವೇಳೆಗೇ ದೇಶದಲ್ಲಿ 1 ಕೋಟಿ ಎಲ್‌ಪಿಜಿ ಬಳಕೆದಾರರು ಸಬ್ಸಿಡಿ ಬೇಡ ಎಂದು ಘೋಷಿಸಿದರು.
ಅಂದಿನಿಂದ ದೇಶದ 715 ಜಿಲ್ಲೆಗಳಲ್ಲಿ ಐಒಜನೆ ಜಾರಿಯಾಗಿದೆ. ಇಲ್ಲಿವರೆಗೆ 8,14, 88, 334 ಉಚಿತ ಎಲ್‌ಪಿಜಿ ಸಂಪರ್ಕಗಳನ್ನು ನೀಡಲಾಗಿದೆ. ಉಚಿತ ಸಂಪರ್ಕದ ಜತೆಗೆ ಉಚಿತ ಗ್ಯಾಸ್ ಸ್ಟೌ ಹಾಗೂ ಮೊದಲ ಸಿಲಿಂಡರ್ ಉಚಿತವಾಗಿ ನೀಡಲಾಯಿತು. ಅತಿ ಹೆಚ್ಚು ಉಚಿತ ಸಂಪರ್ಕ ಪಡೆದ ರಾಜ್ಯಗಳಲ್ಲಿ ಕರ್ನಾಟಕ ಸ್ಥಾನ ಪಡೆದಿದೆ.

ಪ್ರಮುಖ ರಾಜ್ಯಗಳು(22.01. 2019ರವರೆಗೆ)

ಕರ್ನಾಟಕ 19,68,234
ಮಹಾರಾಷ್ಟ 36,10,706
ತಮಿಳುನಾಡು    28,81,892
ಉತ್ತರಪ್ರದೇಶ   1,06,03,600
ಅಸ್ಸಾಂ 24,38,582
ಬಿಹಾರ 72,07,006
ಛತ್ತೀಸ್‌ಗಢ 26,73,737
ಗುಜರಾತ್ 20,10,870
ಮಧ್ಯಪ್ರದೇಶ     55,15,416

-------------------------------------

ಕರ್ನಾಟಕದಲ್ಲಿ ಚಾಲ್ತಿಯಲ್ಲಿರುವ ರೈಲ್ವೆ ಯೋಜನೆಗಳು

-ಹೊಸ ಹಳಿ ನಿರ್ಮಾಣ: 16 ಯೋಜನೆಗಳು, 2,146 ಕಿ.ಮೀ ಉದ್ದ, 21, 098 ಕೋಟಿ ರೂ. ಮೊತ್ತ
-ಡಬ್ಲಿಂಗ್ ಕಾಮಗಾರಿ: 15 ಯೋಜನೆಗಳು, 1,923 ಕಿ.ಮೀ ಉದ್ದ, 14, 105 ಕೋಟಿ ರೂ. ಮೊತ್ತ. 
ಹೊಸ ಹಳಿ ಯೋಜನೆಗಳು

ಮಾರ್ಗ ಉದ್ದ(ಕಿ.ಮೀ)

ಕಡೂರು- ಚಿಕ್ಕಮಗಳೂರು- ಸಕಲೇಶಪುರ 93
ಹೆಜ್ಜಾಲ-ಚಿಕ್ಕಮಗಳೂರು 142
ಹುಬಬ್ಳ್ಳೀ- ಅಂಕೋಲ 167
ಮುನಿರಾಬಾದ್- ಮೆಹಬೂಬ್‌ನಗರ್ 246
ರಾಯದುರ್ಗ- ತುಮಕೂರು 213
ಕಡಪ- ಬೆಂಗಳೂರು 255.40
ಬಾಗಲಕೋಟೆ- ಕುಡಚಿ 142
ಶಿವಮೊಗ್ಗ-ಹರಿಹರ 79
ವೈಟ್‌ಫೀಲ್ಡ್-ಕೋಲಾರ 53
ಮಾರಿಕುಪ್ಪಮ್-ಕುಪ್ಪಮ್ 24
ತುಮಕೂರು-ದಾವಣಗೆರೆ 200
ಗದಗ- ವಾಡಿ 252
ಚಿಕ್ಕಬಳ್ಳಾಪುರ- ಗೌರಿಬಿದನೂರು 44
ಚಿಕ್ಕಬಳ್ಳಾಪುರ- ಪುಟ್ಟಪರ್ತಿ- ಶ್ರೀ ಸತ್ಯಸಾಯಿ ನಿಲಯಂ 103
ಶ್ರೀನಿವಾಸಪುರ- ಮದನಪಲ್ಲಿ 75
ಗದಗ-ಯಳವಿಗಿ 58

ಮೋದಿ ಸರ್ಕಾರದ ಅವಧಿಯಲ್ಲಿ:

  1. -26 ರೈಲ್ವೆ ಮೇಲ್ಸೇತುವೆ, 41 ರೈಲ್ವೆ ಕೆಳಸೇತುವೆ ಮಂಜೂರು
  2. - ಒಟ್ಟು 2754 ಕಿ.ಮೀ. ಉದ್ದದ 21 ಹೊಸ ಮಾರ್ಗ ಸಮೀಕ್ಷೆಗೆ ನಿರ್ಧಾರ
  3. - ಒಟ್ಟು 2510 ಕಿ.ಮೀ ಉದ್ದದ 13 ಮಾರ್ಗಗಳಲ್ಲಿ ವಿದ್ಯುದೀಕರಣ ಮಂಜೂರು
-----------------------------------

ಬಡವರ ಕೌಶಲಕ್ಕೆ ಪ್ರಧಾನಿ ಮುದ್ರಾ

ಸಣ್ಣ ಉದ್ಯಮಿಗಳನ್ನು ಪ್ರೋತ್ಸಾಹಿಸುವ ಸಲುವಾಗಿ ಮೈಕ್ರೊ ಯುನಿಟ್ಸ್ ಡೆವಲಪ್‌ಮೆಂಟ್ ಆಯಂಡ್ ರಿ ಫೈನಾನ್ಸ್ ಏಜೆನ್ಸಿ(ಮುದ್ರಾ) ಹಾಗೂ ಪ್ರಧಾನ ಮಂತ್ರಿ ಮುದ್ರಾ ಯೋಜನೆಯನ್ನು ಜಾರಿ ಮಾಡಲಾಯಿತು.
ಯೋಜನೆ ಜಾರಿಯಾದ ವರ್ಷಕ್ಕೆ ಅಂದರೆ 2017ರಲ್ಲಿ ದೇಶಾದ್ಯಂತ 2, 46, 437 ಕೋಟಿ ರೂ. ಸಾಲ ನೀಡಲಾಗಿತ್ತು. ಇದರಲ್ಲಿ ಶೇ. 40 ಸಾಲವನ್ನು ಮಹಿಳೆಯರಿಗೆ, ಶೇ. 33 ಪ್ರಮಾಣವನ್ನು ಎಸ್‌ಸಿಎಸ್‌ಟಿ, ಒಬಿಸಿ ಸಮುದಾಯದವರಿಗೆ ನೀಡಲಾಯಿತು. ಯೋಜನೆಯಿಂದ ಒಟ್ಟಾರೆ 4.81 ಕೋಟಿ ಸೂಕ್ಷ್ಮ ಸಾಲಗಾರರು ಇದರಿಂದ ಲಾಭ ಪಡೆದಿದ್ದರು.

ಕರ್ನಾಟಕದಲ್ಲಿ ಮುದ್ರಾ ಪ್ರಭಾವ

ವಿಭಾಗ 2015-16 2016-17 2017-18 2018-19(ಅಂದಾಜು)

ಶಿಶು (50 ಸಾವಿರ ರೂ.ವರೆಗೆ ಸಾಲ) 9071.71 8166.92 10351.83 7064.60
ಕಿಶೋರ(50,001-5 ಲಕ್ಷ ರೂ.ವರೆಗೆ)  4744.94 5402.85 7177.23 4889.05
ತರುಣ(5,00001-10 ಲಕ್ಷ ರೂ.ವರೆಗೆ)2652.78 3720.93 4971.61 3160.36
(ಕೋಟಿ ರೂ.ಗಳಲ್ಲಿ)
ಮಧ್ಯಮ ವರ್ಗ, ಬಡ ವರ್ಗದವರಲ್ಲಿರುವ ಕೌಶಲಗಳಿಗೆ ರೆಕ್ಕೆ ನೀಡುವ ವಿಶಿಷ್ಠ ಯೋಜನೆ ಮುದ್ರಾ. ನಮ್ಮ ಜನರಲ್ಲಿರುವ ಔದ್ಯಮಿಕ ಕೌಶಲವನ್ನು ಉತ್ತೇಜಿಸುವ ಹಾಗೂ ಅವರಲ್ಲಿ ಸ್ವಾವಲಂಬನೆಯನ್ನು ಮೂಡಿಸುವಲ್ಲಿ ಯೋಜನೆ ಸಹಕಾರಿ.
-ನರೇಂದ್ರ ಮೋದಿ, ಪ್ರಧಾನಿ

-------------------------------------

ಆಯಷ್ಮಾನ್ ಭಾರತ

ವೈದ್ಯಕೀಯ ಕ್ಷೇತ್ರ ವ್ಯಾಪಾರಿಕರಣವಾಗುತ್ತಿರುವ ಸಮಯದಲ್ಲಿ, ಬಡವರು ಆರೋಗ್ಯ ಸೇವೆ ಪಡೆಯಲು ಸರ್ಕಾರದ ಅತ್ಯಂತ ಮಹತ್ವದ ಕಾರ್ಯಕ್ರಮ ಆಯುಷ್ಮಾನ್ ಭಾರತ ಯೋಜನೆಯನ್ನು 2018ರಲ್ಲಿ ಪ್ರಧಾನಿ ಮೋದಿ ಸರ್ಕಾರ ಆರಂಭಿಸಿತು.
ದೇಶದ 10 ಕೋಟಿ ಕುಟುಂಬಗಳ ಸುಮಾರು 50 ಕೋಟಿ ಬಡ ಜನರಿಗೆ, ಕುಟುಂಬವೊಂದಕ್ಕೆ ವಾರ್ಷಿಕ 5 ಲಕ್ಷ ರೂ.ವರೆಗೆ ಆರೋಗ್ಯ ವಿಮೆ ನೀಡುವ ಇಂತಹ ಮತ್ತೊಂದು ಕಾರ್ಯಕ್ರಮ ಜಗತ್ತಿನಲ್ಲೆ ಇಲ್ಲ. 2018ರ ಸೆಪ್ಟೆಂಬರ್‌ನಲ್ಲಿ ಯೋಜನೆ ಜಾರಿಯಾದಾಗಿನಿಂದ ದೇಶಾದ್ಯಂತ 8.9 ಲಕ್ಷ ಜನರು ದುಬಾರಿ ಚಿಕಿತ್ಸೆಗಳನ್ನು ಉಚಿತವಾಗಿ ಪಡೆದಿದ್ದಾರೆ.
ಯೋಜನೆ ಜಾರಿ ಮಾಡಿ 130 ದಿನದಲ್ಲೆ(ಜನವರಿ 29ರವರೆಗೆ) 1 ಕೋಟಿಗೂ ಹೆಚ್ಚೂ(1,00,28,168) ಕುಟುಂಬಗಳಿಗೆ, ಅಂದರೆ ಸುಮಾರು ನಾಲ್ಕು ಕೋಟಿಗೂ ಹೆಚ್ಚು ಜನರಿಗೆ ಇ ಕಾರ್ಡ್ ಮುದ್ರಿಸಿ ಅವರ ಮನೆ ಬಾಗಿಲಿಗೆ ತಲುಪಿಸಲಾಗಿದೆ.
-----------------------------------------------

ಉದ್ಯಮ ಸ್ನೇಹಿ ವಾತಾವರಣ

ಏಕಕಾಲಕ್ಕೆ ಲಕ್ಷಾಂತರ ಜನರಿಗೆ ಉದ್ಯೋಗ ಕಲ್ಪಿಸುವ ಉದ್ಯಮ ವಲಯಕ್ಕೆ ಪ್ರೋತ್ಸಾಹ ನೀಡುವ ಸಲುವಾಗಿ ದೇಶದಲ್ಲಿ ಉದ್ಯಮ ಸ್ನೇಹಿ ವಾತಾವರಣವನ್ನು ನಿರ್ಮಿಸಲು ಮೋದಿ ಸರ್ಕಾರ 2015ರಲ್ಲಿ ಯೋಜನೆಯೊಂದನ್ನು ರೂಪಿಸಿತು. ವಿಶ್ವ ಬ್ಯಾಂಗ್ ಸಮೂಹದ ಜತೆ ಸೇರಿ ಪ್ರತಿ ರಾಜ್ಯದ ಉದ್ಯಮ ಸ್ನೇಹಿ ವಾತಾವರಣ ರ‌್ಯಾಂಕಿಂಗ್ ಪ್ರಕಟಿಸುವ ಮೂಲಕ ರಾಜ್ಯಗಳ ನಡುವೆ ಆರೋಗ್ಯಕರ ಸ್ಪರ್ಧೆಗೆ ಪಾರದರ್ಶಕ ವ್ಯವಸ್ಥೆ ರೂಪಿಸಲಾಯಿತು. ರಾಜ್ಯಗಳ ನಡುವಣ ರ‌್ಯಾಂಕ್‌ಗಳಲ್ಲಿ ಸ್ವಲ್ಪ ಪ್ರಮಾಣದ ಏರಿಳಿತ ಕಂಡರೂ, ಒಟ್ಟಾರೆ ಉದ್ಯಮ ಸ್ನೇಹಿ ವಾತಾವರಣ ನಿರ್ಮಾಣದಲ್ಲಿ ಅಗಾಧ ಬದಲಾವಣೆ ಕಂಡಿದೆ. 2015ರಲ್ಲಿ ಉದ್ಯಮ ಸ್ನೇಹಿ ಮಾರ್ಗಸೂಚಿಗಳ ಪಾಲನೆಯಲ್ಲಿ ಕೇವಲ ಶೇ.48.50 ಗುರಿ ಸಾಧಿಸಿದ್ದ ಕರ್ನಾಟಕ 2017ರ ವೇಳೆಗೆ ದ್ವಿಗುಣಗೊಂಡು ಶೇ.96.42ಕ್ಕೇರಿರುವುದೇ ಇದಕ್ಕೆ ಉದಾಹರಣೆ.

ಕರ್ನಾಟಕದಲ್ಲಿ ಉದ್ಯಮ ಸ್ನೇಹಿ ವಾತಾವರಣ(ಈಸ್ ಆಫ್ ಡೂಯಿಂಗ್ ಬಿಸಿನೆಸ್)

ಇಸವಿ ಅಂಕ(ಶೇ.) ರ‌್ಯಾಂಕ್
2015 48.50 9
2016 88.39 9
2017 96.42 8
----------------------------------------

ಕೇಂದ್ರ ಸರ್ಕಾರದಿಂಧ ಅನುದಾನ


ಕೇಂದ್ರ ಸರ್ಕಾರದಿಂಧ ಲಭಿಸಬೇಕಿದ್ದ ಅನುದಾನದಲ್ಲಿ 13ನೇ ಹಣಕಾಸು ಆಯೋಗ(ಯುಪಿಎ ಅವಧಿ) ಹೋಲಿಕೆಯಲ್ಲಿ 14ನೇ ಹಣಕಾಸು ಆಯೋಗ(ಎನ್‌ಡಿಎ ಅವಧಿ) ಅನ್ಯಾಯ ಮಾಡಿದೆ ಎಂದು ಕರ್ನಾಟಕದಲ್ಲಿ ಗುಲ್ಲೆಬ್ಬಿಸಲಾಗುತ್ತದೆ. ಆದರೆ ಸತ್ಯಾಂಶ ಬೇರೆಯೇ ಇದೆ.
ಕೇಂದ್ರದಿಂದ ಕರ್ನಾಟಕಕ್ಕೆ ಹಣದ ಹರಿವು(ಹಣಕಾಸು ಆಯೋಗವಾರು)

ಕ್ರಮ.ಸಂ.      ವಿಭಾಗ                                               13ನೇ ಆಯೋಗ          14ನೇ ಆಯೋಗ          ಹೆಚ್ಚಳ(ರೂ.)          ಹೆಚ್ಚಳ(ಶೇ.)

1                 ಕೇಂದ್ರದ ತೆರಿಗೆಯಲ್ಲಿ ರಆಜ್ಯದ ಪಾಲು           61691.02              186925.00        125233.98              203.00
2                 ರಾಜ್ಯ ವಿಪತ್ತು ಪರಿಹಾರ ನಿಧಿ(ಎಸ್‌ಡಿಆರ್‌ಎಫ್)667.07                  1145.25             478.18                   71.68
3                 ಸ್ಥಳೀಯ ಸಂಸ್ಥೆಗಳಿಗೆ ಅನುದಾನ                  6534.44                15145.54           8611.10                 131.78

ಕೇಂದ್ರದಿಂದ ಕರ್ನಾಟಕಕ್ಕೆ ಹಣದ ಹರಿವು(ವರ್ಷವಾರು)

               ವಿಭಾಗ 2015-16 2016-17

  • ಕೇಂದ್ರದ ತೆರಿಗೆ ಪಾಲು 23983.34 28759.94
  • ಹಣಕಾಸು ಆಯೋಗ ಅನುದಾನ 1741.44 2773.16
  • ಇತರೆ ಅನುದಾನ 12187.31 14797.69 (ಕೇಂದ್ರ ಪ್ರಾಯೋಜಿತ ಯೋಜನೆ ಸೇರಿ)

ಕೇಂದ್ರ ಸರ್ಕಾದಿಂದ ಸಹಾಯಾನುದಾನ

ಇಸವಿ ಮೊತ್ತ(ಕೋಟಿ ರೂ.)
2015-16 13928.75
2016-17 15703.19
2017-18 16082.91
---------------------------------------

ಕರ್ನಾಟಕದಲ್ಲಿ ಹೊಸ ರಾಷ್ಟ್ರೀಯ ಹೆದ್ದಾರಿ ಹಾಗೂ ನಿರ್ವಹಣೆ


ಇಸವಿ  ರಸ್ತೆಯ ಉದ್ದ(ಕಿ.ಮೀ) ವೆಚ್ಚ(ಕೋಟಿ ರೂ)
2015-16  311  173.66
2016-17  678  217.15
2017-18  771  167.82

ಚತುಷ್ಪಥ ಮತ್ತು ಷಟ್ಪಥ

ಇಸವಿ  ಉದ್ದ(ಕಿ.ಮೀ)
2015-16  114.59
2016-17 507.93
2017-18  355.25


ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯಲ್ಲಿ ಗ್ರಾಮೀಣ ರಸ್ತೆ ನಿರ್ಮಾಣ


ಇಸವಿ ಗುರಿ(ಕಿ.ಮೀ)  ಸಾಧನೆ(ಕಿ.ಮಿ) 
2014-15   650   470
2015-16   715   999
2016-17   800  897
2017-18  66  58
2018-19  12  6.6

----------------------------------

ಅಮೃತ್ ಯೋಜನೆ

ಸಣ್ಣ ನಗರಗಳಲ್ಲಿನ ಮೂಲಸೌಕರ್ಯ ಅಭಿವೃದ್ಧಿಯ ಅವಶ್ಯಕತೆಯನ್ನು ಮನಗಂಡ ಪ್ರಧಾನಿ ಶ್ರೀ ನರೇಂದ್ರ ಮೋದಿಯವರು ಅಟಲ್ ಮಿಷನ್ ಫಾರ್ ರಿಜುವಿನೇಷನ್ ಆ್ಯಂಡ್ ಅರ್ಬನ್ ಟ್ರಾನ್ಸ್‌ಫಾರ್ಮೇಷನ್(ಅಮೃತ್) ಯೋಜನೆಯನ್ನು ಜಾರಿ ಮಾಡಿದರು. ಈ ಯೋಜನೆಗೆ ಕರ್ನಾಕದ 27 ನಗರಗಳನ್ನು ಆಯ್ಕೆ ಮಾಡಲಾಯಿತು. ಯೋಜನೆ ಜಾರಿಗೆ ಕರ್ನಾಟಕಕ್ಕೆ 2015ರ ಡಿ.28ಕ್ಕೆ 118.46 ಕೋಟಿ ರೂ., 2016ರ ಆ.23ಕ್ಕೆ 154.32 ಕೋಟಿ ರೂ., 20174 ಏ.28ಕ್ಕೆ 190.98 ಕೋಟಿ ರೂ., 20184 ಮಾ.28ಕ್ಕೆ 88.08 ಕೋಟಿ ರೂ., 2017ರ ಡಿ.22ಕ್ಕೆ 61.49 ಕೋಟಿ ರೂ.,  2018ರ ಮೇ 28ಕ್ಕೆ 544.01 ಕೋಟಿ ರೂ. ಬಿಡುಗಡೆ ಮಾಡಲಾಗಿದೆ.

ಅಮೃತ್ ಯೋಜನೆಗೆ ಆಯ್ಕೆಯಾದ ರಾಜ್ಯದ ನಗರಗಳು

  1.  ಬಾದಾಮಿ
  2. ಬಾಗಲಕೋಟೆ
  3. ಬಿಬಿಎಂಪಿ
  4. ಬೆಳಗಾವಿ
  5. ಬಳ್ಳಾರಿ
  6. ಭದ್ರಾವತಿ
  7. ಬೀದರ್
  8. ವಿಜಯಪುರ
  9. ಚಿಕ್ಕಮಗಳೂರು
  10. ಚಿತ್ರದುರ್ಗ
  11. ದಾವಣಗೆರೆ
  12. ಗದಗ-ಬೆಟಗೇರಿ
  13. ಗಂಗಾವತಿ
  14. ಕಲಬುರ್ಗಿ
  15. ಹಾಸನ
  16. ಹೊಸಪೇಟೆ
  17. ಹುಬ್ಬಳ್ಳಿ-ಧಾರವಾಡ
  18. ಕೋಲಾರ
  19. ಮಂಡ್ಯ
  20. ಮಂಗಳೂರು
  21. ಮೈಸೂರು
  22. ರಾಯಚೂರು
  23. ರಾಣೆಬೆನ್ನೂರು
  24. ರಾಬರ್ಟ್‌ಸನ್‌ಪೇಟೆ
  25. ಶಿವಮೊಗ್ಗ
  26. ತುಮಕೂರು
  27. ಉಡುಪಿ
-------------------------------------------------


ಹೃದಯ್ ಯೋಜನೆ

ಐತಿಹಾಸಿಕ ಹಿನ್ನೆಲೆಯುಳ್ಳ ನಗರಗಳಲ್ಲಿ ಮೂಲಸೌಕರ್ಯ ವೃದ್ಧಿಸಿ ಅಲ್ಲಿನ ಪ್ರವಾಸೋದ್ಯಮಕ್ಕೆ ಇಂಬು ನೀಡುವ ನಿಟ್ಟಿನಲ್ಲಿ ಹೃದಯ್ ಯೋಜನೆಯನ್ನು ಘೋಷಿಸಲಾಯಿತು. ಯೋಜನೆಯಲ್ಲಿ ಕರ್ನಾಟಕದ ಬಾದಾಮಿ ಆಯ್ಕೆಯಾಗಿದೆ. ಬಾದಾಮಿಯಲ್ಲಿ ಇಲ್ಲಿವರೆಗೆ ಒಟ್ಟು ನಾಲ್ಕು ಯೋಜನೆಗಳಿಗೆ ಒಪ್ಪಿಗೆ ನೀಡಲಾಗಿದೆ. 
ಬಾದಾಮಿ(2019ರ ಜನವರಿವರೆಗೆ ಪ್ರಗತಿ)
ಕ್ರ. ಸಂ.      ಯೋಜನೆ                                                                 ಯೋಜನೆ ಮೊತ್ತ      ಬಿಡುಗಡೆಯಾದ ಮೊತ್ತ      ಪ್ರಗತಿ(ಶೇ.)
1             ರಸ್ತೆ ಸಾರಿಗೆ ಮೂಲ ಸೌಕರ್ಯ, ಪಾರ್ಕಿಂಗ್, ಸೂಚನಾ ಫಲಕ.     14.25                2.75                           60
2             ಜೀರೋ ವೇಸ್ಟ್ ಮ್ಯಾನೇಜ್‌ಮೆಂಟ್                                        1.59               0.46                           100
3             ಹಳೆ ಬಾದಾಮಿಯಲ್ಲಿ ಒಳಚರಂಡಿ                                          0.42.40          0.37.87                       97
4             ಐತಿಹಾಸಿಕ ಕಟ್ಟಡ ಅಭಿವೃದ್ಧಿ                                                2.17               0.41                              0

               ಒಟ್ಟು                                                                          18.44               4.01                            57.23


----------------------------------

ಸ್ಮಾರ್ಟ್ ಸಿಟಿ

ನಗರಗಳಲ್ಲ ಮೂಲಸೌಕರ್ಯ ಅಭಿವೃದ್ಧಿಪಡಿಸಿ ಅಲ್ಲಿನ ನಾಗರಿಕರಿಗೆ ಉತ್ತಮ ಜೀವನ ನಿರ್ವಹಣೆ ವಾತಾವರಣ ನಿರ್ಮಿಸುವುದು ಸ್ಮಾರ್ಟ್‌ಸಿಟಿ ಯೋಜನೆಯ ಉದ್ದೇಶ. ಪ್ರಧಾನಿ ನರೇಂದ್ರ ಮೋದಿಯವರ ಅಚ್ಚುಮೆಚ್ಚಿನ ಯೋಜನೆಗಳಲ್ಲೊಂದಾದ ಸ್ಮಾರ್ಟ್ ಸಿಟಿ ಯೋಜನೆಗೆ ಕರ್ನಾಟಕದಿಂದ ಆರು ನಗರಗಳನ್ನು ಆಯ್ಕೆ ಮಾಡಲಾಯಿತು. ಆಯಾ ನಗರಗಳಲ್ಲಿ ಕೇಂದ್ರ ಸರ್ಕಾರದ ಸಹಯೋಗದಲ್ಲಿ ರೂಪಿಸಿರುವ ವಿಶೇಷ ವಾಹಕಗಳ(ಎಸ್‌ಪಿವಿ) ಮೂಲಕ ಜಿಲ್ಲಾಧಿಕಾರಿಗಳ ಯೋಜನೆಗೆ ಅನುಗುಣವಾಗಿ ಹಣ ಬಿಡುಗಡೆ ಮಾಡಲಾಗುತ್ತಿದೆ. ವಿವಿಧ ರಾಜ್ಯಗಳು, ನಗರಗಳ ಅಭಿವೃದ್ಧಿ ಹಾಗೂ ಸಂಸ್ಕೃತಿ ವಿಭಿನ್ನವಾದ ಕಾರಣ ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಆಯಾ ನಗರಗಳ ಅವಶ್ಯಕತೆಗೆ ಅನುಗುಣವಾಗಿ ಯೋಜನೆ ರೂಪಿಸಲಾಗಿದೆ ಹಾಗೂ ಮಂಜೂರು ಮಾಡಲಾಗುತ್ತಿದೆ.

ಬೆಳಗಾವಿ:

ಭೂ ಅಂತರ್ಗತ ಕೇಬಲ್‌ಗೆ 168 ಕೋಟಿ ರೂ., ಸಾಗಣಿಕೆ ಹಾದಿ ಅಭಿವೃದ್ಧಿಗೆ 128 ಕೋಟಿ ರೂ., ಕೇಂದ್ರ ಹಾಗೂ ನಗರ ಬಸ್ ನಿಲ್ದಾಣ ಅಭಿವೃದ್ಧಿಗೆ 110 ಕೋಟಿ ರೂ., ಮೇಲ್ಸೇತುವೆ 129 ಕೋಟಿ ರೂ., ರೈಲ್ವೆ ಮೇಲ್ಸೇತುವೆಗೆ 101 ಕೋಟಿ ರೂ., ಎಸ್‌ಟಿಪಿ ಹಾಗೂ ಇನ್ನಿತರೆ ತ್ಯಾಜ್ಯ ನೀರು ನಿರ್ವಹಣೆ ವ್ಯವಸ್ಥೆಗೆ 156 ಕೋಟಿ ರೂ., ತಾರಸಿ ಸೌರ ಘಟಕ 195 ಕೋಟಿ ರೂ., ಪವನ ವಿದ್ಯುತ್ ಉತ್ಪಾದನೆಗೆ 186 ಕೋಟಿ ರೂ., ಭೂ ಅಂತರ್ಗತ ಹೈ ಟೆನ್ಷನ್ ಲೈನ್ 316.27 ಕೋಟಿ ರೂ., ದಿನಪೂರ್ತಿ ನೀರು ಸರಬರಾಜು 427 ಕೋಟಿ ರೂ., ಬಸ್ ನಿಲ್ದಾಣಗಳು 130 ಕೋಟಿ ರೂ., ನಗರ ಅನಿಲ ಸರಬರಾಜು 150 ಕೋಟಿ ರೂ., ನದಿ ತೀರ ಅಭಿವೃದ್ಧಿ: ಆರ್ಥಿಕ ದುರ್ಬಲ ವರ್ಗಕ್ಕೆ ಕೈಗೆಟುಕುವ ದರದಲ್ಲಿ ಗೃಹ ನಿರ್ಮಾಣಕ್ಕೆ 84 ಕೋಟಿ ರೂ., ಬುಡಾ ಲೇಔಟ್‌ನಲ್ಲಿ ಕೈಗೆಟುಕುವ ದರದಲ್ಲಿ ಮನೆ ನಿರ್ಮಿಸಲು 43.52 ಕೋಟಿ ರೂ., ಹೆರಿಟೇಜ್ ಪಾರ್ಕ್ ನಿರ್ಮಾಣಕ್ಕೆ 26 ಕೋಟಿ ರೂ., ರೆಕ್ರಿಯೇಷನಲ್ ಸ್ಪೇಸಸ್ ನಿರ್ಮಾಣಕ್ಕೆ 15 ಕೋಟಿ ರೂ., ನಗರೋದ್ಯಾನ 5 ಕೋಟಿ ರೂ., ರಸ್ತೆ ಬದಿ ಮರ 2 ಕೋಟಿ ರೂ., ಕಲಾ ಗ್ಯಾಲರಿ ಮತ್ತು ಪ್ರದರ್ಶನ ಸ್ಥಳ ಹಾಗೂ ಮಕ್ಕಳ ವಿಜ್ಞಾನ ಪಾರ್ಕ್ 14 ಕೋಟಿ ರೂ., ಸರೋವರ ಅಭಿವೃದ್ಧಿಗೆ 10 ಕೋಟಿ ರೂ., ಇ ಆಡಳಿತಕ್ಕೆ 12 ಕೋಟಿ ರೂ., ನಳಿಕೆ ಮೂಲಕ ನಗರ ಅನುಲ ಸರಬರಾಜು ವ್ಯವಸ್ಥೆಗೆ 172.78 ಕೋಟಿ ರೂ.(ಪಿಪಿಪಿ ಮೂಲಕ),  ನೀಡಲಾಗಿದೆ.

ಮಂಗಳೂರು: 

ರಸ್ತೆ ಅಗಲೀಕರಣಕ್ಕೆ 150 ಕೋಟಿ ರೂ., ಪಾದಚಾರಿ ರಸ್ತೆ ಸಹಿತ ರಸ್ತೆ ಮೇಲ್ದರ್ಜೆ 150 ಕೋಟಿ ರೂ., ಸರ್ಕಾರಿ ಕಟ್ಟಡಗಳ ಮೇಲೆ ತಾರಸಿ ಸೌರ ಘಟಕ 203.32 ಕೋಟಿ ರೂ., ತ್ಯಾಜ್ಯ ನೀರು ಸಂಸ್ಕರಣೆಗೆ 128.86 ಕೋಟಿ ರೂ., ಐಪಿಡಿಎಸ್ ಪ್ರಸ್ತಾವನೆ 114.32 ಕೋಟಿ ರೂ., ಆರ್ಥಿಕ ದುರ್ಬಲ ವರ್ಗಕ್ಕೆ ಕೈಗೆಟುಕುವ ದರದಲ್ಲಿ ಗೃಹ ನಿರ್ಮಾಣಕ್ಕೆ 7.8 ಕೋಟಿ ರಊ., ವಾಟರ್ ಫ್ರಂಟ್ ಮರೀನಾ ಡೆವಲಪ್‌ಮೆಂಟ್ 78 ಕೋಟಿ ರೂ., ಜಲ ಮನರಂಜನಾ ಪಾರ್ಕ್ 10.84 ಕೋಟಿ ರೂ., ಹಸಿರು ಪ್ರದೇಶ ಅಭಿವೃದ್ಧಿ 7.02 ಕೋಟಿ ರೂ., ಸಾರ್ವಜನಿಕ ಸಾರಿಗೆ ಮಾಹಿತಿಗೆ ಆಯಪ್ ಆಧರಿತ ವ್ಯವಸ್ಥೆಗೆ 10 ಕೋಟಿ ರೂ. ನೀಡಲಾಗಿದೆ.

ದಾವಣಗೆರೆ: 

ಮಂಡಿಪೇಟೆ ಪ್ರದೇಶ ಅಭಿವೃದ್ಧಿಗೆ 372.9 ಕೋಟಿ ರೂ., ಮಂಡಿಪೇಟೆ ಪ್ರದೇಶ ಆರ್ಥಿಕ ಅಭಿವೃದ್ಧಿಗೆ 102.91 ಕೋಟಿ ರೂ.,ಒಳಚರಂಡಿ ವ್ಯವಸ್ಥೆಗೆ 161 ಕೋಟಿ ರೂ., ನಗರ ಸಾರಿಗೆ ಮಾಹಿತಿ ವ್ಯವಸ್ಥೆಗೆ 459.36 ಕೋಟಿ ರೂ.,    ಪ್ರದೇಶಕ್ಕೆ ಅನುಗುಣವಾಗಿ ಕಸದ ಬುಟ್ಟಿ ರಹಿತ ಕಸ ನಿರ್ವಹಣೆ ವ್ಯವಸ್ಥೆಯನ್ನು ಆಯಪ್ ಆಧರಿತ ನಿರ್ವಹಣೆಗೆ 37 ಕೋಟಿ ರೂ. ನೀಡಲಾಗಿದೆ.

ತುಮಕೂರು: 

ಸಮಗ್ರ ಬಸ್ ಟರ್ಮಿನಲ್ ಮರು ಅಭಿವೃದ್ಧಿ 174 ಕೋಟಿ ರೂ., ದಿನಪೂರ್ತಿ ನೀರು ಸರಬರಾಜು 259 ಕೋಟಿ ರೂ., ಒಳಚರಂಡಿ ವ್ಯವಸ್ಥೆಗೆ 223 ಕೋಟಿ ರೂ., ಭೂ ಅಂತರ್ಗತ ಕೇಬಲ್ 196 ಕೋಟಿ ರೂ., ಮೆಡಿಕಲ್ ಕಾಲೇಜ್ ಜತೆಗೆ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ 300 ಕೋಟಿ ರೂ., ಬೀದಿಬದಿ ದೀಪ ನಿರ್ವಹಣೆ ವ್ಯವಸ್ಥೆಗೆ 201 ಕೋಟಿ ರೂ., ಸರೋವರ ಪ್ರದೇಶ ಅಭಿವೃದ್ಧಿ 89 ಕೋಟಿ ರೂ., ಮಾರುಕಟ್ಟೆ ಪ್ರದೇಶಗಳ ಸ್ಥಾಪನೆಗೆ 2 ಕೋಟಿ ರೂ. ನೀಡಲಾಗಿದೆ.

ಶಿವಮೊಗ್ಗ: 

ಭೂ ಅಂತರ್ಗತ ಕೇಬಲ್ 264 ಕೋಟಿ ರೂ., ಹಸರಿರು ಹೊದಿಕೆ ಹೆಚ್ಚಳ 168.84 ಕೋಟಿ ರೂ., ಸುಸ್ಥಿರ ಯೋಜನೆಗಳು 248. 52 ಕೋಟಿ ರೂ.,  ನದಿ ತೀರ ಅಭಿವೃದ್ಧಿಗೆ 421 ಕೋಟಿ ರೂ. ಒದಗಿಸಲಾಗಿದೆ.

ಹುಬ್ಬಳ್ಳಿ ಧಾರವಾಡ: 

ನಗರದ ಕೇಂದ್ರ ಭಾಗ ಜೀರ್ಣೋದ್ಧಾರಕ್ಕೆ 114.78 ಕೋಟಿ ರೂ., ವೈಫೈ ಸೇವೆಯ ಜತೆಗೆ ಸಾರಿಗೆ ವ್ಯವಸ್ಥೆಗೆ 316.59 ಕೋಟಿ ರೂ., ವಿದ್ಯುತ್ ಸ್ಮಾರ್ಟ್ ಮೀಟರ್ ಜತೆಗೆ ಭೂ ಅಂತರ್ಗತ ವಿದ್ಯುತ್ ಮತ್ತು ಸಂಪರ್ಕ ತಂತಿಗೆ 190 ಕೋಟಿ ರೂ., ತಾರಸಿ ಸೌರ ವಿದ್ಯುತ್ ಘಟಕ 128.76 ಕೋಟಿ ರೂ., ನಗರ ಸ್ಥಳೀಯ ಸಂಸ್ಥೆಗಳಿಂದ ಕೈಗೊಳ್ಳುವ ತಂತ್ರಜ್ಞಾನಾಧಾರಿತ ಯೋಜನೆಗೆ 130 ಕೋಟಿ ರೂ., ಕೈಗೆಟುಕುವ ದರದಲ್ಲಿ ಮನೆಗೆ 103.32 ಕೋಟಿ ರೂ.,  ಸಾರ್ವಜನಿಕ ಸ್ಥಳಗಳ ಮೇಲ್ದರ್ಜೆಗೆ 89.65 ಕೋಟಿ ರೂ. ಹಾಗೂ ಗ್ರೀನ್ ಕಾರಿಡಾರ್‌ಗೆ 10 ಕೋಟಿ ರೂ. ನೀಡಲಾಗಿದೆ.

------------------------------------

ಜನೌಷಧಿ ಕೇಂದ್ರ

ವೈದ್ಯಕೀಯ ವೆಚ್ಚ ದಿನೇದಿನೆ ದುಬಾರಿಯಾಗುತ್ತಿರುವ ಹಿನ್ನ್ಲೆಯಲ್ಲಿ ಸಆಮಾನ್ಯ ಜನರು ಆರೋಗ್ಯಯುತ ಜೀವನ ಸಾಗಿಸುವುದು ದುಸ್ಥರವಾಗಿರುವಾಗ ಜನೌಷಧಿ ಯೋಜನೆ ಸಂಜೀವಿನಿಯಾಗಿ ಪರಿಣಮಿಸಿದೆ. ಅತ್ಯಂತ ಕಡಿಮೆ ಹಾಗೂ ರಿಯಾಯಿತಿ ದರದಲ್ಲಿ ಜನೌಷಧಿ ಕೇಂದ್ರಗಳಿಂದ ಗುಣಮಟ್ಟದ ಔಷಧಿ ಖರೀದಿಸುತ್ತಿರುವ ಕೋಟ್ಯಂತರ ಭಾರತೀಯರು ಇಂದು ಪ್ರಧಾನಿ ನರೇಂದ್ರ ಮೋದಿಯವರನ್ನು ಕೊಂಡಾಡುತ್ತಿದ್ದಾರೆ. ಯೋಜನೆಯಲ್ಲಿ 700 ಔಷಧಿಗಳು ಹಾಗೂ 154 ಶಸ್ತ್ರಚಿಕಿತ್ಸೆ ಉಪಕರಣಗಳನ್ನು ಮಾರಾಟ ಮಾಡಲಾಗುತ್ತಿದೆ. 
ದೇಶಾದ್ಯಂತ ಸದ್ಯ ಒಟ್ಟು 4,844 ಜನೌಷಧಿ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ಕರ್ನಾಟಕದಲ್ಲಿ 420 ಕೇಂದ್ರಗಳು ಈಗಾಗಲೆ ಸ್ಥಾಪನೆಯಾಗಿದ್ದು, ಸದ್ಯದಲ್ಲೆ 22 ಹೊಸ ಕೇಂದ್ರಗಳು ಕಾರ್ಯ ಆರಂಭಿಸಲಿವೆ.

ಮೆಗಾ ಫುಡ್ ಪಾರ್ಕ್

ಆಹಾರ ಸಂಸ್ಕರಣೆಯಿಂದ ರೈತರಿಗೆ ಹೆಚ್ಚಿನ ಆದಾಯ ದೊರಕುತ್ತದೆ ಎಂದರಿತ ಪ್ರಧಾನಿ ನರೇಂದ್ರ ಮೋದಿ ಸರ್ಕಾರ, ದೇಶಾದ್ಯಂತ ಮೆಗಾ ಫುಡ್ ಪಾರ್ಕ್‌ಗಳ ಸ್ಥಾಪನೆಗೆ ಒತ್ತು ನೀಡಿತು. ಇಲ್ಲಿಯವರೆಗೆ ದೇಶದಲ್ಲಿ 40 ಮೆಗಾ ಫುಡ್ ಪಾಕ್‌ಗಳಿಗೆ ಅನುಮತಿ ನೀಡಲಾಗಿದ್ದು, ಕರ್ನಾಕದಲ್ಲಿ ತುಮಕೂರಿನಲ್ಲಿ 144.33 ಕೋಟಿ ರಊ., ಹಾಗೂ ಮಂಡ್ಯದಲ್ಲಿ 113.83 ಕೋಟಿ ರೂ. ವೆಚ್ಚದಲ್ಲಿ ಸ್ಥಾಪನೆಯಾಗುತ್ತಿವೆ.
14 ಕೋಲ್ಡ್ ಚೈನ್ ಯೋಜನೆಗಳಿಗೆ ಹಣಕಾಸು ನೆರವು ನೀಡಲು ಒಪ್ಪಿಗೆ ನೀಡಲಾಗಿದೆ. 

-------------------------------

ಸ್ವಚ್ಛ ಭಾರತ ಮಿಷನ್(ಗ್ರಾಮೀಣ)

ಗ್ರಾಮೀಣ ಪ್ರದೇಶದಲ್ಲಿ ಸಾಂಕ್ರಾಮಿಕ ರೋಗಗಳು ಹರಡಲು ಪ್ರಮುಖವಾಗಿ ಬಯಲು ಬಹಿರ್ದೆಸೆ ಕಾರಣ ಎಂದು ಅನೇಕ ವರ್ಷಗಳ ಹಿಂದೆಯೇ ಕಂಡುಕೊಳ್ಳಲಾಗಿತ್ತು. ಆದರೆ ಬಯಲು ಬಹಿರ್ದೆಸೆಗೆ ತೆರಳುವ ಹವ್ಯಾಸವನ್ನು ಬದಲಿಸಿ ಸ್ವಚ್ಛ ಶೌಚಾಲಯ ನಿರ್ಮಿಸುವ ಯಶಸ್ವಿ ಅಭಿಯಾನವನ್ನು ಪ್ರಧಾನಿ ನರೇಂದ್ರ ಮೋದಿ ಆರಂಭಿಸಿದರು. ಗ್ರಾಮೀಣ ಪ್ರದೇಶದಲ್ಲಿ ಮಹಿಳೆಯರ ಗೌರವಕ್ಕೆ ಧಕ್ಕೆ ತರುತ್ತಿದ್ದ, ಅನೇಕ ಬಾರಿ ಬಯಲು ಬಹಿರ್ದೆಸೆಗೆ ತೆರಳಿದಾಗ ಅತ್ಯಾಚಾರಕ್ಕೊಳಗಾಗುತ್ತಿದ್ದ ಮಹಿಳೆಯರಿಗೆ ಯೋಜನೆ ಗೌರವ ತಂದುಕೊಟ್ಟಿದೆ. ಪ್ರಧಾನಿ ಮೋದಿಯವರ ನೇತೃತ್ವದಲ್ಲಿ ನಡೆಯುತ್ತಿರುವ ಯೋಜನೆ ಇಡೀ ವಿಶ್ವದಲ್ಲಿ ಅತಿ ದೊಡ್ಡ ಹವ್ಯಾಸ ಬದವಾಣೆ ಯೋಜನೆ ಎಂತಲೂ ಶ್ಲಾಘನೆ ಪಡೆದಿದೆ.
ಪ್ರಧಾನಿ ಮೋದಿಯವರ ಸರ್ಕಾರ ಅಸ್ತಿತ್ವಕ್ಕೆ ಬಂದ 2014-15ರಲ್ಲಿ ದೇಶಾದ್ಯಂತ 48.95 ಲಕ್ಷ ವೈಯಕ್ತಿಕ ಶೌಚಾಲಯಗಳಿದ್ದವು. ಇದೀಗ 9.2 ಕೋಟಿಗೆ ಹೆಚ್ಚಳವಾಗಿದೆ. ಅದೇ ರೀತಿ ಕರ್ನಾಟಕದಲ್ಲಿ 2014-15ರಲ್ಲಿ 7.7 ಲಕ್ಷ ವೈಯಕ್ತಿಕ ಶೌಚಾಲಯಗಳಿದ್ದವು. ಇದೀಗ 43. 97 ಲಕ್ಷ ಶೌಚಾಲಯ ನಿರ್ಮಾಣದೊಂದಿಗೆ ಇಡೀ ರಾಜ್ಯ ಬಯಲು ಬಹಿರ್ದೆಸೆ ಮುಕ್ತ ಎಂದು ಸದ್ಯದಲ್ಲೆ ಘೋಷಿಸಲ್ಪಡುವ ಹಂತಕ್ಕೆ ತಲುಪಿದೆ.



-------------------

ಹೊಸ ಬಜೆಟ್ ಘೋಷಣೆಗಳು

2019-20ರ ಮಧ್ಯಂತರ ಬಜೆಟ್‌ನಲ್ಲಿ ಕರ್ನಾಟಕಕ್ಕೆ ಅನೇಕ ಕೊಡುಗೆಗಳನ್ನು ಸರ್ಕಾರ ನೀಡಿದೆ.

7 ರೈಲು ಮಾರ್ಗಗಳು

1. ಚಿಕ್ಕಬಳ್ಳಾಪುರ-ಗೌರಿಬಿದನೂರು
2. ಗದಗ-ಯಲವಗಿ
3. ಗದಗ-ವಾಡಿ
4. ಶಿವಮೊಗ್ಗ-ರಾಣೆಬೆನ್ನೂರು
5. ರಾಯದುರ್ಗ-ತುಮಕೂರು
6. ದಾವಣಗೆರೆ-ಚಿತ್ರದುರ್ಗ-ತುಮಕೂರು
7. ಬಾಗಲಕೋಟೆ-ಕುಡಚಿ
  • ಮೆಟ್ಟುಪಾಳ್ಯಂವರೆಗೂ ವಿಸ್ತರಣೆಗೊಳ್ಳಲಿರುವ 148 ಕಿ.ಮೀ ಉದ್ದದ ಮೈಸೂರು-ಚಾಮರಾಜನಗರ ರೈಲ್ವೆ ಹಳಿ ಗೇಜ್ ಪರಿವರ್ತನೆಗೆ ಒಪ್ಪಿಗೆ ನೀಡಲಾಗಿದೆ.
  • ಯಶವಂತಪುರ-ಚನ್ನಸಂದ್ರ(121.78 ಕಿ.ಮೀ), ಬೈಯಪ್ಪನಹಳ್ಳಿ-ಹೊಸೂರು(145 ಕಿ.ಮೀ), ಬೆಂಗಳೂರು ವೈಟ್‌ಫೀಲ್ಡ್-ಬೆಂಗಳೂರು ಸಿಟಿ-ಕೆ.ಆರ್.ಪುರ(23 ಕಿ.ಮೀ), ಹೊಸಪೇಟೆ-ಹುಬ್ಬಳ್ಳಿ-ರೋಮಡಾ- ತಿನ್ನೆಘಾಟ್-ವಾಸ್ಕೋಡಗಾಮ ಮಾರ್ಗದ ಡಬ್ಲಿಂಗ್ ಕಾಮಗಾರಿಗೆ ಸಮ್ಮತಿ.
  • ಹಾವೇರಿಯ ಸವಣೂರು, ಧಾರವಾಡದ ನವಲೂರು, ದಾವಣಗೆರೆಯ ತೋಳಿಹುಣಸೆ ರೈಲು ನಿಲ್ದಾಣ ಅಭಿವೃದ್ಧಿ.
  • ಬೆಂಗಳೂರಿನಲ್ಲಿ ರೈಲ್ವೆ ಅಭಿವೃದ್ಧಿ ಕೈಗೊಳ್ಳಲು 40 ಕೋಟಿ ರೂ. ಅನುದಾನ
  • ನಮ್ಮ ಮೆಟ್ರೊಗೆ 1012 ಕೋಟಿ ರೂ.
  • ನಿಮ್ಹಾನ್ಸ್‌ಗೆ 450 ಕೋಟಿ ರೂ.
  • ಬೆಂಗಳೂರಿನ ಯುನಾನಿ ವೈದ್ಯ ಸಂಸ್ಥೆಗೆ 40 ಕೋಟಿ ರಊ.
  • ಮೈಸೂರಿನ ವಾಕ್ ಶ್ರವಣ ಸಂಸ್ಥೆಗೆ 55 ಕೋಟಿ ರೂ.
  • ರಾಜ್ಯದ ಹೆದ್ದಾರಿಗಳ ಅಭಿವೃದ್ಧಿಗೆ 300 ಕೋಟಿ ರೂ.
  • ನಗರಗಳ ಕುಡಿಯುವ ನೀರಿನ ಯೋಜನೆಗಳಿಗೆ 217 ಕೋಟಿ ರೂ
--------------------------------------------

ಬರ ಪರಿಹಾರ

೨೦೧೮ರ ಮುಂಗಾರು ಹಂಗಾಮಿನ ಬರ ಪರಿಹಾರಕ್ಕೆ ಕೇಂದ್ರದಿಂದ ಅನುದಾನದ ಖಾತರಿ ದೊರಕುತ್ತಿದ್ದಂತೆ ಈ ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರಕಾರ ತಾರತಮ್ಯ ಧೋರಣೆ ತಳೆದಿದೆ ಎಂಬ ಚರ್ಚೆ ಪುನಃ ಮುನ್ನೆಲೆಗೆ ಬಂದಿತ್ತು. ಆದರೆ, ಬರ ಪರಿಹಾರ ನೀಡುವುದರಲ್ಲಿ ಯುಪಿಎಗಿಂತ ಎನ್‌ಡಿಎ ಬೆಸ್ಟ್‌ ಎನ್ನುವುದನ್ನಿ ಅಂಕಿಅಂಶಗಳೇ ಸಾರಿ ಹೇಳುತ್ತಿವೆ.
ಮುಂಗಾರಿನಲ್ಲಿ ರಾಜ್ಯದ 100 ತಾಲೂಕುಗಳನ್ನು ಬರಪೀಡಿತವೆಂದು ಘೋಷಿಸಿ ಮಾರ್ಗಸೂಚಿ ಅನುಸಾರ 2,434 ಕೋಟಿ ರೂ. ನೀಡುವಂತೆ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಇದೀಗ 949.49 ಕೋಟಿ ರೂ. ಬಿಡುಗಡೆಗೆ ಕೇಂದ್ರದ ಉನ್ನತಾಧಿಕಾರ ಸಮಿತಿ ಒಪ್ಪಿಗೆ ನೀಡಿದೆ. ಮಹಾರಾಷ್ಟ್ರಕ್ಕೆ ನೀಡಲಾಗುವ ಪರಿಹಾರ ಮೊತ್ತಕ್ಕೆ ಹೋಲಿಸಿದರೆ ರಾಜ್ಯಕ್ಕೆ ಕೊಡುತ್ತಿರುವುದು ಅತ್ಯಲ್ಪವೆಂಬ ಆಕ್ಷೇಪ ವ್ಯಕ್ತವಾಗಿದೆ. ಕೇಂದ್ರ ಸರಕಾರ ಅನ್ಯಾಯ ಮಾಡಿರುವುದಾಗಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಅವರೇ ಆರೋಪಿಸಿದ್ದಾರೆ.
ತೀವ್ರತರ ಬರ ಹಾಗೂ ನೆರೆ ಹಾವಳಿಯಾದಾಗ ಕೇಂದ್ರ ವಿಪತ್ತು ಪರಿಹಾರ ನಿಧಿಯಿಂದ (ಎನ್‌ಡಿಆರ್‌ಎಫ್‌) ನೆರವು ಕಲ್ಪಿಸಲಾಗುತ್ತದೆ. ಇದಕ್ಕೆ ಮುನ್ನ ಕೇಂದ್ರದ ಅಧ್ಯಯನ ತಂಡವೂ ಸ್ಥಳಕ್ಕೆ ಭೇಟಿ ನೀಡಿ ಪರಾಮರ್ಶೆ ಕೈಗೊಳ್ಳುತ್ತದೆ. ನಂತರ ಕೇಂದ್ರದ ಅಂತರ್‌ ಸಚಿವಾಲಯದ ಉನ್ನತಾಧಿಕಾರ ಸಮಿತಿಯ ಸಭೆಯಲ್ಲಿ ಪರಹಾರದ ಮೊತ್ತದ ಬಗ್ಗೆ ನಿರ್ಧಾರ ಕೈಗೊಳ್ಳಲಾಗುತ್ತದೆ. ಯುಪಿಎ ಅಧಿಕಾರದಲ್ಲಿದ್ದ 10 ವರ್ಷದ ಅವಧಿಯಲ್ಲಿ ಎನ್‌ಡಿಆರ್‌ಎಫ್‌ನಿಂದ ಬಂದ ಅನುದಾನಕ್ಕೆ ಹೋಲಿಸಿದರೆ ಕೇವಲ 5 ವರ್ಷದಲ್ಲಿ ಎನ್‌ಡಿಎ ಸರಕಾರ ಅತಿ ಹೆಚ್ಚಿನ ಮೊತ್ತ ನೀಡಿದೆ.
ಎನ್‌ಡಿಎನಿಂದ ದುಪ್ಪಟ್ಟು ನೆರವು!
ಕೇಂದ್ರ ಸರಕಾರದ ಅಧಿಕೃತ ಮಾಹಿತಿಯಂತೆ ಯುಪಿಎ ಕಾಲದಲ್ಲಿ 2004ರಿಂದ 2014ರವರೆಗೆ ಎನ್‌ಡಿಆರ್‌ಎಫ್‌ನಿಂದ ಒಟ್ಟಾರೆ 3,579.86 ಕೋಟಿ ರೂ. ನೀಡಲಾಗಿದೆ. ಎನ್‌ಡಿಎ ಸರಕಾರ ರಚನೆ ಬಳಿಕ ಕಳೆದ 5 ವರ್ಷದಲ್ಲಿ 6,618.15 ಕೋಟಿ ರೂ. ಒದಗಿಸಲಾಗಿದೆ. ಅಂದರೆ ಎನ್‌ಡಿಆರ್‌ಎಫ್‌ ನೆರವಿನಲ್ಲಿ ಬಹುತೇಕ ಎರಡು ಪಟ್ಟು ಹೆಚ್ಚಳವಾದಂತಾಗಿದೆ.
ರಾಜ್ಯದಲ್ಲಿನ ಬರ ಪರಿಸ್ಥಿತಿಯ ವಿಷಯಕ್ಕೆ ಬಂದರೆ ಯುಪಿಎ ಅವಧಿಯಲ್ಲೂ ವ್ಯಾಪಕ ಬರವಿತ್ತು. ಎನ್‌ಡಿಎ ಬಂದ ಮೇಲೂ ರಾಜ್ಯದಲ್ಲಿನ ಬರದ ಸಂಕಷ್ಟ ಕಡಿಮೆಯಾಗಿಲ್ಲ. ಈ ದೃಷ್ಟಿಯಿಂದ ನೋಡಿದರೂ ಬರ ಪರಿಹಾರ ನೀಡುವಲ್ಲಿ ಮೋದಿ ಸರಕಾರ ಮುಕ್ತ ಮನಸ್ಸು ತೋರಿದೆ.

ಎನ್‌ಡಿಆರ್‌ಎಫ್‌ ಅನುದಾನ ವಿವರ

ಯುಪಿಎ

2004-2009             907.28 ಕೋಟಿ ರೂ.
2009-2014             2672.58 ಕೋಟಿ ರೂ.

ಒಟ್ಟು 3,579.86 ಕೋಟಿ ರೂ.

ಎನ್‌ಡಿಎ

2014-2015            271.38 ಕೋಟಿ ರೂ.
2015-2016           1,645.53 ಕೋಟಿ ರೂ.
2016-2017            2,292.50 ಕೋಟಿ ರೂ.
2017-2018            913.04 ಕೋಟಿ ರೂ.
2018-2019            546.21 ಕೋಟಿ ರೂ. ಮತ್ತು 949.49 ಕೋಟಿ ರೂ.

ಒಟ್ಟು 6,618.15 ಕೋಟಿ ರೂ.

*******************************

ಬೆಂಗಳೂರು-ಮೈಸೂರು ಚತುಷ್ಪಥ ರಾಷ್ಟ್ರೀಯ ಹೆದ್ದಾರಿ

ಬಹುನಿರೀಕ್ಷೆಯ ಬೆಂಗಳೂರು-ಮೈಸೂರು ಚತುಷ್ಪಥ ರಾಷ್ಟ್ರೀಯ ಹೆದ್ದಾರಿಯನ್ನು ಷಟ್ಪಥ ರಸ್ತೆಯಾಗಿ ಅಭಿವೃದ್ಧಿಪಡಿಸುವ ಕಾಮಗಾರಿಗೆ ೨೦೧೮ರ ಮಾ.೨೮ ಕ್ಕೆ ಕೇಂದ್ರ ಭೂ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ಶಂಕುಸ್ಥಾಪನೆ ನೆರವೇರಿಸಿದರು.
ಒಟ್ಟು 7 ಸಾವಿರ ಕೋಟಿ ರೂ. ವೆಚ್ಚದ ಈ ಯೋಜನೆ ಎರಡು ಹಂತಗಳಲ್ಲಿ ನಡೆಯಲಿದೆ. ಒಂದನೇ ಹಂತದಲ್ಲಿ ಬೆಂಗಳೂರು-ನಿಡಘಟ್ಟ ಮಾರ್ಗದಲ್ಲಿ 56 ಕಿ.ಮೀ. ಉದ್ದ ಹಾಗೂ ಎರಡನೇ ಹಂತದಲ್ಲಿ ನಿಡಘಟ್ಟ-ಮೈಸೂರು ಮಾರ್ಗದಲ್ಲಿ 61 ಕಿ.ಮೀ. ಉದ್ದದ ರಸ್ತೆಯನ್ನು ಆರು ಪಥವಾಗಿ ನಿರ್ಮಿಸಲಾಗುತ್ತದೆ. ಇದರ ಜತೆಗೆ ಬಿಡದಿ, ರಾಮನಗರ, ಚನ್ನಪಟ್ಟಣ, ಮದ್ದೂರು, ಮಂಡ್ಯ, ಶ್ರೀರಂಗಪಟ್ಟಣದಲ್ಲಿ 6 ಬೈಪಾಸ್‌ ರಸ್ತೆ ನಿರ್ಮಾಣವಾಗಲಿದೆ. ಆರು ಪಥದ ರಸ್ತೆಯ ಎರಡೂ ಬದಿ ಸವೀರ್‍ಸ್‌ ರಸ್ತೆ ನಿರ್ಮಾಣವಾಗಲಿದೆ. 
ಪ್ರಸ್ತುತ ಬೆಂಗಳೂರು-ಮೈಸೂರು ಪ್ರಯಾಣಕ್ಕೆ ಮೂರು ಗಂಟೆ ಬೇಕಿದೆ. ರಸ್ತೆ ಆರು ಪಥವಾದ ನಂತರ 1.25 ಗಂಟೆ ಸಾಕಾಗುತ್ತದೆ. ಕಾಮಗಾರಿ ಪೂರ್ಣಗೊಳ್ಳಲು ಎರಡೂವರೆ ವರ್ಷ ಗಡುವು ನೀಡಲಾಗಿದೆ. 

ಇದೇ ಸಂದರ್ಭ ಕೇರಳ ಗಡಿಯಿಂದ ಕೊಳ್ಳೇಗಾಲದವರೆಗೆ 586 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿದ 130 ಕಿ.ಮೀ. ಉದ್ದದ ರಸ್ತೆಯನ್ನು ಉದ್ಘಾಟಿಸಲಾಯಿತು. ರಾಷ್ಟ್ರೀಯ ಹೆದ್ದಾರಿ 209 ರಲ್ಲಿ ಬಿಆರ್‌ಟಿ ಮೀಸಲು ಗಡಿಯಿಂದ ಬೆಂಗಳೂರುವರೆಗೆ 171 ಕಿ.ಮೀ. ಉದ್ದದ ದ್ವಿಪಥ ಹಾಗೂ ಚತುಷ್ಪಥ ರಸ್ತೆ ನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನೆ ನೇರವೇರಿತು.
ಬೆಂಗಳೂರಿನಲ್ಲಿ 10 ಸಾವಿರ ಕೋಟಿ ರೂ. ವೆಚ್ಚದಲ್ಲಿ ರಿಂಗ್‌ ರಸ್ತೆ ಹಾಗೂ ಮೈಸೂರಿನಲ್ಲಿ ರಿಂಗ್‌ ರಸ್ತೆ ನಿರ್ಮಿಸಲಾಗುತ್ತಿದೆ. ಈ ಯೋಜನೆಗಳಿಗೆ ಸದ್ಯದಲ್ಲೇ ಚಾಲನೆ ನೀಡಲಾಗುವುದು.


--- ರಮೇಶ ದೊಡ್ಡಪುರ- rameshapm@gmail.com

ಸೋಮವಾರ, ಡಿಸೆಂಬರ್ 17, 2018

ಸಮಾಜ- ವ್ಯವಸ್ಥೆ ಸಂಪರ್ಕ ಕಡಿತಗೊಂಡಾಗ

ಮಾಜದ ವಿವಿಧ ಸ್ತರಗಳನ್ನು ನಿರ್ವಹಿಸಲು ಸರ್ಕಾರದ ಮಟ್ಟದಲ್ಲಿ ವ್ಯವಸ್ಥೆ, ಇಲಾಖೆ ರೂಪಿಸಲಾಗಿದೆ. ಆದರೆ ಸಮಾಜದ ರಚನೆಗೂ ಸರ್ಕಾರದ ವ್ಯವಸ್ಥೆಗೂ ಸಂಬಂಧವೇ ಇಲ್ಲದೆ ಎಲ್ಲವೂ ಸರ್ಕಾರದ ಮೂಗಿನ ನೇರಕ್ಕೇ ನಡೆಯುತ್ತವೆ ಎಂಬುದಕ್ಕೆ ಇತ್ತೀಚಿನ ಕರ್ನಾಟಕ ಮುಜರಾಯಿ ಇಲಾಖೆ ಹೊರಡಿಸಿರುವ ಸುತ್ತೋಲೆಯಿಂದ ಮತ್ತೊಮ್ಮೆ ಸಾಬೀತಾಗಿದೆ.
ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲ್ಲೂಕಿನ ಸುಳ್ವಾಡಿ ಗ್ರಾಮದಲ್ಲಿ ಕಿಚ್ಚುಗತ್ತಿ ಮಾರಮ್ಮ ದೇವಾಲಯದಲ್ಲಿ ನೂತನ ಗೋಪುರ ನಿರ್ಮಾಣಕ್ಕೆ ಶಂಕುಸ್ಥಾಪನೆಯನ್ನು ಡಿಸೆಂಬರ್ 14ಕ್ಕೆ ನೆರವೇರಿಸಲಾಗಿತ್ತು. ಸಾಲೂರು ಬೃಹನ್ಮಠದ ಗುರುಸ್ವಾಮೀಜಿಯವರು ಪೂಜೆಯನ್ನು ನೆರವೇರಿಸಿದ್ದರು. ಸುಳ್ವಾಡಿ ಗ್ರಾಮಸ್ಥರು ಸೇರಿ ಸುತ್ತಮುತ್ತಲ ಬಿದರಹಳ್ಳಿ, ಎಂ.ಜಿ. ದೊಡ್ಡಿ, ದೊಡ್ಡಾನೆ ಸೇರಿ ಸುತ್ತಮುತ್ತಲಿನ ಗ್ರಾಮಸ್ಥರು ಆಗಮಿಸಿದ್ದರು. ಪೂಜೆಯ ನಂತರ ಭಕ್ತರಿಗೆ ಪ್ರಸಾದ ರೂಪದಲ್ಲಿ ತರಕಾರಿ ಅನ್ನ ನೀಡಲಾಯಿತು. ಆಹಾರ ಸೇವಿಸಿದ ಅರ್ಧಗಂಟೆ ನಂತರ ಅನೇಕರು ವಾಂತಿ ಮಾಡಿಕೊಳ್ಳಲು ಆರಂಭಿಸಿದರು. ಭಯಭೀತ ವಾತಾವರಣ ನೋಡಿ ಬೆಚ್ಚಿದ ಜನರು ಪೊಲೀಸರಿಗೆ ಕರೆ ಮಾಡಿ ವಿವರಿಸಿದರು, ಕೆಲವರು ಆ್ಯಂಬುಲೆನ್ಸ್‌ಗೆ ಕರೆ ಮಾಡಿದರು. ದೇವಸ್ಥಾನದ ಆವರಣದಲ್ಲಿ ನಡೆಯಬಾರದ್ದು ನಡೆದು ಹೋಗಿತ್ತು. ಆಹಾರ ಸೇವಿಸಿದ 150ಕ್ಕೂ ಹೆಚ್ಚು ಭಕ್ತರು ಅಸ್ವಸ್ಥಗೊಂಡರು. ಸ್ಥಳದಲ್ಲಿ, ಮೈಸೂರು ಆಸ್ಪತ್ರೆಯಲ್ಲಿ ಸೇರಿ 14 ಜನರು ಮೃತಪಟ್ಟರು. ಇನ್ನೂ ಅನೇಕರನ್ನು ತೀವ್ರನಿಗಾ ಘಟಕದಲ್ಲಿ ಇರಿಸಲಾಗಿದೆ. ಅನೇಕ ಮಕ್ಕಳು ತಂದೆ ತಾಯಿ ಕಳೆದುಕೊಂಡಿದ್ದಾರೆ. ಕುಟುಂಬದ ಏಕೈಕ ದುಡಿಯುವ ಮೂಲವಾಗಿದ್ದ ಮಹಿಳೆಯರು, ಪುರುಷರು ಮೃತಪಟ್ಟಿದ್ದಾರೆ. ಮಾನವನ ಧ್ವೇಷಕ್ಕೋ, ಅಸೂಯೆಗೋ, ಮೈಮರೆವಿನಿಂದಲೋ ಒಟ್ಟಿನಲ್ಲಿ ದೇವಸ್ಥಾನದಲ್ಲಿ ಎಂದೂ ಊಹಿಸದ ಘಟನೆ ನಡೆದುಹೋಗಿದೆ.
ಕಿಚ್ಚುಗತ್ತಿ ಮಾರಮ್ಮ ದೇವಾಲಯ
ಸಾಮಾನ್ಯವಾಗಿ ಯಾವುದೇ ಘಟನೆಗೆ ಪ್ರತಿಕ್ರಿಯಿಸುವಂತೆಯೇ ಈಗಿನ ಸರ್ಕಾರ, ಅಧಿಕಾರಿಗಳು ಸ್ಪಂದಿಸಿದರು. ಘಟನೆ ಕುರಿತು ತೀವ್ರ ಕಳವಳ ವ್ಯಕ್ತಪಡಿಸುವುದು ಮೊದಲ ಹೆಜ್ಜೆ. ಘಟನೆಯಲ್ಲಿ ಮೃತಪಟ್ಟವರ ಕುಟುಂಬಕ್ಕೆ ಇಂತಷ್ಟು ಲಕ್ಷ ‘ಪರಿಹಾರ’ ನೀಡಿ ಎಂದು ಒತ್ತಾಯಿಸುವುದು ಪ್ರತಿಪಕ್ಷಗಳ ಸಹಜಧರ್ಮ! ಮುಖ್ಯಮಂತ್ರಿ ಸಹ ಒಂದಿನಿತೂ ತಡ ಮಾಡದೆ ಮೃತರ ಕುಟುಂಬಕ್ಕೆ ತಲಾ 5 ಲಕ್ಷ ರೂ. ‘ಪರಿಹಾರ’ ಘೋಷಿಸಿ ತಮ್ಮ ಮಾನವೀಯತೆ ಮೆರೆದರು. ಅದು ರೈಲಿರಲಿ, ಕಟ್ಟಡದಲ್ಲಿ ಅಗ್ನಿ ಅವಘಡವಾಗಲಿ, ಬಸ್ ಅಪಘಾತವಾಗಲಿ... ಮೃತಪಟ್ಟವರ ಕುಟುಂಬಕ್ಕೆ ನೀಡುವ ಹಣಕ್ಕೆ ಪರಿಹಾರ ಎಂದು ಯಾರು ಹೆಸರಿಟ್ಟರೋ ಗೊತ್ತಿಲ್ಲ. ಸರ್ಕಾರ ನೀಡುವ ಹಣದಿಂದ ಕುಟುಂಬದವರ ನೋವು ಪರಿಹಾರವಾಯಿತು ಎಂದು ಇದರ ಅರ್ಥವೇ? ಅನೇಕ ವೇಳೆ ರಸ್ತೆ ನಿರ್ವಹಣೆ, ಬೆಂಕಿ ರಕ್ಷಣೆ ಸಾಧನಗಳ ನಿರ್ವಹಣೆ ವಿಷಯದಲ್ಲಿ ಕಾನೂನನ್ನು ಸರಿಯಾಗಿ ಜಾರಿ ಮಾಡದೆ ಅಪಘಾತ ಉಂಟಾಗಿದ್ದರಿಂದ ಸರ್ಕಾರ ತಾನು ಮಾಡಿದ ಪಾಪಕ್ಕೆ ಕಂಡುಕೊಂಡ ಪರಿಹಾರವೇ?
          ಸುಲ್ವಾಡಿ ಗ್ರಾಮದ ಘಟನೆ ನಂತರ ಸ್ಥಳಕ್ಕಾಗಮಿಸಿದ ಪೊಲೀಸರು ಸುತ್ತಮುತ್ತಲಿದ್ದ ಆಹಾರ ಪದಾರ್ಥ, ಭಕ್ತರ ವಾಂತಿಯ ಮಾದರಿ ಸೇರಿ ಕುರುಹುಗಳನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳಿಸಿಕೊಟ್ಟರು. ಮೇಲ್ನೋಟಕ್ಕೇ ಆಹಾರದಲ್ಲಿ ಏನೋ ಬೆರೆಸಲಾಗಿದೆ ಎಂಬುದು ತಿಳಿದಿದ್ದರೂ, ಸಸ್ಯಗಳಿಗೆ ಕ್ರಿಮಿ ಕೀಟ ಬಾರದಂತೆ ಸಿಂಪಡಿಸುವ ಮೋನೋ ಕ್ರೋಟೋಫೋಸ್ ಬೆರೆಸಲಾಗಿದೆ ಎಂಬುದು ಪ್ರಯೋಗಾಲಯ ವರದಿ ಹೇಳಿದೆ. ರೈತರ ಮನೆಯಲ್ಲಿ ಸಾಮಾನ್ಯವಾಗಿ ಇರುವ ಕೀಟನಾಶಕವನ್ನು ಅದ್ಯಾವ ದುರ್ಬದ್ಧಿಯವ ಬೆರೆಸಿ ಜೀವಕ್ಕೆರವಾದ ಎಂಬುದು ತಿಳಿಯಬೇಕಷ್ಟೆ.
          ಈ ಎಲ್ಲದರ ನಡುವೆ ರಾಜ್ಯದ ಎಲ್ಲ ದೇವಸ್ಥಾನಗಳನ್ನು ನಿರ್ವಹಿಸುವ ಗುತ್ತಿಗೆ ಪಡೆದಂತೆ ವರ್ತಿಸುವ ಸರ್ಕಾರದ ಮುಜರಾಯಿ ಇಲಾಖೆ ‘ಮುಂಜಾಗ್ರತಾ’ ಕ್ರಮ ಕೈಗೊಂಡಿದೆ. ಧಾರ್ಮಿಕ ದತ್ತಿ ಆಯುಕ್ತರು ಈ ಬಗ್ಗೆ ಸುತ್ತೋಲೆಯೊಂದನ್ನು ಹೊರಡಿಸಿದ್ದಾರೆ. ದೇವರ ನೈವೇದ್ಯ ಹಾಗೂ ದಾಸೋಹ ತಯಾರಿಸುವ ಅಡುಗೆ ಮನೆಗೆ ಸಿಸಿಟಿವಿ ಕಡ್ಡಾಯ ಮಾಡಲಾಗಿದೆ. ಅಡುಗೆ ಕೋಣೆಗೆ ಯಾವುದೇ ಅನಧಿಕೃತ ವ್ಯಕ್ತಿಗಳು ಪ್ರವೇಶಿಸದಂತೆ ಎಚ್ಚರಿಕೆ ವಹಿಸಬೇಕು. ತಯಾರಿಸಿದ ಅಡುಗೆ ಅಥವಾ ನೈವೇದ್ಯ ವಿತರನೆಗೆ ಯೋಗ್ಯ ಎಂಬುದನ್ನು ಖಚಿತಪಡಿಸಿಕೊಂಡ ನಂತರವೇ ಭಕ್ತರಿಗೆ ನೀಡಬೇಕು ಎಂದಿದೆ. ಇದೆಲ್ಲಕ್ಕಿಂತ ಮುಖ್ಯವಾಗಿ ದೇವಾಲಯದ ಆವರಣದಲ್ಲಿ ಭಕ್ತರೇ ತಯಾರಿಸಿ ವಿತರಿಸುವ ಆಹಾರ ನೀಡಲು ಪೂರ್ವ ಅನುಮತಿ ಕಡ್ಡಾಯ. ಆರೋಗ್ಯ ಇಲಾಕೆಯ ಆರೋಗ್ಯ ಅಧೀಕ್ಷಕರಿಂದ ದೃಢೀಕರಿಸಿಕೊಂಡು ವಿತರಣೆ ಮಾಡಬೇಕು ಎಂದು ಶನಿವಾರ ಹೊರಡಿಸಿರುವ ಪತ್ರದಲ್ಲಿ ತಿಳಿಸಲಾಗಿದೆ.

ಮುಜರಾಯಿ ಇಲಾಖೆ ಹೊರಡಿಸಿರುವ ಸುತ್ತೋಲೆ ಪುಟ-2
ಮುಜರಾಯಿ ಇಲಾಖೆ ಹೊರಡಿಸಿರುವ ಸುತ್ತೋಲೆ ಪುಟ-1
            ಭಾರತದಂತಹ, ವಿಶ್ವದ ಯಾವುದೇ ದೇಶಕ್ಕೆ ಹೋಲಿಸಲಾಗದ ಜನಸಂಖ್ಯೆ, ವೈವಿಧ್ಯತೆ, ಸಂಕೀರ್ಣತೆಯನ್ನು ಅರ್ಥ ಮಾಡಿಕೊಳ್ಳದ ಅಧಿಕಾರಿಗಳು ಮಾತ್ರ ಇಂಥ ಆದೇಶ ಹೊರಡಿಸಲು ಸಾಧ್ಯ. ನೆಲದ ಮಣ್ಣಿನ ಊಟವನ್ನೇ ತಿನ್ನುತ್ತಿದ್ದರೂ ತಲೆಯಲ್ಲಿ ಪಾಶ್ಚಾತ್ಯ ಶಿಕ್ಷಣದ ಪ್ರಭಾವ ಇರಿಸಿಕೊಂಡಿರುವ, ಎಲ್ಲವನ್ನೂ ಸರ್ಕಾರ ನಿಯಂತ್ರಿಸಬೇಕು ಎಂಬ ಸಮಾಜವಾದದ ಮನೋಭಾವ ಹೊಕ್ಕಿರುವುದು ಇದರಿಂದ ತಿಳಿಯುತ್ತದೆ.
ಮುಜರಾಯಿ ಇಲಾಖೆಯ ಅಧೀನದಲ್ಲಿ 34,892 ದೇವಸ್ಥಾನಗಳಿವೆ. ಈ ಪೈಕಿ ವಾರ್ಷಿಕ 25 ಲಕ್ಷ ರೂ.ಗಿಂತ ಹೆಚ್ಚಿನ ‘ಆದಾಯ’ ಗಳಿಸುವ 164, ವಾರ್ಷಿಕ 5-25 ಲಕ್ಷ ರೂ.ವರೆಗಿನ 283 ಹಾಗೂ ಉಳಿದ 34 ಸಾವಿರಕ್ಕೂ ಹೆಚ್ಚು ದೇವಾಲಯಗಳನ್ನು ಕ್ರಮವಾಗಿ ಎ, ಬಿ ಹಾಗೂ ಸಿ ಎಂದು ವರ್ಗೀಕರಿಸಲಾಗಿದೆ. ಇನ್ನು, ದೇವರ ದಯೆಯಿಂದ ಸರ್ಕಾರದ ಅಧೀನಕ್ಕೆ ಒಳಪಡದ ಸುಮಾರು 1.5 ಲಕ್ಷಕ್ಕೂ ಹೆಚ್ಚು ಖಾಸಗಿ, ಟ್ರಸ್ಟ್, ಊರು ದೇವಸ್ಥಾನಗಳು, ಗುಡಿಗಳಿವೆ. ಅನೇಕ ದೇವಸ್ಥಾನಗಳಲ್ಲಿ ದಿನದ ಎರಡು ಹೊತ್ತು ನೈವೇದ್ಯ ಮಾಡಲಾಗುತ್ತದೆ. ಸಾವಿರಾರು ದೇವಸ್ಥಾನಗಳಲ್ಲಿ ದಾಸೋಹ ವ್ಯವಸ್ಥೆಯಿದೆ. ಲಕ್ಷಾಂತರ ಜನರು ಆಹಾರ ಸೇವನೆ ಮಾಡುತ್ತಾರೆ. ದೇವಸ್ಥಾನಕ್ಕೆ ಹರಕೆ ಹೊತ್ತು ಮನೆಯಲ್ಲಿ ಆಹಾರ ತಯಾರಿಸಿ ಅಲ್ಲಿದ್ದ ಭಕ್ತರಿಗೆ ವಿತರಿಸುವ ಪದ್ಧತಿ ಬಹುತೇಕ ದೇವಸ್ಥಾನದಲ್ಲಿದೆ. ಇಂತಹ ಬೃಹತ್ ವ್ಯವಸ್ಥೆಯನ್ನು, 200-225 ಅಧಿಕಾರಿಗಳನ್ನು ಹೊಂದಿರುವ ಮುಜರಾಯಿ ಇಲಾಖೆ ನಿಭಾಯಿಸಲು ಸಾಧ್ಯವೇ?
          ಇನ್ನು, ಪ್ರಸಾದ ಎಂಬುದಕ್ಕೊಂದು ಧಾರ್ಮಿಕ, ಆಗಮ ವ್ಯವಸ್ಥೆಯಿದೆ ಎಂಬುದೇ ಅಧಿಕಾರಿಗಳಿಗೆ ತಿಳಿದಿಲ್ಲ. ನೈವೇದ್ಯ ಎಂಬುದೇ, ದೇವರಿಗೆ ಮೊದಲು ಆಹಾರ ನೀಡುವ ಕೈಂಕರ್ಯ. ದೇವರು ಆಸ್ವಾದಿಸಿ ಬಿಟ್ಟದ್ದನ್ನು ಪ್ರಸಾದ ಎಂದು ಭಕ್ತರು ಸೇವಿಸುತ್ತಾರೆ. ಅಂಥದ್ದರಲ್ಲಿ, ದೇವರಿಗೂ ಮೊದಲೇ ಮುಜರಾಯಿ ಇಲಾಖೆ ಅಧಿಕಾರಿಯೋ, ಸರ್ಕಾರಿ ವೈದ್ಯನೋ ಸೇವಿಸಿ ನೀಡಿದ್ದನ್ನು ‘ನೈವೇದ್ಯ’ ಮಾಡುವುದು ಹೇಗೆ? ವೈದ್ಯೋ ನಾರಾಯಣೋ ಹರಿಃ ಎಂದು ಹೇಳುತ್ತೇವಾದರೂ ಹರಿಯ ಆಹಾರಕ್ಕೇ ಕೈಹಾಕಬಾರದು ಅಲ್ಲವೇ? ಇಡೀ ವ್ಯವಸ್ಥೆ ಹೇಗೆ ಕೆಲಸ ಮಾಡುತ್ತದೆ ಎಂಬ ಪ್ರಾಥಮಿಕ ಜ್ಞಾನವೂ ಇಲ್ಲ ಎಂಭುದನ್ನು ಇದು ನಿರೂಪಿಸುತ್ತದೆ. ತಲೆತಲಾಂತರಗಳಿಂದ ನಮ್ಮ ಸಮಾಜದಲ್ಲಿ ರಾಮನವಮಿಗೆ ಪಾನಕ, ಮಕ್ಕಿಗೆ, ಕೋಸಂಬರಿ ನೀಡುವ ಸಂಪ್ರದಾಯವಿದೆ. ದಾರಿಯಲ್ಲಿ ನಿಂತು ಸಾವಿರಾರು ಜನರು ರಾಮನ ಪ್ರಸಾದವೆಂದು ಭಾವಿಸಿ ಸ್ವೀಕರಿಸುತ್ತಾರೆ. ವಿಶ್ವದಲ್ಲೆ ಅತ್ಯಂತ ವಿಕೇಂದ್ರೀಕೃತ ಈ ವ್ಯವಸ್ಥೆಗಳನ್ನು ನಿಯಂತ್ರಿಸಲು ಸಾಧ್ಯವೇ?
       ಮುಜರಾಯಿ ಇಲಾಖೆ ಹೊರಡಿಸಿರುವ ಸುತ್ತೋಲೆ, ನಮ್ಮಿಡೀ ಸರ್ಕಾರಿ ವ್ಯವಸ್ಥೆ ನಡೆದುಕೊಳ್ಳುತ್ತಿರುವ ಪ್ರಾತಿನಿಧಿಕವಷ್ಟೆ. ಭಾರತದ ಅಗಾಧತೆ ಹಾಗೂ ಇಲ್ಲಿನ ವೈವಿಧ್ಯತೆ ಮತ್ತು ಸಂಕೀರ್ಣತೆಯನ್ನು ಅರ್ಥ ಮಾಡಿಕೊಳ್ಳುವಲ್ಲಿ ಸರ್ಕಾರದ ವ್ಯವಸ್ಥೆ ಎಡವುತ್ತಲೇ ಬಂದಿದೆ. ವಿಷ ಸೇವನೆ ಒಂದು ಅಪರಾಧ ಪ್ರಕರಣ. ಅದನ್ನು ನಿಭಾಯಿಸಲು ಪೊಲೀಸರಿದ್ದಾರೆ, ಕಾನೂನಿದೆ, ನ್ಯಾಯಾಂಗವಿದೆ. ಇದರ ಮಧ್ಯೆ ತನ್ನ ಮೂಗು ತೂರಿಸಿ ಅನವಶ್ಯಕ ಗೊಂದಲ ಸೃಷ್ಟಸುವ ಅವಶ್ಯಕತೆಯೇನಿದೆ?

ರಾಜಕೀಯವೇ ಕೇಂದ್ರವಾಗುವ ಅಪಾಯ
          ರಾಜಕೀಯವೇ ಸಮಾಜದ ಎಲ್ಲ ಆಗುಹೋಗುಗಳಿಗೂ ಕೇಂದ್ರ ಎಂಬ ಮನೋಭಾವವೂ ಇದರ ಹಿಂದೆ ಇದೆ. ಸಮಾಜದ್ದು ಎಂಬುದು ಯಾವುದೂ ಇಲ್ಲ. ಎಲ್ಲವೂ ಸರ್ಕರಕ್ಕೆ ಸೇರಿದ್ದು. ನಿನ್ನ ಜಮೀನೂ ಸರ್ಕಾರದ್ದು. ಅಲ್ಲಿ ಎಲ್ಲರೂ ಒಟ್ಟಿಗೆ ದುಡಿಯಬೇಕು. ಉಳುವವನು, ಕೂಲಿ, ಕಟಾವು ಮಾಡುವವನಿಂದ ಮೊದಲುಗೊಂಡು ಅವರ ಕೆಲಸದ ಪ್ರಮಾಣ ಲೆಕ್ಕಿಸದೆ ಎಲ್ಲರಿಗೂ ಸಮಾನವಾಗಿ ಲಾಭ ಹಂಚಿಕೆ ಮಾಡಬೇಕು ಎಂಬ ಕಮ್ಯೂನಿಸ್ಟ್ ಹಾಗೂ ಸಮಾಜವಾದದ ಸಿದ್ಧಾಂತ ಭಾರತೀಯರ ತಲೆ ಹೊಕ್ಕಿದೆ. ಲೋಕಸಭೆ, ವಿಧಾನಸೌಧ, ಜಿಲ್ಲಾಧಿಕಾರಿ ಕಚೇರಿ, ತಹಸೀಲ್ದಾರ್ ಕಚೇರಿ,... ಹೀಗೆ ಸರ್ಕಾರದ ಶಕ್ತಿಕೇಂದ್ರದ ಸುತ್ತಲೇ ಹೆಚ್ಚು ಕೆಲಸ ಮಾಡುವ ಮಾಧ್ಯಮಗಳಿಗೂ ಇದು ಗಾಢವಾಗಿದೆ. ಎಲ್ಲ ವರದಿಗಳಲ್ಲೂ, ಕೊನೆಗೆ ‘ಈ ಕುರಿತು ಸರ್ಕಾರ ಏನು ಕ್ರಮ ಕೈಗೊಳ್ಳುತ್ತದೆ ಕಾದುನೋಡೋಣ’ ಎಂಬ ಸಾಮಾನ್ಯ ಒಕ್ಕಣೆ ಕಾಣಬಹುದು. ಭಾರತ ಆಧ್ಯಾತ್ಮಿಕ ತಳಹದಿಯ ದೇಶ. ಇಲ್ಲಿ ಸತ್ಯವಂತನೇ, ಸನ್ಯಾಸಿಯೇ ಕೇಂದ್ರಬಿಂದು ಎಂಬಂತಿತ್ತು. ನಿಧಾನವಾಗಿ ಈ ಮನಸ್ಥಿತಿ ಬದಲಾಗಿ ರಾಜಕೀಯ ಕೇಂರಿತ ಸಮಾಜವಾಗಿ ಬದಲಾವಣೆ ಆಗುತ್ತಿದ್ದೇವೆ. ಸರ್ಕಾರವೂ ತನ್ನ ಮಿತಿಯನ್ನು ಮರೆತು ತಾನು ಸಮಾಜದ ಎಲ್ಲ ಅಂಗಗಳನ್ನೂ ನಿಯಂತ್ರಿಸಬಲ್ಲೆ, ನಾನೇ ಸಾರ್ವಭೌಮ ಎಂಬ ಭ್ರಮಾಲೋಕದಲ್ಲಿ ತೇಲುತ್ತದೆ. ಚುನಾವಣೆಯಲ್ಲಿ ತೊಂದರೆಯಾಗುತ್ತದೆ ಎನ್ನುವ ಕಾರಣ ಹೊರತುಪಡಿಸಿ ಸಮಾಜದ ಯಾವುದೇ ವಿಷಯ ತನ್ನ ವ್ಯಾಪ್ತಿಗೆ ಒಳಪಡುವುದಿಲ್ಲ ಎಂದು ಶಾಸಕಾಂಗ ಹೇಳುವುದೇ ಇಲ್ಲ.
          ನ್ಯಾಯಾಂಗವೂ ಈ ನಿಟ್ಟಿನಲ್ಲಿ ಅನೇಕ ಬಾರಿ ಶಾಸಕಾಂಗದ ಜತೆಗೆ ಸ್ಪರ್ಧೆಗಿಳಿದ ಉದಾಹರಣೆಗಳಿವೆ. ಶಬರಿಮಲೆ ದೇವಸ್ಥಾನ ಪ್ರವೇಶ ಪ್ರಕರಣ, ಸಲಿಂಗ ಕಾಮ ಹಾಗೂ ವಿವಾಹೇತರ ಸಂಬಂಧಗಳು ಅಪರಾಧವಲ್ಲ ಎಂದು ತೀರ್ಪಿತ್ತಿದ್ದು ಇತ್ತೀಚೆಗೆ ಚರ್ಚೆಗೆ ಗ್ರಾಸವಾಗಿರುವ ವಿಷಯಗಳು. ಸಂವಿಧಾನದ ಘನತೆಯನ್ನು, ಭಾವನೆಯನ್ನು ಎತ್ತಿಹಿಡಿಯಬೇಕಾದ್ದು ಪ್ರತಿ ಭಾರತೀಯನ ಕರ್ತವ್ಯವಾದರೂ, ಸಮಾಜದ ಸಂರಚನೆ ಅರ್ಥ ಮಾಡಿಕೊಂಡು ಹೆಜ್ಜೆ ಇಡುವ ಜವಾಬ್ದಾರಿ ಎಲ್ಲರಿಗೂ ಇರಬೇಕು.
          ಸಮಾಜದ ಪ್ರತಿ ಸಮಸ್ಯೆಗೂ ಕಾನೂನಿನ ಮೂಲಕ ಪರಿಹಾರ ಕಂಡುಕೊಳ್ಳಬಹುದು ಎಂಬುದು ಶಾಸಕಾಂಗ ಹಾಗೂ ಅನೇಕ ಬಾರಿ ನ್ಯಾಯಾಂಗದ ಬಲವಾದ ನಂಬಿಕೆ. ಭಾರತದಲ್ಲಿ 2009ರವರೆಗೆ ಆಡಳಿತ ನಡೆಸಿದ ಸರ್ಕಾರಗಳು ತಮ್ಮ ಐದು ವರ್ಷದ ಆಡಳಿತದಲ್ಲಿ ಸರಾಸರಿ 317 ಕಾನೂನು ಜಾರಿ ಅಥವಾ ಮಸೂದೆ ಅಂಗೀಕರಿಸಿವೆ. 2009-14ರ ಯುಪಿಎ-2 ಅವಧಿಯಲ್ಲಿ 179 ಮಸೂದೆಗಳು ಅಂಗೀಕರಿಸಲ್ಪಟ್ಟಿತ್ತು. ಸದ್ಯ ಅಧಿಕಾರದಲ್ಲಿರುವ ಎನ್‌ಡಿಎ ಸರ್ಕಾರ ಇಲ್ಲಿವರೆಗೆ 109 ಮಸೂದೆಗಳಿಗೆ ಒಪ್ಪಿಗೆ ನೀಡಿದೆ. ಇದರಲ್ಲಿ ಹೊಸ ಕಾನೂನುಗಳು, ಇರುವ ಕಾನೂನಿಗೆ ತಿದ್ದುಪಡಿ ಸೇರುತ್ತವೆ. ಸಮಸ್ಯೆ ಹೊಸದಾಗಿದ್ದರೂ ಈಗಾಗಲೆ ಇರುವ ಕಾನೂನುಗಳ ಮೂಲಕವೇ ಅವನ್ನು ನಿರ್ವಹಿಸುವ ಸಾಧ್ಯತೆಯನ್ನೂ ಪರಿಗಣಿಸುವುದಿಲ್ಲ. ಸತೀ ಪದ್ಧತಿ ನಿಷೇಧಕ್ಕೆ ಹೊಸ ಕಾನೂನು ರೂಪಿಸಲಾಯಿತು. ಈ ವೇಳೆಗಾಗಲೆ ಆತ್ಮಹತ್ಯೆ ಪ್ರಯತ್ನವನ್ನು ಅಪರಾಧ ಎಂದು ಕಾನೂನು, ಅದಕ್ಕೆ ಶಿಕ್ಷೆಯ ಪ್ರಮಾಣ ಇತ್ತು. ಸತಿ ಪದ್ಧತಿಯನ್ನೂ ಆತ್ಮಹತ್ಯೆಯ ಮತ್ತೊಂದು ವಿಧ ಎಂದು ಪರಿಗಣಿಸಿದರೆ ಇಡೀ ಸಮಸ್ಯೆಯನ್ನು ಹಳೆಯ ಕಾನೂನಿನಲ್ಲೆ ನಿಭಾಯಿಸಬಹುದಿತ್ತು ಎಂಬುದು ಕೆಲವು ತಜ್ಞರ ಅಭಿಪ್ರಾಯ.
          ತಮ್ಮ ಹೊಣೆಗಾರಿಕೆಯನ್ನು ಕಡಿಮೆಮಾಡಿಕೊಂಡು, ಉತ್ತರದಾಯಿತ್ವದಿಂದ ನುಣುಚಿಕೊಳ್ಳಲು ಅನೇಕ ಬಾರಿ ಕಾರ್ಯಾಂಗವೂ ಹೊಸ ಕಾನೂನು, ಆದೇಶದ ಮೊರೆ ಹೋಗುತ್ತದೆ. ಮುಂದೆ ಮತ್ತೊಂದು ದೇವಸ್ಥಾನದಲ್ಲಿ ವಿಷ ಸೇವನೆ ಪ್ರಕರಣ ದಾಖಲಾದರೆ, ನ್ಯಾಯಾಲಯ ತಮ್ಮ ಮೇಲೆ ಆಘಾತ ಮಾಡಬಹುದು. ಅದಕ್ಕೆಂದೇ ತಮ್ಮ ರಕ್ಷಣೆ ಸಲುವಾಗಿ ಒಂದು ಆದೇಶ ಹೊರಡಿಸೋಣ. ನ್ಯಾಯಾಲಯ ಕೇಳಿದರೆ ಇದನ್ನು ತೋರಿಸಿದರಾಯಿತು ಎಂಬ ಮನೋಭಾವವೂ ಇರುತ್ತದೆ. ಇಂತಹ ಆದೇಶಗಳು ಅನೇಕ ಬಾರಿ ಲಾಭಕಾರಕವೂ ಹೌದು. ಇದೀಗ ಕೆಲವು ಸಿಸಿಟಿವಿ ಮಾರಾಟಗಾರರು ಮುಜರಾಯಿ ಇಲಾಖೆ ಅಧಿಕಾರಿಗಳನ್ನು ಭೇಟಿ ಮಾಡಿರಲಿಕ್ಕೂ ಸಾಕು. ಇಂತಿಷ್ಟು ಅಡುಗೆ ಮನೆಗೆ ಸಿಸಿಟಿವಿ ಅಳವಡಿಕೆಗೆ ಟೆಂಡರ್, ಅದರಲ್ಲಿ ಕಮಿಷನ್ ದಂಧೆಗೆ ಈ ಆದೇಶ ರಹದಾರಿಯೂ ಆಗಬಹುದು.
          ಕರ್ನಾಟಕದಲ್ಲಿ ಆರು ಕೋಟಿ ಜನರಿದ್ದು, ಈ ಪೈಕಿ ಎಲ್ಲ ಇಲಾಖೆಗಳ, ಎಲ್ಲ ಸ್ತರದ ಸರ್ಕಾರಿ ನೌಕರರ ಸಂಖ್ಯೆ ಕೇವಲ 6 ಲಕ್ಷವೂ ಇಲ್ಲ. ತನಗೂ ಒಂದು ಮಿತಿಯಿದೆ ಎಂಬುದನ್ನು ಸರ್ಕಾರಿ ವ್ಯವಸ್ತೆ ಮೊದಲು ಅರ್ಥ ಮಾಡಿಕೊಳ್ಳಬೇಕು. ಸಮಾಜದಲ್ಲಿ ಸೌಹಾರ್ದತೆ ಕಾಪಾಡಲು ಅವಶ್ಯಕ ಕ್ರಮಗಳನ್ನು ಸಾಮೂಹಿಕ ಮಾಧ್ಯಮಗಳ ಮೂಲಕ ಪಸರಿಸಬಹುದು. ಪ್ರತಿ ವ್ಯಕ್ತಿಯ ಮೇಲೆ ಕಣ್ಗಾವಲಿಡುವ, ನಿಯಂತ್ರಿಸುವ ಮನಸ್ಥಿತಿ ಅಸಾಧ್ಯ.