ಬುಧವಾರ, ಡಿಸೆಂಬರ್ 22, 2010

Why blame Arundhati for supporting Kashmiri people? - U R Ananthamurthy


     ಉಡುಪಿ, ಡಿ. 22 : "ಕಾಶ್ಮೀರ ಯಾವತ್ತೂ ಭಾರತದ ಅಂಗವಾಗಿರಲೇ ಇಲ್ಲ" ಎಂದು ಹೇಳಿಕೆ ನೀಡಿ ಇಡೀ ದೇಶದ ವೈರುಧ್ಯ ಕಟ್ಟಿಕೊಂಡಿರುವ ಲೇಖಕಿ ಅರುಂಧತಿ ರಾಯ್ ಅವರಿಗೆ ಕರ್ನಾಟಕದ ಜ್ಞಾನಪೀಠ ಪ್ರಶಸ್ತಿ ವಿಜೇತ ಲೇಖಕ ಡಾ.ಯು.ಆರ್. ಅನಂತಮೂರ್ತಿ ಅವರಿಂದ ಬೆಂಬಲ ದೊರೆತಿದೆ.
     79 ವಸಂತಗಳನ್ನು ಪೂರೈಸಿ 80ನೇ ವರ್ಷಕ್ಕೆ ಕಾಲಿಟ್ಟಿರುವ ಅನಂತಮೂರ್ತಿ ಅವರನ್ನು ಸನ್ಮಾನಿಸಿ, 'ಅನಂತಮೂರ್ತಿ ಮಾತುಕತೆ : ಹತ್ತು ಸಮಸ್ತರ ಜೊತೆ' ಕೃತಿಯನ್ನು ಮಂಗಳವಾರ ಬಿಡುಗಡೆ ಮಾಡಿದ ಸಂದರ್ಭದಲ್ಲಿ ಅವರು ಅರುಂಧತಿ ರಾಯ್ ಗೆ ಬೆಂಬಲ ಸೂಚಿಸಿ ಮಾತನಾಡಿದ್ದಾರೆ.
     ಅರುಂಧತಿ ಅವರು ಮಾನವೀಯತೆಯ ಆಧಾರದ ಮೇಲೆ ಕಾಶ್ಮೀರದ ಜನರ ಹಕ್ಕಿನ ಕುರಿತು ಮಾತನಾಡಿದರೆ ಅವರನ್ನು ಭಾರತ ವಿರೋಧಿ ಎಂದು ಪಟ್ಟಕಟ್ಟುವುದು ಎಷ್ಟು ಸಮಂಜಸ ಎಂದು ಅನಂತಮೂರ್ತಿ ವಿಷಾದ ವ್ಯಕ್ತಪಡಿಸಿದರು. ಕಾಶ್ಮೀರಿ ಜನರಿಗಾಗಿ ದನಿ ಎತ್ತಿದ್ದಕ್ಕಾಗಿ ಅವರನ್ನು ದೇಶದ್ರೋಹಿ ಎಂದು ಕರೆಯುವುದು ನಾನು ಒಪ್ಪಲಾರೆ ಎಂದು ಅವರು ನುಡಿದರು.
    ಅರುಂಧತಿ ಅವರ ವಿಷಯದಲ್ಲಿ ಎತ್ತಲಾಗಿರುವ ರಾಷ್ಟ್ರೀಯತೆಯ ಕಲ್ಪನೆ ನಿಜಕ್ಕೂ ಅಪಾಯಕಾರಿ. ಮೂಲಭೂತವಾದಿಗಳ ರಾಷ್ಟ್ರೀಯತೆಗೂ ದೇಶಪ್ರೇಮಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ನಮಗೆ ಈ ಸಂದರ್ಭದಲ್ಲಿ ಬೇಕಿರುವುದು ರಾಷ್ಟ್ರೀಯತೆಗಿಂತ ಹೆಚ್ಚಾಗಿ ಗಾಂಧೀಜಿ ಮತ್ತು ಟಾಗೋರ್ ಪ್ರತಿಪಾದಿಸಿರುವ ನಾಗರಿಕತೆ. ರಾಷ್ಟ್ರೀಯತೆ ಎನ್ನುವುದು ಹಿಂದೂತ್ವದ ಮೇಲೆ ಆಧಾರಿತವಾಗಿದೆ. ನಮಗೆ ಬೇಕಿರುವುದು ನಾಗರಿಕತೆ ಮತ್ತು ಮಾನವೀಯತೆ ಎಂದು ಅವರು ವಿಶ್ಲೇಷಿಸಿದರು.


          Udupi, Dec 21:Renowned writer and Jnanpeeth awardee U R Ananthamurthy today disapproved the outbursts against writer Arundhati Roy and levelling charges of sedition when she was only raising a voice for Kashmiri people.
Speaking at a Kannada book release Ananthamurthy Mathukathe and Parampare, he asked how could people brand the writer as anti-Indian, when she has upheld Kashmiri people's rights purely on humanitarian grounds.
He said "the concept of nationalism, after what one saw in the Ms Roy episode, was dangerous as it is imbibed with fanatic fundamentalist ideologies and totally differs from patriotism." Prof. Ananthamurthy said “I love religious India and not communal India" adding that the spirit of nationalism gave birth to two world wars and made humans blind.
 

 
  



The Original News and Photos were published in ThatsKannada and Manglorean



ಸೋಮವಾರ, ಡಿಸೆಂಬರ್ 20, 2010

Bill Gates - What I'm Thinking - Real-World Solutions from World's Youth - The Gates Notes


      ಪ್ರಪಂಚದ ದೊಡ್ಡ ಸಮಸ್ಯೆಗಳಿಗೆ ಪರಿಹಾರ ಹುಡುಕುತ್ತಿರುವ ಸಾಮಾಜಿಕ ಸಂಘಟನೆಗಳಿಗೆ ಬುದ್ದಿವಂತ, ಸಮಾಜ ಸುಧಾರಣೆಯ ತುಡಿತವಿರುವ, ಉತ್ಸಾಹಿ ಯುವಕರಿಂದಲೇ ದಾರಿ ತೋರಿಸುವ ಇಮ್ಯಾಜಿನ್ ಕಪ್ 2011ರಲ್ಲಿ ಭಾಗವಹಿಸಲು ವಿದ್ಯಾರ್ಥಿಗಳಿಗೆ ಇದೊಂದು ಮುಕ್ತ ಆಹ್ವಾನ. 

     ಪ್ರಪಂಚದ ಬೇರೆ ಬೇರೆ ಕಡೆ ಹೋದಂತೆಲ್ಲಾ ನನಗೆ ಅಲ್ಲಿನ ಉತ್ಸಾಹಿ ಯುವಕರನ್ನು ಭೇಟಿಯಾಗುವ ಅವಕಾಶ ಸಿಗುತ್ತದೆ. ಪ್ರಪಂಚದ ಅತಿ ದೊಡ್ಡ ಸಮಸ್ಯೆಗಳನ್ನು ಬಗೆಹರಿಸಬೇಕೆಂದು ಅವರಲ್ಲಿರುವ ತುಡಿತದಿಂದ ನನಗೆ ಸಂತೋಷವಾಗಿದೆ. ಈ ನಿಟ್ಟಿನಲ್ಲಿ ಅವರನ್ನು ಪ್ರೌತ್ಸಾಹಿಸಲು ಹಾಗೂ ಪರಿಹಾರ ಕಂಡುಹಿಡಿಯುವ ಕೆಲಸದಲ್ಲಿ ಇನ್ನೂ ಹೆಚ್ಚು ತೊಡಗಿಸಿಕೊಳ್ಳುವಂತೆ ಮಾಡಲು, ಮೈಕ್ರೋಸಾಫ್ಟ್  ಸಂಸ್ಥೆಯು ಇದೀಗ ತನ್ನ 9ನೇ ವರ್ಷದಲ್ಲಿರುವ ಇಮ್ಯಾಜಿನ್ ಕಪ್ ಪ್ರಾರಂಭಿಸಿತು. ಕಳೆದ ವರ್ಷಗಳ ಸ್ಪರ್ಧೆಗಳಲ್ಲಿ ಸಾವಿರಾರು ವಿದ್ಯಾರ್ಥಿಗಳು ಪರಿಸರ, ಶಿಕ್ಷಣ, ವಿಕೋಪ ಪರಿಹಾರ ಮಾರ್ಗಗಳು ಹಾಗೂ ಆರೋಗ್ಯದ ಕುರಿತಾದ ದೊಡ್ಡ ಸಮಸ್ಯೆಗಳಿಗೆ ವಿನೂತನ ಪರಿಹಾರ ಮಾರ್ಗಗಳೊಂದಿಗೆ ಸಾವಿರಾರು ಸಂಖ್ಯೆಯಲ್ಲಿ ಭಾಗವಹಿಸಿದ್ದಾರೆ.

English Article Link.
     ಆದರೆ ಈ ವರ್ಷದ ಸ್ಪರ್ಧೆಯ ಸ್ವರೂಪ ಸ್ವಲ್ಪ ಬದಲಾಗಿದೆ. ವಿಶ್ವದ ಸಮಸ್ಯೆಗಳನ್ನು ಪರಿಹರಿಸಲು ದಾರಿ ಹುಡುಕುತ್ತಿರುವ ವಿವಿಧ ಸಂಘ ಸಂಸ್ಥೆಗಳ ಪ್ರಾಕ್ಟಿಕಲ್ ಸಮಸ್ಯೆಗಳಿಗೆ ವಿದ್ಯಾರ್ಥಿಗಳು ಪರಿಹಾರ ಸೂಚಿಸಬೇಕಾಗಿದೆ. ಈ ಬಾರಿಯ ಸ್ಪರ್ಧೆಯು, ಯುವಕರ ಹೊಸ ಆಲೋಚನೆಗಳನ್ನು ಮಾರುವ (ಹಣಕ್ಕಲ್ಲ)  ಮಾರುಕಟ್ಟೆಯಂತಾಗಿರುತ್ತದೆ, ಅವು ಸಂಬಂಧಪಟ್ಟ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವ ಸಂಘಟನೆಗಳಿಂದ ಅತಿ ಶೀಘ್ರದಲ್ಲಿ ಕಾರ್ಯರೂಪಕ್ಕಿಳಿಯುತ್ತವೆ.
     ಕೇವಲ ಬಹುಮಾನಕ್ಕಾಗಿ ನಡೆಯುವ ಸ್ಪರ್ಧೆ ಇದಲ್ಲ. ಪ್ರಪಂಚದ ಸಮಸ್ಯೆಗಳಿಗೆ ನಿಜವಾದ ಪರಿಹಾರ ಸೂಚಿಸುತ್ತದೆ. ಉದಾಹರಣೆಗೆ, ಕಳೆದ ವರ್ಷದ ಸ್ಪರ್ಧೆಯಲ್ಲಿ ನ್ಯಾಷನಲ್ ಟೀಮ್ ವಿನ್ನರ್ ಬಹುಮಾನ ಗೆದ್ದ ಝೆಕ್ ಗಣರಾಜ್ಯದ ತಂಡವೊಂದು ನಿರ್ಮಿಸಿದ ತಂತ್ರಜ್ಞಾನ, GINA (Geographical Information Assistant) ಅಮೆರಿಕದಲ್ಲಿ ಉಂಟಾದ ಹೈಟಿ ಭೂಕಂಪದ ನಂತರದ ಪರಿಹಾರ ಕಾರ್ಯಗಳನ್ನು ಸುಗಮವಾಗಿ ನಡೆಸಲು ಉಪಯೋಗವಾಗಿದೆ. ಘಟನೆ ನಡೆದ ಸ್ಥಳದ ಸ್ಪಷ್ಟ ಭೌಗೋಳಿಕ ಚಿತ್ರಣ ನೀಡುವ ಈ ತಂತ್ರಜ್ಞಾನದಿಂದಾಗಿ ಅಲ್ಲಿನ ಪರಿಹಾರ ಕಾರ್ಯಗಳಲ್ಲಿ ತೊಡಗಿದ್ದವರಿಗೆ ಬಹಳ ಅನುಕೂಲವಾಯಿತು. ಹೈಟಿಯಲ್ಲಿ ಈಗ ನಡೆಯುತ್ತಿರುವ ಅಭಿವೃದ್ದಿ ಕಾರ್ಯಗಳನ್ನು ವೀಕ್ಷಿಸಬಲ್ಲ ವೆಬ್ಸೈಟೊಂದನ್ನು GINA ತಂಡ ಇತ್ತೀಚೆಗಷ್ಟೇ ಬಿಡುಗಡೆ ಮಾಡಿದೆ.

     ಈ ರೀತಿಯಾಗಿ, ಸಮಸ್ಯೆಗಳಿಗೆ ನಿಜವಾದ ಪರಿಹಾರಗಳನ್ನು ಒದಗಿಸುವ ಉದ್ದೇಶ ಇಮ್ಯಾಜಿನ್ ಕಪ್ ನದ್ದು. ಇಂತಹ ಪರಿಹಾರ ಮಾರ್ಗಗಳನ್ನು ಪಡೆಯಲು ಸಂಯುಕ್ತ ರಾಷ್ಟ್ತ್ರಗಳ (United Nations) ಹಲವು ಸಂಘ ಸಂಸ್ಥೆಗಳು ಇದೀಗ ಮುಂದೆ ಬಂದಿವೆ. ಅಭಿವೃದ್ದಿ, ಯುವಜನತೆ, ಆಹಾರ ಮತ್ತು ಕೃಷಿ, ಆರೋಗ್ಯ ಮತ್ತು ಪರಿಸರದಂತಹ ವಿಷಯಗಳ ಮೇಲೆ ಈ ಸಂಘಟನೆಗಳು ಕೆಲಸಮಾಡುತ್ತಿವೆ . ಪ್ರಮುಖವಾಗಿ, U.S. Agency for International Development (USAID) ಮತ್ತು ಸ್ಥಳೀಯ ನ್ಯೂಯಾರ್ಕ್ ನಗರದ ಸಾಮಾಜಿಕ ಸಂಸ್ಥೆ        Robin Hood Foundation ಈಗ ನೊಂದಾಯಿಸಿಕೊಂಡಿದ್ದು, ಈ ಪಟ್ಟಿ ಇನ್ನೂ       ಬೆಳೆಯುವ ವಿಶ್ವಾಸ ನಮ್ಮದು.

     ಈಗಿರುವ ಸಾಮಾಜಿಕ ನೆಟ್ವರ್ಕ್ ತಾಣಗಳು(social networks), ಸಂಯುಕ್ತರಾಷ್ಟ್ತ್ರ ಸಂಘದ ಮಹಾತ್ವಾಕಾಂಕ್ಷಿ ಯೋಜನೆಗಳಾದ ಬಡತನ ಹಾಗೂ ಹಸಿವು ನಿರ್ಮೂಲನೆ, ಶಿಕ್ಷಣ ಹಾಗೂ ಎಚ್.ಐ.ವಿ/ಏಯ್ದ್ಸ್  ವಿರುದ್ಧ ಹೋರಾಡಲು ವಿಶ್ವದ ಎಲ್ಲ ಯುವಕರನ್ನು ಒಟ್ಟುಗೂಡಿಸುವಷ್ಟು ಶಕ್ತವಾಗಿಲ್ಲ. ಭಾಷೆ, ತಂತ್ರಜ್ಞಾನ ಸಂಸ್ಕ್ಕತಿಗಳ ಭಿನ್ನತೆಗಳು ಇದಕ್ಕೆ ತೊಡಕಾಗಿವೆ ಎಂದು ಹೇಳುವ UN Programme on Youth ಎಂಬ ಸಂಸ್ಥೆಯು,  ಭಾಷೆ, ತಂತ್ರಜ್ಞಾನ ಸಂಸ್ಕ್ಕತಿಗಳ ಭಿನ್ನತೆಯ ಹೊರತಾಗಿಯೂ ಮೊಬೈಲ್, ವಿಡಿಯೋ ಹಾಗೂ ಇನ್ನಿತರ ತಂತ್ರಜ್ಞಾನದ ಸಹಾಯದಿಂದ ಪ್ರಪಂಚದ ಯುವಕರಿಂದಲೇ ಪರಿಹಾರ ಸಿಗಲಿ, ಅದೂ ಸಹ ಇಮ್ಯಾಜಿನ್ ಕಪ್ನಲ್ಲೇ ಸಿಗಬಹುದು ಎಂಬ ವಿಶ್ವಾಸದಲ್ಲಿದೆ.

     ಇದೇ ಸಮಯದಲ್ಲಿ USAID ಸಂಸ್ಥೆಯು ಬಡರಾಷ್ಟ್ತ್ರಗಳಲ್ಲಿನ ಶಿಕ್ಷಣದ ಸಮಸ್ಯೆಗಳಿಗೆ ಪರಿಹಾರಕ್ಕೌಸ್ಕರ ಎದಿರು ನೋಡುತ್ತಿದೆ. ಶಾಲೆಯ ಮೊದಲ ಮೂರು ವರ್ಷಗಳಲ್ಲಿ ಮಕ್ಕಳು ಓದುವುದು, ಬರೆಯುವುದು, ಕೂಡು-ಕಳೆಯುವ ಲೆಕ್ಕಗಳನ್ನು ಕಲಿಯುವಂತೆ ಮಾಡುವುದೇ ಸಂಸ್ಥೆಯ ಗುರಿಯಾಗಿದೆ. ಅಧ್ಯಯನಗಳು ಹೇಳುವಂತೆ, ಯಾವ ಮಕ್ಕಳು ಈ ಗುರಿಯನ್ನು ತಲುಪುವುದಿಲ್ಲವೋ, ಅವರು ಜೀವನ ಪರ್ಯಂತ ಬಡವರಾಗಿಯೇ ಮುಂದುವರಿಯುವ ಸಾಧ್ಯತೆಗಳು ಹೆಚ್ಚು. USAID ಯು ಇಮ್ಯಾಜಿನ್ ಕಪ್ ಗೆ ಬರುವ ಯುವಕರಿಂದ, ಪುಟ್ಟ ಹಾಗೂ ಬಡ ಮಕ್ಕಳನ್ನು ಶಿಕ್ಷಿತರನ್ನಾಗಿಸಲು ಸಹಾಯಕವಾಗುವ ಹೊಸ ಸಂಶೋಧನೆಗಳನ್ನು ನೀರೀಕ್ಷಿಸುತ್ತಿದೆ.

     ಪ್ರಪಂಚದ ಯುವಕರಲ್ಲಿ ನನ್ನ ಕರೆಯೇನೆಂದರೆ, ಈಗಲೇ ಇಮ್ಯಾಜಿನ್ ಕಪ್ ಗೆ ಹೆಸರು ನೋದಾಯಿಸಿಕೊಳ್ಳಿ, ವಿವಿಧ ಸಂಸ್ಥೆಗಳ ಅವಶ್ಯಕತೆಗನುಸಾರವಾಗಿ ನಿಮ್ಮ ಆಲೋಚನೆಗಳನ್ನು ಹರಿಯಬಿಡಿ, ಹೊಸ-ಹೊಸ ಮಾರ್ಗೋಪಾಯಗಳನ್ನು ಸೂಚಿಸಿ.

     ಹಾಗೂ, ಸರ್ಕಾರಿ ಸಂಸ್ಥೆಗಳು, ಸರ್ಕಾರೇತರ ಸಂಸ್ಥೆಗಳು ಹಾಗೂ ವಿವಿಧ ಸಾಮಾಜಿಕ ಸಂಸ್ಥೆಗಳು ಇಮ್ಯಾಜಿನ್ ಕಪ್ ನಲ್ಲಿ ತಮ್ಮ ಭಾಗವಹಿಸುವಿಕೆಯನ್ನು ಖಚಿತಪಡಿಸಿಕೊಂಡು, ಸಮಾಜದ ಸಮಸ್ಯೆಗಳಿಗೆ ಯುವಕರಿಂದ ಅತ್ಯುತ್ತಮವಾದ ಮಾರ್ಗಗಳನ್ನು ಕಂಡುಕೊಳ್ಳಬೇಕೆಂದು ನಾನು ಆಶಿಸುತ್ತೇನೆ.

     ಎಲ್ಲರೂ ಇದರಲ್ಲಿ ಭಾಗಿಗಳಾಗೋಣ, ಸ್ಪರ್ಧೆಯ ಸೋಲು-ಗೆಲುವುಗಳ ಕಡೆ ಗಮನ ಕೊಡದೇ, ಇಡೀ ಪ್ರಪಂಚವನ್ನೇ ಗೆಲ್ಲಿಸುವ ಸಂಕಲ್ಪ ಮಾಡೋಣ.

ಬುಧವಾರ, ಡಿಸೆಂಬರ್ 15, 2010

Vir Sanghvi's reliability itself is doubtable-Dr. Koenraad Elst

      World famous historian Dr. Koenraad Elst delivered an thoughtful lecture onAyodhya Verdict: A Historian’s perspective” in Mythic Society’s Dally Memorial lecture Hall in Bangalore today December 15th.

DR KOENRAAD ELST on Ayodhya verdict
      Dr. Koenrad Elst opiniopned that Lord Buddha was never  a rebel against the Hinduism,  even Sikh religion founder Gurunanak says, he is Direct dissident of Rama.  


      The pseudo-secularists says, “the site which was called as Rama’s Birth place is not original one, but Vikramaditya picks any land in his territory and announces it is the Birthplace and Builds a temple there. After Vikramaditya, the Ayodhya was the centre of learning of Buddhists and was a one of intellectual capital of India. As far as the Lord Rama's birth place issue is concerned, both sides have agreed that the Babri Masjid was built around  1528 on a remaining of a temple. The archaeologist experts  have accepted that the Mosque was not in the style of Mughal. In the Muslim documents itself, the name of masjid is written as Masjid-e-Janmasthan. There are many Muslims who accepts the place is Birthplace of Ram


Audience
       Hindus are not the losers, they don’t  problem of Unity, always.   
      One of leading Journalist Vir Sanghvi writes article against Hindus about Ayodhya verdict, His integrity and his reliability itself is doubtable now a days.
      The Programme was organized by Mythic Society part of its Lecture Series of the month. The programme was attended by a select audience, presided by Dr. MKLN Shasthry, senior Educationist also President of Mythic Society.Senior Scientist Dr.Navarathna S Rajaram was the chief guest.

ಬುಧವಾರ, ನವೆಂಬರ್ 17, 2010

ರವಿ ಬೆಳಗೆರೆಗೆ ಅರವತ್ತರ ಅರಳು ಮರುಳು

        ಒಬ್ಬ ಲೇಖಕ ದಿನಕಳೆದಂತೆ ಬೆಳೆಯುತ್ತಿರಬೇಕು, ಆ ಬೆಳವಣಿಗೆ ಬುದ್ದಿಯಲ್ಲಾಗದೇ ಹೆಸರಿನಲ್ಲಿ, ದುಡ್ಡಿನಲ್ಲಿ ಆದರೆ ಅವನು ರವಿ ಬೆಳಗೆರೆಯಾಗುತ್ತಾನೆ. ಇದಕ್ಕೆ ತಾಜಾ ಉದಾಹರಣೆ, ನವೆಂಬರ್ 14ರ ಮಕ್ಕಳದಿನಾಚರಣೆಯಂದು ಬಿಡುಗಡೆಗೊಂಡ ವಯಸ್ಕರ ಪುಸ್ತಕ 'ಕಾಮರಾಜಮಾರ್ಗ'. ಇದು ಬೆಳಗೆರೆ ಅವರ ಅರವತ್ತನೇ ಕಾಣಿಕೆ. ಮೊದಲೇ ಹೇಳಿಬಿಡುತ್ತೇನೆ, ಈ ಪುಸ್ತಕವನ್ನು ನಾನು ಓದಿಲ್ಲಾ, ಓದುವುದೂ ಇಲ್ಲ. ಇದು ಅವರ ಅರವತ್ತನೇ ಪುಸ್ತಕ. ಆದರೆ, ಅದರ ಅರ್ಪಣಾ ಪುಟ ಹಾಗೂ ಒಳಪುಟಗಳ ಮೇಲೆ ಮೊನ್ನೆ ಬೆಂಗಳೂರಿನ ಪುಸ್ತಕ ಮೇಳಕ್ಕೆ ಹೋದಾಗ ಕಣ್ಣಾಡಿಸಿದೆ. ಅರ್ಪಣೆಯನ್ನು ಆರೆಸ್ಸೆಸ್ ನ ಹಿರಿಯರಾದ ಹೊ.ವೆ.ಶೇಷಾದ್ರಿ(ಈಗ ಬದುಕಿಲ್ಲ), ಮೈ.ಚ.ಜಯದೇವ, ಪ್ರೊ.ಕೃ.ನರಹರಿ ಹಾಗೂ ನ.ಕೃಷ್ಣಪ್ಪನವರಿಗೆ ಅರ್ಪಿಸಲಾಗಿದೆ. ಈ ಅರ್ಪಣೆಯಲ್ಲಿ ನಾಲ್ವರ ಕುರಿತೂ ಅತ್ಯಂತ ಭಕ್ತಿ ಭಾವವನ್ನು ಬೆಳಗೆರೆ ಪ್ರದರ್ಶಿಸಿದ್ದಾರೆ. ಆದರೆ, ಇಲ್ಲಿ ಬರುವ ಒಂದು ಪ್ರಶ್ನೆಯೆಂದರೆ, ಅಷ್ಟೊಂದು ಗೌರವ ಅವರುಗಳ ಮೇಲಿದ್ದರೆ 'ಎ'ಸರ್ಟಿಫಿಕೇಟ್ ಪುಸ್ತಕಕ್ಕೇಕೆ ಅವರ ಹೆಸರು? ಇದೇ ನಾಲ್ಕು ಜನರ ಸ್ಥಾನಕ್ಕೆ ತಮ್ಮ ಆತ್ಮೀಯರೋ ಅಥವಾ ಕುಟುಂಬದ ಯಾರಾದರೂ ಸದಸ್ಯರ ಹೆಸರನ್ನು ಹಾಕಲು ಬೆಳಗೆರೆಗೆ ಆಗುತ್ತದೆಯೇ? ತಾವೇ ತಮ್ಮ ಖಾಸ್ಬಾತ್ ನಲ್ಲಿ ಹೇಳಿಕೊಂಡಂತೆ, ಆಗಿನ ಕಾಲದ ಸೆಕ್ಸ್ ಪುಸ್ತಕ ರತಿ ವಿಜ್ಞಾನಕ್ಕೆ ಹೊಟ್ಟೆಯ ಪಾಡಿಗಾಗಿ ಬರೆಯುತ್ತಿದ್ದರು. ಆದರೆ ಈಗ ಬರೆಯುತ್ತಿರುವುದು 'ಪಾಡಿಗಲ್ಲ', 'ತೆವಲಿಗಾಗಿ' ಎನ್ನಿಸುತ್ತದೆ. ನನ್ನನ್ನು ಸಾವಿರಾರು ಜನ ರೋಲ್ ಮಾಡೆಲ್ ಮಾಡಿಕೊಂಡಿದ್ದಾರೆ, ನನ್ನ ಮಾರ್ಗದಲ್ಲೇ ನಡೆಯುತ್ತಾರೆ ಇನ್ನುವ ಬೆಳಗೆರೆಯವರು ತಮ್ಮ ಹಿಂಬಾಲಕರಿಗೆ ತೋರಿಸುವ 'ಮಾರ್ಗ' ಇದೇನಾ?.

ಬುಧವಾರ, ನವೆಂಬರ್ 10, 2010

'ಶಕ್ತಿ'ಯೇ ದೌರ್ಬಲ್ಯವಾಗುವ ಜಾರುದಾರಿಯಲ್ಲಿ ಯಡ್ಯೂರಪ್ಪ


ಹೌದು, ಯಡ್ಯೂರಪ್ಪ ಅವರ ನಿಜವಾಜ ಶಕ್ತಿ ಇರುವುದು ಯಾವುದರಲ್ಲಿ? ಅಭಿವೃದ್ದಿಯಲ್ಲೇ?, ತಮ್ಮದೇ ಆದ ರೀತಿಯಲ್ಲಿ ವಿವಾದಗಳನ್ನು ಬಗೆಹರಿಸುವ ಪರಿಯಲ್ಲೇ?, ರಾಜಕೀಯ ಜನಪ್ರಿಯ ಕಾರ್ಯಕ್ರಮಗಳೇ?, ಸಂಘ ಪರಿವಾರದ ಬೆಂಬಲವೇ?, ಪಕ್ಷದ ಕಾರ್ಯಕರ್ತರೇ? ಅಥವಾ ಇವೆಲ್ಲವುಗಳನೊಳಗೊಂಡ ಗುಚ್ಛವೇ? ಎಂದು ಕಳೆದವಾರ ದೆಹಲಿಯಿಂದ ಬೆಂಗಳೂರಿಗೆ ಬಂದಿದ್ದ ಹಿರಿಯ ಪತ್ರಕರ್ತರೊಬ್ಬರು ಕೇಳಿದರು.
          ಉದಾಹರಣೆಗೆ ಕರುಣಾನಿಧಿಯವರನ್ನು ತೆಗೆದುಕೊಂಡರೆ ದ್ರಾವಿಡ ಚಳುವಳಿ, ಸಮಗ್ರ ಅಭಿವೃದ್ದಿ, ನಗರ-ಗ್ರಾಮೀಣ ಪ್ರದೇಶಗಳ ಸಮತೋಲಿತ ಬೆಳವಣಿಗೆ ಹಾಗೂ ಕಾವೇರಿ ವಿವಾದ, ಶ್ರೀಲಂಕಾ ತಮಿಳರು, ತಮಿಳು ಭಾಷೆಯಂತಹ ಭಾವನಾತ್ಮಕ ವಿಷಯಗಳು ಅವರ ಶಕ್ತಿ.
ಹಾಗೆಯೇ ರಾಜ್ಯದ ಅಭಿವೃದ್ದಿಯ ಕುರಿತು ಪ್ರಶ್ನಾತೀತವಾದ ಬದ್ಧತೆ, ಶುದ್ಧಹಸ್ತ, ನೇರ ಆಡಳಿತ ಹಾಗೂ ತಮ್ಮ ರಾಜಕೀಯ ವಿರೋಧಿಗಳಿಂದಾಗುವ ಸತತ ಧಾಳಿಗಳೇ ನರೇಂದ್ರ ಮೋದಿಯವರ ಶಕ್ತಿ ಕೇಂದ್ರಗಳು. ಅಲ್ಲಿಂದಲೇ ಅವರಿಗೆ ಶಕ್ತಿ ಲಭಿಸುವುದು.
          ಹಾಗೆ ಯಡ್ಯೂರಪ್ಪನವರ 'ಶಕ್ತಿ' ಯಾವುದು? ಹೆಚ್ಚೆಂದರೆ ದಿನಕ್ಕೆ ನಾಲ್ಕು ಗಂಟೆ ನಿದ್ದೆ ಮಾಡುವ, ಸಮಾಜದ ಕಟ್ಟಕಡೆಯ ವ್ಯಕ್ತಿಯ ನೋವಿಗೂ ಸ್ಪಂದಿಸುವ, ಸತತ ಪ್ರವಾಸ, ಕೆಲಸಗಂಟುಕತನಗಳಂತಹ ಧನಾತ್ಮಕ ಅಂಶಗಳೇ ಅವರ ಶಕ್ತಿ ಅನ್ನಬಹುದೇ? ಸಮಾಜದ ಬಗೆಗಿನ ಕಾಳಜಿಯನ್ನು ಅವರ ಭಾಷಣಗಳಲ್ಲಂತೂ ಢಾಳಾಗಿ ಕಾಣಬಹುದು.
          ಆದರೆ, ಪ್ರಸಕ್ತ ರಾಜಕೀಯ ಸನ್ನಿವೇಷದಲ್ಲಿ, ಅವರ ಸಮುದಾಯವೇ(ಲಿಂಗಾಯತ) ಅವರ ನೈಜ ಶಕ್ತಿ. ಅವರು ಲಿಂಗಾಯತರಾಗದೇ ಇದ್ದಿದ್ದರೆ, ಪದೇಪದೇ ಒಳಗಿನಿಂದ ಹಾಗೂ ಹೊರಗಿನಿಂದ ಒಂದರ ಮೇಲೊಂದರಂತೆ ಬಂದ ಬಿಕ್ಕಟ್ಟುಗಳ ನಡುವೆಯೂ ಮುಖ್ಯಮಂತ್ರ್ರಿಯಾಗಿ ಮುಂದುವರಿಯಲು ಸಾಧ್ಯವಾಗುತ್ತಿರಲಿಲ್ಲ.
          ಹಾಗೆ ನೋಡಿದರೆ, ಜಾತಿ ರಾಜಕೀಯ ಕರ್ನಾಟಕ್ಕೆ ಹೊಸದೇನೂ ಅಲ್ಲ. ದೇವರಾಜ ಅರಸು ಉಳಿದದ್ದು ಹಿಂದುಳಿದ ವರ್ಗಗಳ ಬೆಂಬಲದಿಂದ, ಬ್ರಾಹ್ಮಣರಾದರೂ ಲಿಂಗಾಯತ ಸಮುದಾಯದ ಬೆಂಬಲದಿಂದ ಅಧಿಕಾರ ಅನುಭವಿಸಿದ ಚತುರ ರಾಜಕಾರಣಿ ರಾಮಕೃಷ್ಣ ಹೆಗಡೆ, ಹಾಗೆಯೇ, ವೀರೇಂದ್ರ ಪಾಟೀಲ್, ದೇವೇಗೌಡ, ಎಸ್.ಆರ್.ಬೊಮ್ಮಾಯಿ, ಜೆ.ಎಚ್.ಪಟೇಲ್ ಮತ್ತು ಕುಮಾರಸ್ವಾಮಿ ಎಲ್ಲರೂ ಬದುಕಿದ್ದೂ-ಬದುಕುತ್ತಿರುವುದೂ ಒಂದಲ್ಲಾ ಒಂದು ಜಾತಿಯ ಬಲದಿಂದಲೇ.
          ಈಗ ಕಾಂಗ್ರೆಸ್ ಗೆ  ತನ್ನದೇ ಆದ ಜಾತಿಯ ತಳಹದಿ ಇಲ್ಲ. ಹಿಂದುಳಿದ ಹಾಗೂ ದಲಿತ ವರ್ಗಗಳನ್ನು ಓಲೈಸಲು ಅದು ಎಷ್ಟು ಪ್ರಯತ್ನಿಸಿದರೂ ಅವೆರಡೂ ಸಹ ಕಾಂಗ್ರೆಸ್ ನಿಂದ ದೂರ ಸರಿದಿವೆ. ಅಲ್ಪಸಂಖ್ಯಾತರ ದೃಷ್ಟಿ ಯಾವಾಗಲೂ ಬಿ.ಜೆ.ಪಿಯನ್ನು ಸೋಲಿಸಬಲ್ಲಂತಹ ಪ್ರಬಲ ವಿರೋಧಿ ಬಣದ ಹುಡುಕಾಟದಲ್ಲಿ ಇದೆ. ದೇಶದೆಲ್ಲೆಡೆಯ ಇಂದಿನ ಸ್ಥಿತಿಯೇನೆಂದರೆ, ತೃತೀಯ ರಂಗದ ಶಕ್ತಿಗಳು ಉಳಿಯಬೇಕೆಂದರೆ ಅವಕ್ಕೆ ಯಾವುದಾದರೊಂದು ಜಾತಿಯ ಬೆಂಬಲ ಇರಲೇಬೇಕು. ಆ ನಿಟ್ಟಿನಲ್ಲಿ ವಕ್ಕಲಿಗ ಸಮುದಾಯವನ್ನು ಹಿಡಿದಿಟ್ಟುಕೊಳ್ಳುವಲ್ಲಿ ಜೆ.ಡಿ.ಎಸ್, ಕರ್ನಾಟಕದ ಮಟ್ಟಿಗೆ ಯಶಸ್ವಿಯಾಗಿದೆ.
          ಹೀಗಾಗಿ ಬಿ.ಜೆ.ಪಿ ಯು ಲಿಂಗಾಯತ ಮತಗಳನ್ನು ಸೆಳೆಯುವುದನ್ನು ಬಿಟ್ಟಿದ್ದರೆ ಅಧಿಕಾರಕ್ಕೆ ಬರುವ ಮಾತೇ ಇರುತ್ತಿರಲಿಲ್ಲ. ಹಾಗೆಯೇ ಲಿಂಗಾಯತರಿಗೂ ಯಡ್ಯೂರಪ್ಪನವರನ್ನು ಬಿಟ್ಟರೆ ತಮ್ಮ ಸಮುದಾಯದ ಬೇರೆ ಯಾವ ನಾಯಕರೂ ಕಾಣುತ್ತಿಲ್ಲ. ಬೇರೆ ಯಾವ ಪಕ್ಷದಲ್ಲೂ, ಅಷ್ಟೇ ಏಕೆ? ಸ್ವತಃ ಬಿ.ಜೆ.ಪಿಯಲ್ಲೂ ಯಡ್ಯೂರಪ್ಪನವರನ್ನು ಬಿಟ್ಟರೆ, ಅವರ ಸರಿಸಮಾನವಾಗಿ ನಿಲ್ಲಬಲ್ಲ ಇನ್ನೊಬ್ಬ ಲಿಂಗಾಯತ ನಾಯಕ ಯಾರೂ ಕಾಣುತ್ತಿಲ್ಲ. ಪ್ರಸ್ತುತ ರಾಜಕೀಯ ಸನ್ನಿವೇಷದಲ್ಲಿ ಯಡ್ಯೂರಪ್ಪ, ಬಿ.ಜೆ.ಪಿ ಹಾಗೂ ಲಿಂಗಾಯತ ಎಂಬುದು ಹೇಳಿ ಮಾಡಿಸಿದ ಜೋಡಿಯಂತಿವೆ. ಆದರೆ, ಈ ಮೂರೂ ಅಂಶಗಳೂ ಒಂದರ ಮೇಲೊಂದು ಅವಲಂಬಿತವಾಗಿರುವುದರ ಅಪಾಯವೇನೆಂದರೆ, ಮೂರರಲ್ಲಿ ಯಾವುದೇ ಎರಡರ ಮಧ್ಯದ ಕೊಂಡಿ ಕಳಚಿಕೊಂಡರೂ ರಾಜಕೀಯ ವ್ಯವಸ್ಥೆ ಅಲ್ಲೋಲಕಲ್ಲೋಲವಾಗುತ್ತದೆ ಹಾಗೂ ಕರ್ನಾಟಕದಲ್ಲಿನ ಇನ್ನೊಂದು ಕಾಂಗ್ರೆಸ್ಆಗಿ ಬಿ.ಜೆ.ಪಿ ಮಾರ್ಪಡುತ್ತದೆ.
          ಅಲ್ಪಸಂಖ್ಯಾತರು, ದಲಿತರ ಹೊರತಾಗಿ ಪ್ರಮುಖವಾಗಿ ಲಿಂಗಾಯತ ಹಾಗೂ ವಕ್ಕಲಿಗ ಮತಗಳನ್ನು ಸೆಳೆದುಕೊಂಡು ಜನಪ್ರಿಯ ಪಕ್ಷವಾಗಿದ್ದ ಕಾಂಗ್ರೆಸ್ ಗೆ ದೇವರಾಜ್ಅರಸು ಬಂದ ಮೇಲೆ ಹಿಂದುಳಿದ ವರ್ಗಗಳ ಬೆಂಬಲವೂ ದೊರಕಿ ಅತ್ಯಂತ ಗಟ್ಟಿಮುಟ್ಟಾಗಿತ್ತು. ಆದರೆ, 1983ರ ನಂತರದ ರಾಜಕೀಯದಲ್ಲಿ,  ರಾಮಕೃಷ್ಣ ಹೆಗಡೆ ಹಾಗೂ ದೇವೇಗೌಡರು ರಾಜಕೀಯ ಮುಖ್ಯವಾಹಿನಿಗೆ ಬಂದಮೇಲೆ ಕಾಂಗ್ರೆಸ್ ತನ್ನ ಶಕ್ತಿಯನ್ನೆಲ್ಲಾ ಕಳೆದುಕೊಂಡು ಕಳೆಗುಂದಿತು.
          ಸಂಘಟನಾ ಬಲದಲ್ಲಿ ನಡೆಯುತ್ತಿದ್ದ ಬಿ.ಜೆ.ಪಿಗೆ ಹೋರಾಟದ ಮೂಲಕ ಜನಪ್ರಿಯತೆಯನ್ನು ತಂದು ಪಕ್ಷಕ್ಕೆ ಹೊಸ ರೂಪವನ್ನು ಕೊಟ್ಟಿದ್ದು ಯಡ್ಯೂರಪ್ಪ. ಈಗಿನ ಹಗ್ಗಜಗ್ಗಾಟದ ರಾಜಕೀಯಕ್ಕಾಗಿ, ಪಕ್ಷದ ಮೂಲ ಸಿದ್ದಾಂತದಲ್ಲೇ ರಾಜಿ ಮಾಡಿಕೊಂಡಿದ್ದೂ ಸಹ ಅದೇ ಯಡ್ಯೂರಪ್ಪ. ಅವರು ಈಗ ಒಬ್ಬ ಪಕ್ಕಾ ಜಾತೀವಾದಿ ಮನುಷ್ಯನಂತೆ ಕಾಣುತ್ತಾರೆ. ಈ ಎಲ್ಲಾ ಮೇಲಾಟಗಳೂ ಅವರಿಗೆ ತಕ್ಷಣದ ಮೇಲುಗೈ ತಂದುಕೊಡಬಹುದು. ಆದರೆ, ಸಂಘಟನೆಯನ್ನು ಮರೆತು ಕೇವಲ ತಮ್ಮ ಸಮುದಾಯದಿಂದಲೇ ತಾಕತ್ತು   ಪಡೆಯುತ್ತಾ ಹೋದರೆ ದೂರಗಾಮಿ ಓಟದಲ್ಲಿ ಕಾಂಗ್ರೇಸ್ ನಂತೆಯೇ ಬಿ.ಜೆ.ಪಿಯೂ ರೋಗಗ್ರಸ್ತಗೊಳ್ಳುತ್ತದೆ, ಇದರಲ್ಲಿ ಯಾವ ಅಚ್ಚರಿಯೂ ಇಲ್ಲ.

  
ಮೂಲ ಲೇಖನ: ಅರುಣ್, ಇಂಡಿಯನ್ ಎಕ್ಸ್ ಪ್ರೆಸ್ (5-11-10)
ಅನುವಾದ:- ರಮೇಶ ದೊಡ್ಡಪುರ(9-11-10)

ಬುಧವಾರ, ನವೆಂಬರ್ 03, 2010

ಹಸಿದವರಾರು, ಬೆತ್ತಲಾದವರಾರು ಎಂದು ಇಡೀ ದೇಶಕ್ಕೇ ಗೊತ್ತಿದೆ


          ಭೂಕೇ ನಂಗೇ ಹಿಂದುಸ್ಥಾನ್ ಸೆ ಕಶ್ಮೀರ್ ಕೋ ಆಜಾದೀ ಚಾಹಿಯೇ(ಹಸಿದ, ಬೆತ್ತಲಾದ ಭಾರತದಿಂದ ಕಾಶ್ಮೀರಕ್ಕೆ ಸ್ವತಂತ್ರ್ಯ ಬೇಕು) ಎಂದು ದೆಹಲಿಯಲ್ಲಿರುವ ಕೋಪರ್ನಿಕಸ್ ಮಾರ್ಗದಲ್ಲಿರುವ ಎಲ್.ಟಿ.ಜಿ ಆಡಿಟೋರಿಯಮ್ ನಲ್ಲಿ ಅಕ್ತೊಬರ್ ಇಪ್ಪತ್ತೊಂದನೇ ತಾರೀಖು ಅರುಂಧತಿ ರಾಯ್ ಘಂಟಾಘೋಷವಾಗಿ ನುಡಿದರೂ ಅವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಲಿಲ್ಲ ನಮ್ಮ ಕೇಂದ್ರ ಸರ್ಕಾರ. ಕ್ರಮ ಕೈಗೊಳ್ಳಲಿಲ್ಲ ಎನ್ನುವುದಕ್ಕಿಂತ ಕ್ರಮ ಕೈಗೊಳ್ಳುವುದಿಲ್ಲ ಎಂಬುದು ಗೊತ್ತಿದ್ದೇ ಹಾಗೆ ಮಾತನಾಡಲಾಯಿತು ಎನ್ನಬಹುದು. ಕಾರಣ, ಇದೇ ವರ್ಷದ ಸೆಪ್ಟೆಂಬರ್ ಹತ್ತೊಂಭತ್ತರಂದು ಉತ್ತರ ಅಮೇರಿಕಾದ ಜನಪ್ರಿಯ ಟಿ.ವಿ ವಾಹಿನಿ 'ಡೆಮಾಕ್ರಸಿ ನೌ' ನ ವರದಿಗಾರ್ತಿ ಅಮಿ  ಗುಡ್ಮನ್ ಅವರಿಗೆ ಅರುಂಧತಿ ಸಂದರ್ಶನ ನೀಡಿದರು. ಕಾಶ್ಮೀರದ ಸಮಸ್ಯೆ, ಆಜಾದೀ ಯ ಬಗೆಗೇ ನಡೆಯುತ್ತಿದ್ದ ಸಂದರ್ಶನದಲ್ಲಿ ಅರುಂಧತಿ ಹೇಳಿದ ಒಂದು ಮಾತು,'ದೆಹಲಿಯ ಕಾಮನ್ವೆಲ್ತ್ ಗೇಮ್ಸ್ ಗಾಗಿ ಅಲ್ಲಿರುವ ಬಡವರನ್ನೆಲ್ಲಾ ಪಾರ್ಕ್ ಗಳಿಗೆ ತಳ್ಳಿ, ಅವರು ಕಾಣದಂತೆ ಬಿಲ್ ಬೋರ್ಡ್ ಗಳನ್ನು ಹಾಕಲಾಗಿದ್ದಂತೆ, ಅಮೇರಿಕಾ ಅಧ್ಯಕ್ಷ ಒಬಾಮಾ ಭಾರತಕ್ಕೆ ಬರುವ ವೇಳೆಗೆ ಕಾಶ್ಮೀರ ವಿಷಯವನ್ನೂ ಮುಚ್ಚಿ ಹಾಕುವ ಪ್ರಯತ್ನವನ್ನು ಭಾರತ ಸರ್ಕಾರ ಮಾಡುತ್ತಿದೆ' ಎಂದರು. ಇದರರ್ಥ, ಕಾಶ್ಮೀರದಲ್ಲಿ ಬಿದ್ದಿರುವ ಕಲ್ಲೇಟಿನಿಂದ ಇತ್ತೀಚೆಗಷ್ಟೇ ಚೇತರಿಸಿಕೊಳ್ಳುತ್ತಿರುವ ಭಾರತ ಸರ್ಕಾರ, ಒಬಾಮಾ ಬರುವ ವೇಳೆಗೆ ಯಾವುದೇ ಹೊಸ ಇಕ್ಕಟ್ಟಿನಲ್ಲಿ ಸಿಕ್ಕಿಹಾಕಿಕೊಳ್ಳಲು ಇಷ್ಟ ಪಡುವುದಿಲ್ಲ ಎಂಬ ಸ್ಪಷ್ಟ ಅರಿವು ಅರುಂಧತಿ ಅವರಿಗಿದೆ. ಹಾಗಾಗಿಯೇ ಅಷ್ಟೊಂದು ಧೈರ್ಯವಾಗಿ ದೆಹಲಿಯಲ್ಲೇ ಸಭೆನಡೆಸಿ, ದೇಶ ಒಡೆಯುವ ಮಾತಾಡಿದ್ದು.

          ಭಾರತದಲ್ಲಿ ಹಲವು ದೇವಾಲಯಗಳಿವೆ, ವ್ಯಾಪಾರ ಕೇಂದ್ರಗಳಿವೆ, ಪ್ರವಾಸೀ ತಾಣಗಳಿವೆ ಭಯೋತ್ಪಾದಕರು ಬಾಂಬ್ ಸಿಡಿಸಲು. ಆದರೆ, 2001ರ ಡಿಸೆಂಬರ್ 13ರಂದು ಅವರು ದೇಶದ ಆಡಳಿತ ಸೌಧವಾದ ಪಾರ್ಲಿಮೆಂಟ್ ಮೇಲೆ ಧಾಳಿ ನಡೆಸಿದ್ದು, ತಮಗೆ ಭಾರತದ ಯಾವ ಮೂಲೆಯಲ್ಲಾದರೂ ಬಾಂಬ್ ಸ್ಪೋಟಿಸುವ ಶಕ್ತಿ ಇದೆ ಎಂದು ತೋರಿಸಲು ಹಾಗೂ ಆಕ್ರಮಣದ ಈ ಸುದ್ದಿ ಅಂತಾರಾಷ್ಟ್ತ್ರೀಯ ಮಟ್ಟದಲ್ಲಿ ಪ್ರಚಾರವಾಗಿ ಭಾರತದ ಮಾನ ಹೋಗಲೆಂದು. ಹಾಗೆಯೇ, 21ನೇ ತಾರೀಖು 'ಆಜಾದೀ: ದಿ  ಓನ್ಲಿ ವೇ' ಎಂಬ ಹೆಸರಿನಡಿ ದೆಹಲಿಯಲ್ಲಿ ನಡೆದ ವಿಚಾ(ಕಾ)ರ ಸಭೆಯಿಂದಲೂ ಸಹ ಪ್ರತ್ಯೇಕತಾವಾದಿಗಳು ಸಂದೇಶ ಕಳುಹಿಸಿದ್ದಾರೆ. ಸೂಪರ್ ಪವರ್ ಆಗುತ್ತಿದೆ ಎಂದು ಹೇಳಲಾಗುತ್ತಿರುವ ದೇಶದ ರಾಜಧಾನಿಯಲ್ಲೇ ಕುಳಿತು ಅದೇ ದೇಶವನ್ನು ಒಡೆಯುವ ಮಾತನಾಡುವ ತಾಕತ್ತು ತಮಗಿದೆ ಎಂಬ ಸಂದೇಶವನ್ನು ಕೇಂದ್ರ ಸರ್ಕಾರಕ್ಕೆ, ಇಡೀ ದೇಶಕ್ಕೆ ಹಾಗೂ ವಿಶ್ವ ಸಮುದಾಯಕ್ಕೆ ತಿಳಿಸುವಲ್ಲಿ ಈ ಸಭೆ ಯಶಸ್ವಿಯಾಗಿದೆ. ಸಂಸತ್ ಮೇಲಿನ ಧಾಳಿ ಹಾಗೂ ಈ ಸಭೆಗಿರುವ ವ್ಯತ್ಯಾಸವೆಂದರೆ, ಅದರಲ್ಲಿ ಎಲ್ಲಾ ಭಯೋತ್ಪಾದಕರನ್ನೂ ಹೊಡೆದುರುಳಿಸಲಾಯಿತು, ಆದರೆ ಇದರಲ್ಲಿ ಮೊಕದ್ದಮೆಯನ್ನೂ ಹಾಕದೆ ಸುಮ್ಮನೆ ಬಿಡಲಾಯಿತು.
          ಈ ಸಭೆಯ ಕುರಿತು ಯೊಚಿಸಬೇಕಾದ ಇನ್ನೊಂದು ವಿಷಯವೆಂದರೆ, ಇದು ಕೇವಲ ಕಾಶ್ಮೀರಕ್ಕಷ್ಟೇ ಸೀಮಿತವಾಗಿಲ್ಲ ಎನ್ನುವುದು. ಸಭೆಯಲ್ಲಿ ಅರುಂಧತಿ ರಾಯ್ ಹಾಗೂ ಕಾಶ್ಮೀರದ ಪ್ರತ್ಯೇಕತಾವಾದಿ ಸೈಯದ್ ಅಲಿಶಾ ಗಿಲಾನಿ ಹೊರತುಪಡಿಸಿ, ನಾಗಾಲ್ಯಾಂಡ್ಅನ್ನು ಭಾರತದಿಂದ ಪ್ರತ್ಯೇಕಿಸಲು ಹಗಲಿರುಳೂ ಶ್ರಮಿಸುತ್ತಿರುವ ನಾಗಾ ಪೀಪಲ್ಸ್ ಮೂವ್ಮೆಂಟ್ ಫಾರ್ ಹ್ಯೂಮನ್ ರೈಟ್ಸ್(NPMHR) ನ ಪ್ರಧಾನ ಕಾರ್ಯದರ್ಶಿ Dr.N Venuh, ಮಣಿಪುರದಲ್ಲಿ ಪ್ರತ್ಯೇಕತೆಯ ಕೂಗು ಮೊಳಗಿಸುತ್ತಿರುವ ಕಮಿಟಿ ಫಾರ್ ಪೀಸ್ ಅಂಡ್ ಡೆಮಾಕ್ರಸಿ (CPDM) Malem Ningthouja, ಲಡಾಯೀ ಹಾರೇ ಹೈ ಮಗರ್ ಆಜಾದೀ ಕಾ ಜಂಗ್ ನಹೀ ಚೋಡೇ ಹೈ ಹಮ್( ಕದನ ಸೋತಿದ್ದರೂ ಸ್ವಾತಂತ್ರ್ಯದ ಯುದ್ಧ ಬಿಟ್ಟಿಲ್ಲ) ಎಂದು ಹೇಳಿದ- ಸತ್ತು ಹೋಗಿದೆ ಎಂದು ಹೇಳಲಾಗುತ್ತಿರುವ ಪಂಜಾಬ್ ಪ್ರತ್ಯೇಕತಾವಾದಿ 'ದಲ್ ಖಾಲ್ಸಾ'ದ ಕನ್ವರ್ಪಾಲ್ ಸಿಂಗ್ ಮತ್ತು ಹರಚರಣ್ಜೀತ್ ಸಿಂಗ್, ಆಂಧ್ರ ಪ್ರದೇಶದಲ್ಲಿ ರಾಡಿಕಲ್ ಸ್ಟೂಡೆಂಟ್ಸ್ ಯೂನಿಯನ್ ಎಂಬ ಗುಂಪು ಮಾಡಿಕೊಂಡು, ಸರ್ಕಾರ 1991ರಲ್ಲಿ ಅದರ ಮೇಲೆ ನಿಷೇಧ ಹೇರಿದ ನಂತರ ಇದೀಗ ರೆವಲ್ಯೂಷನರಿ ಡೆಮಾಕ್ರಟಿಕ್ ಪಾರ್ಟಿ(ಆರ್.ಡಿ.ಪಿ) ಎಂಬ ಮಾವೋಗಳೊಂದಿಗೆ ಸಹಮತ ಹೊಂದಿರುವ ಸಂಘಟನೆಯ ಜಿ.ಎನ್. ಸಾಯಿಬಾಬಾ, ಪ್ರತ್ಯೇಕ ತಮಿಳುನಾಡಿಗೆ ಆಗ್ರಹಿಸುತ್ತಿರುವ ತಮಿಳ್ ನ್ಯಾಷನಲ್ ಲಿಬರೇಷನ್ ಮೂವ್ಮೆಂಟ್ ನ ಕಾರ್ಯದರ್ಶಿ  Thaigu , ಮಾವೋವಾದಿಗಳ ನಾಗರಿಕ ಮುಖವಾಗಿರುವ ಆಂಧ್ರದ ವರವರರಾವ್ ಹಾಗೂ ಬಂಗಾಳದ ಸುಜಾತೋ ಭದ್ರ- ಶುದ್ಧಭ್ರತ ಸೇನ್ ಗುಪ್ತ, ಜಮ್ಮುವಿನ ಶಿವನಂದನ್- ಶೇಖ್ ಶೌಕತ್ ಹುಸೇನ್ ಅವರುಗಳು.
          2008ರಲ್ಲಿ ಇದೇ ಎಲ್.ಟಿ.ಜಿ ಆಡಿಟೋರಿಯಮ್ ನಲ್ಲಿ ಪ್ರಾರಂಭವಾದ ಕಮಿಟೀ ಫಾರ್ ದಿ ರೀಲೀಸ್ ಆಫ್ ಪೊಲಿಟಿಕಲ್ ಪ್ರಿಸನರ್ಸ್(CRPP) ಎಂಬ ಹೆಸರಿನಡಿ ನಡೆದ ಈ ಸಭೆಯು ಮಣಿಪುರ, ನಾಗಾಲ್ಯಾಂಡ್, ಬಂಗಾಳ, ಪಂಜಾಬ್, ಆಂಧ್ರ, ತಮಿಳುನಾಡು ರಾಜ್ಯಗಳಿಂದ ಅಂದರೆ, ಪೂರ್ವ-ಪಶ್ಚಿಮ-ಉತ್ತರ-ದಕ್ಷಿಣ ಎಲ್ಲ ಭಾರತದಿಂದಲೂ ಪ್ರತಿನಿಧಿಗಳು ಆಗಮಿಸಿದ್ದ, ಒಂದರ್ಥದಲ್ಲಿ 'ಭಾರತದ ರಾಷ್ಟ್ತ್ರೀಯತೆಯನ್ನೇ ಪ್ರಶ್ನಿಸಲು ಮಾಡಲಾದ ರಾಷ್ಟ್ತ್ರೀಯ ಸಮ್ಮೇಳನ!' ಇದಾಗಿತ್ತು. ಇಂದು ಇವರೆಲ್ಲಾ ಒಟ್ಟಾಗಿ ಕೇವಲ ಕಾಶ್ಮೀರದ ಪ್ರತ್ಯೇಕತೆಯ ಕುರಿತು ಮಾತ್ರ ಮಾತನಾಡುತ್ತಿದ್ದಾರೆ. ಈ ಕೆಲಸ ಆದರೆ ದೇಶದ ವಿವಿಧೆಡೆಗಳಲ್ಲಿಯೂ ಇದೇ ದಾರಿ ಅನುಸರಿಸಿ ದೇಶವನ್ನು ಛಿದ್ರ-ಛಿದ್ರ ಮಾಡುವ ಹುನ್ನಾರ ಇವರಿಗಿದೆ.
          ಈ ಸಭೆಯ ತೀರ್ಮಾನಗಳಲ್ಲಿ ಮೊದಲನೆಯದೆಂದರೆ, 'ಭಾರತ ಸರ್ಕಾರವು ಕಾಶ್ಮೀರವನ್ನು ಅಂತಾರಾಷ್ಟ್ತ್ರೀಯ ಸಮಸ್ಯೆ ಎಂದು ಅಧಿಕೃತವಾಗಿ ಒಪ್ಪಿಕೊಳ್ಳಬೇಕು' ಎಂಬುದು. ಆ ಮೂಲಕ ಅಮೆರಿಕಾದ ಮಧ್ಯಸ್ಥಿಕೆ ಏರ್ಪಡಿಸಿ 'ಕೋತಿ ನ್ಯಾಯ' ಮಾಡಿಸುವ ಹುನ್ನಾರ ಇದು. ಕಳೆದ ವಾರವಷ್ಟೇ, ಕಾಶ್ಮೀರ ವಿಷಯದಲ್ಲಿ ತಾನು ಮಧ್ಯಸ್ಥಿಕೆ ವಹಿಸಬೇಕೆಂಬ ಪಾಕಿಸ್ತಾನದ ವಿನಂತಿಯನ್ನು ಅಮೇರಿಕಾ ನಯವಾಗಿ ತಳ್ಳಿಹಾಕಿದೆ. ಆದರೆ ಮನದಾಳದಲ್ಲಿ ಮಧ್ಯಸ್ಥಿಕೆಯ ಆಸೆ ಹೊಂದಿರುವ ಅದು, 'ಒತ್ತಡ'! ಹೆಚ್ಚಾದಾಗ ಕಾಶ್ಮೀರ ವಿಷಯದಲ್ಲಿ ತನ್ನ ಮೂಗುತೂರಿಸುವುದು ನಿಶ್ಚಿತ. ನಂತರ ತನ್ನ ಸೇನೆಯನ್ನು ಅಲ್ಲಿ ನುಗ್ಗಿಸಿ ತಂತ್ರಜ್ಞಾನದ ಸಹಾಯದಿಂದ ಭಾರತ-ಚೀನಾಗಳ ಮೇಲೆ ಒಂದು ಕಣ್ಣಿಡುವುದು ಅದರ ದೂ(ದು)ರಾಲೋಚನೆ. ಒಂದು ಕಡೆ ಪಾಕಿಸ್ತಾನದಿಂದ ಇನ್ನೊಂದು ಕಡೆ ದೇಶದ ಒಳಗಿನಿಂದ ಎರಡೂ ಕಡೆ ಯುದ್ಧವಾಗುವಂತೆ ಮಾಡಿ ಭಾರತವನ್ನು ಸೋಲಿಸುವುದು ಅಮೆರಿಕಾದಿಂದ ಹಿಡಿದು ಅರುಂಧತಿ ರಾಯ್ ವರೆಗಿನ ಎಲ್ಲರ ಕನಸು.
          ಕಳ್ಳಕಾಕರನ್ನು, ಸುಲಿಗೆಕೋರರನ್ನು, ಅತ್ಯಾಚಾರಿಗಳನ್ನು ಆರಾಮವಾಗಿ ಓಡಾಡಿಕೊಂಡಿರಲು ಬಿಟ್ಟು, ನ್ಯಾಯ ಕೇಳುವ ಲೇಖಕರ ಬಾಯಿಮುಚ್ಚಿಸುತ್ತಿರುವ ದೇಶವನ್ನು(ಭಾರತವನ್ನು) ಕಂಡರೆ ಮರುಕ ಬರುತ್ತದೆ ಎಂದಿರುವ ಅರುಂಧತಿ ರಾಯ್ ತಿಳಿಯಬೇಕಾದ್ದೆಂದರೆ, ಭಾರತದಲ್ಲಾಗಿರುವುದಕ್ಕೇ ಅವರು ಇಷ್ಟೊಂದು ಮಾತನಾಡಲು ಆಗುತ್ತಿರುವುದು ಎಂಬ ವಿಷಯವನ್ನು. ಹಾಗೂ ಬಾಂಗ್ಲಾದ ತಸ್ಲೀಮಾ ನಸ್ರೀನ್, ಮ್ಯಾನ್ಮಾರ್ ನ ಆಂಗ್ ಸಾನ್ ಸುಕಿ ಯಂತಹ ಲೇಖಕಿಯರ ಪರಿಸ್ಥಿತಿ ಏನಾಗಿದೆ ಎಂಬುದನ್ನೊಮ್ಮೆ ನೆನಪಿಸಿಕೊಳ್ಳಬೇಕು. ಭಾರತಕ್ಕೆ ಯಾವ ಸಮಯದಲ್ಲಿ ಯಾವಪೆಟ್ಟು ನೀಡಬೇಕು ಎಂಬುದನ್ನು ಅಂತಾರಾಷ್ಟ್ತ್ರೀಯ ಮಟ್ಟದಲ್ಲಿ ಹೆಸರು ಮಾಡಿರುವ ಅರುಂಧತಿ ರಾಯ್ ಗೆ ಚೆನ್ನಾಗಿ ತಿಳಿದಿದೆ. ಒಂದು ಅಣುಬಾಂಬ್ ನಿಂದ ಮಾಡಬಹುದಾದಷ್ಟು ವಿಚ್ಛಿದ್ರಕಾರಿ ಬೆಳವಣಿಗೆಯನ್ನು ಒಂದು ಸೆಮಿನಾರ್ ನಿಂದ ಮಾಡಬಹುದು ಎಂದು ಅವರು ತಿಳಿಸಿದ್ದಾರೆ. ಆದರೆ, ಹಸಿದು-ಬೆತ್ತಲಾಗಿರುವುದು ಭಾರತವಲ್ಲ, ಭಾರತೀಯರ ರಕ್ತಕ್ಕಾಗಿ ಹಸಿದು ತಮ್ಮ ಎಲ್ಲಾ ಷಡ್ಯಂತ್ರ ಬಯಲಾದ ಮೇಲೆ ಭಾರತದ ಮುಂದೆ ಬೆತ್ತಲಾಗಿರುವುದು ತಾವೇ ಎಂಬುದನ್ನು ರಾಯ್, ಗಿಲಾನಿ ಮುಂತಾದವರು ತಿಳಿಯಬೇಕು.

ಲಾಸ್ಟ್ ಡ್ರಾಪ್: ದೇಶದ ಹೆಸರು ಕೆಡುತ್ತದೆ ಎಂದು ಅರುಂಧತಿ, ಗಿಲಾನಿ ವಿರುದ್ಧ ಮೊಕದ್ದಮೆ ಹೂಡದ ಕೇಂದ್ರ ಸರ್ಕಾರ, ಪ್ರಚೋದನಾತ್ಮಕ ಹೇಳಿಕೆ ನೀಡಿದ್ದಾರೆನ್ನುವ ಕಾರಣವೊಡ್ಡಿ ದಾಖಲಿಸಿರುವ ಮೋದಿ-ಪ್ರವೀಣ್ ತೊಗಾಡಿಯಾ-ಪ್ರಮೋದ್ ಮುತಾಲಿಕ್ ಮೇಲಿರುವ ಮೊಕದ್ದಮೆಗಳನ್ನು ಮಾತ್ರ ಹಿಂದಕ್ಕೆ ಪಡೆಯುವುದಿಲ್ಲ. Double Standard ಅಂದರೆ ಇದೇನಾ?


ಬುಧವಾರ, ಆಗಸ್ಟ್ 11, 2010

ಪ್ರಜಾಪ್ರಭುತ್ವ ಉಳಿಯಬೇಕಾದರೆ 'ಕಾವಲುನಾಯಿ' ಗಟ್ಟಿಯಾಗಿರಬೇಕು ಅಲ್ಲವೇ?

         'ಪ್ರತಿಪಕ್ಷಗಳು ಪ್ರಜಾಪ್ರಭುತ್ವದ ಕಾವಲು ನಾಯಿ' ಎಂದು ಪ್ರಾರಂಭಿಕ ಹಂತದ ರಾಜ್ಯಶಾಸ್ತ್ರದಲ್ಲಿರುವ, ಪ್ರತಿಪಕ್ಷದ ಕುರಿತ ಮೊದಲ ನುಡಿ. ಕರ್ನಾಟಕದ ಮಟ್ಟಿನಲ್ಲಿ ಯೋಚಿಸುವುದಾದರೆ ಆ ನಾಯಿ ಪ್ರಜಾಪ್ರಭುತ್ವವನ್ನು ಕಾಯುವಷ್ಟು ಗಟ್ಟಿಯಾಗಿಲ್ಲ. ಜುಲೈ 25ರಿಂದ ರಾಜ್ಯ ಕಾಂಗ್ರೆಸ್ ನಾಯಕರು ಗಣಿ ಮಾಫಿಯಾದ ವಿರುದ್ಧ ಪ್ರತಿಭಟನೆಯಾಗಿ ಬಳ್ಳಾರಿಗೆ ಪಾದಯಾತ್ರೆ ಕೈಗೊಂಡು ಯಶಸ್ವಿಯಾಗಿ ಮುಗಿಸಿದ್ದಾರೆ. 16 ದಿನ ನಡೆದ ಈ ಪಾದಯಾತ್ರೆಯನ್ನು ನೊಡಿದ ಯಾರೇ ಪ್ರಜಾಪ್ರಭುತ್ವವಾದಿಗಳಿಗೂ ಸಂತೋಷವಾಗುವುದು ಸಹಜ ಹಾಗೂ ಹಾಗಾದಾಗ ಮಾತ್ರ ಅವರು ನಿಜವಾದ ಪ್ರಜಾಪ್ರಭುತ್ವವಾದಿಗಳು. ಕಾರಣ, ಯಾತ್ರೆಯುದ್ದಕ್ಕೂ ಕಾಂಗ್ರೆಸ್ ಅಭೂತಪೂರ್ವ ಒಗ್ಗಟ್ಟನ್ನು ಪ್ರದರ್ಶಿಸುತ್ತಿದೆ , ಅದರಲ್ಲಿ ಭಾಗವಹಿಸುವವರ ಸಂಖ್ಯೆ ಹಾಗೂ ಅವರ ಉತ್ಸಾಹ ದಿನೇ-ದಿನೇ ಹೆಚ್ಚುತ್ತಿದೆ. ಇದು ಪ್ರಜಾಪ್ರಭುತ್ವವು ಬಲಗೊಳ್ಳುವ ದೃಷ್ಟಿಯಿಂದ ಒಳ್ಳೆಯದು.
ಅದು ಯಾವುದೇ ಪಕ್ಷ ಅಧಿಕಾರದಲ್ಲಿರಲಿ, ಸರಿಯಾದ ಪ್ರತಿಪಕ್ಷವಿಲ್ಲದೇ ಆಡಳಿತ ಸುಸೂತ್ರವಾಗಿ ನಡೆಯಲು ಸಾಧ್ಯವಿಲ್ಲ. ವಾಸ್ತವವಾಗಿ ಅದು ಪ್ರಜಾಪ್ರಭುತ್ವವೇ ಅಲ್ಲದ ಸರ್ವಾಧಿಕಾರಿ  ಸರ್ಕಾರವಾಗುತ್ತದೆ. ಇದರಿಂದ ಜನತೆಗೆ ದೊರೆಯುವ ಲಾಭ ಸೊನ್ನೆ. ಪ್ರತಿಪಕ್ಷವನ್ನು ನಿರ್ನಾಮ  ಮಾಡಿ ಮೂವತ್ತು ವರ್ಷ ಅಧಿಕಾರ ಚಲಾಯಿಸಿದ ಪಶ್ಚಿಮ ಬಂಗಾಳದ ಕಮ್ಯೂನಿಸ್ಟ್ ನೇತೃತ್ವದ  ಸರ್ಕಾರವೇ ಇದಕ್ಕೆ ಉದಾಹರಣೆ. ಒಂದು ಕಾಲದಲ್ಲಿ ದೇಶದ ಬಹುಪಾಲು ಉದ್ಯಮದ ಕೇಂದ್ರವಾಗಿದ್ದ ರಾಜ್ಯ ಮೂವತ್ತು ವರ್ಷಗಳಲ್ಲಿ ಹಾಳು ಕೊಂಪೆಯಾಗಿದೆ. ಈ ದೃಷ್ಟಿಯಿಂದ ನೋಡಿದರೆ ಕಾಂಗ್ರೆಸ್ ಬಲಗೊಳ್ಳುತ್ತಿರುವುದು ಉತ್ತಮ ಬೆಳವಣಿಗೆ.
ಹಿಂದೆ ಸಿದ್ಧರಾಮಯ್ಯನವರು ಅಹಿಂದ ಚಳುವಳಿಯ ಹಿನ್ನೆಲೆಯಲ್ಲಿ ಜೆ.ಡಿ.ಎಸ್ ನಿಂದ ಬೇರ್ಪಡಿಸಿಕೊಂಡು ಹೊಗುತ್ತಾರೆನ್ನುವ ಸಂದರ್ಭದಲ್ಲಿ, ಕಟ್ಟಾ ಬಿ.ಜೆ.ಪಿ ಬೆಂಬಲಿಗ ಹಿರಿಯರೊಬ್ಬರ ಜೊತೆ ಅವರ ವಕೀಲ ಸ್ನೇಹಿತನ ಮನೆಗೆ ಹೋಗಿದ್ದೆ. ತನ್ನ ಇಂಗಿತವನ್ನು ಹೇಳಲೋ ಅಥವಾ ಬಂದಿದ್ದ ಹಿರಿಯರನ್ನು ಮೆಚ್ಚಿಸಲೋ 'ಸಿದ್ಧರಾಮಯ್ಯ ಪಕ್ಷದಿಂದ ಹೊರಗೆ ಹೋಗಿ ಜೆ.ಡಿ.ಎಸ್ ಎರಡು ಹೋಳಾದರೆ ಇದರಿಂದ ಬಿ.ಜೆ.ಪಿ ಗೆ ಲಾಭ ಹೆಚ್ಚು' ಎಂದರು ವಕೀಲರು. ಅದಕ್ಕೆ ಈ ಹಿರಿಯರು ಹೇಳಿದ್ದು, 'ಅದು ಯಾವುದೇ ಪಕ್ಷವಿರಬಹುದು-ಒಡೆಯುವುದರಿಂದ ಕೇವಲ ರಾಜಕೀಯ ಪಕ್ಷಗಳಿಗೆ ಲಾಭವಿರಬಹುದೇ ಹೊರತು ಜನತೆಗೆ ಅದರಿಂದ ಯಾವ ಲಾಭವೂ ಇಲ್ಲ. ನಕಾರಾತ್ಮಕ ಪ್ರಕ್ರಿಯೆಗಳಿಂದ ಸಕಾರಾತ್ಮಕ ಫಲಿತಾಂಶ ದೊರಕಲು ಸಾಧ್ಯವಿಲ್ಲ. ಈ ರೀತಿಯ ಪ್ರಕ್ರಿಯೆಗಳು ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸುತ್ತವೆ' ಎಂದು ಹೇಳಿದರು. ತಕ್ಷಣವೇ ವಕೀಲ ಸ್ನೇಹಿತನ ಮುಖ ಪೆಚ್ಚಾಯಿತು. ಸುಮಾರು ಐದು ವರ್ಷಗಳ ಹಿಂದೆ ನಡೆದ ಈ ಘಟನೆ ಕಾಂಗ್ರೆಸ್ ಪಾದಯಾತ್ರೆಯನ್ನು ನೋಡಿದಾಗ ನೆನಪಾಯಿತು.
Picture:analogengineering.com
ಈ ಪಾದಯಾತ್ರೆಯನ್ನು ಉಪಯೊಗವಿಲ್ಲದ್ದು ಎಂದು ಬಿಂಬಿಸಲು ಹೊರಟ ಕೆಲವರು ಮತಾಂತರ-ಗೋಹತ್ಯೆಗಳಂತಹ ದೊಡ್ಡ ಸಮಸ್ಯೆಗಳಿರುವಾಗ ಕೇವಲ ಅಕ್ರಮ ಗಣಿಗಾರಿಕೆಗೇಕೆ ಪಾದಯಾತ್ರೆ ಎನ್ನುತ್ತಿದ್ದಾರೆ. ಗಣಿ ಮಾಫಿಯಾ, ಅದರಲ್ಲಿನ ರಾಜಕೀಯ ಎಲ್ಲವನ್ನೂ ಬಿಟ್ಟು ಪಾದಯಾತ್ರಿಗಳು ಧರಿಸಿದ್ದ ಉಡುಪು, ಸಿದ್ಧರಾಮಯ್ಯನವರ ದುಬಾರಿ ಬೂಟು.... ಎಂದೆಲ್ಲಾ ಬಡಬಡಿಸುತ್ತ್ತಿದ್ದಾರೆ ಹಾಗೂ ಕಾಂಗ್ರೆಸ್ಗೆ ನಕ್ಸಲರ ಸಮಸ್ಯೆ ದೊಡ್ಡದಾಗಿ ಕಾಣುವುದೇ ಇಲ್ಲ ಎನುತ್ತಿದ್ದಾರೆ. ಅಂದರೆ ಈ ಎಲ್ಲಾ ವಾದಗಳ ಅರ್ಥ ಮತಾಂತರ-ಗೋಹತ್ಯೆ ಬಗ್ಗೆ ತಲೆಕೆಡಿಸಿಕೊಳ್ಳದ ಕಾಂಗ್ರೆಸ್ ಗಣಿ ಮಾಫಿಯಾದ ವಿರುದ್ಧವೂ ಏನೂ ಮಾಡಬಾರದೆಂದೇ? ಗಾಂಧೀ ಪಕ್ಷದ ನಾಯಕರ ಬಟ್ಟೆಯ ಬಗ್ಗೆ ಮಾತನಾಡುವವರು ಶ್ರೀಯುತ ಎಚ್.ಎಸ್ ದೊರೆಸ್ವಾಮಿಯವರು ತುಂಡು ಬಟ್ಟೆ ಧರಿಸುವುದಿಲ್ಲಾ ಎಂದೋ, ಶ್ರೀ ಮತ್ತೂರು ಕೃಷ್ಣಮೂರ್ತಿಯವರು ಕಾರಿನಲ್ಲಿ ಓಡಾಡುತ್ತಾರೆ ಎಂದೋ ಅವರನ್ನು ಗಾಂಧೀವಾದಿಗಳಲ್ಲ ಎಂದು ಹೇಳಲು ಸಾಧ್ಯವಾಗುತ್ತದೆಯೇ? ಬ್ರಿಟಿಷರ ವಿರುದ್ಧ ಪ್ರತಿಭಟಿಸಲು ಗಾಂಧೀಜಿ ಸಾಂಕೇತಿಕವಾಗಿ ತುಂಡುಬಟ್ಟೆ ತೊಟ್ಟರೇ ಹೊರತು ತುಂಡು ಬಟ್ಟೆ ತೊಡುವುದೇ ಗಾಂಧೀವಾದವಲ್ಲ ಎಂಬುದನ್ನು ತಿಳಿಯಬೇಕು. ತುಂಡುಡುಗೆ ಉಟ್ಟವರೆಲ್ಲಾ ಗಾಂಧೀವಾದಿಗಳು ಎನ್ನುದಾದದರೆ ನಮ್ಮದೇಶದ ಬೀದಿಗಳಲ್ಲಿ ಭಿಕ್ಷ್ಷೆ ಬೇಡುತ್ತಿರುವವರೆಲ್ಲಾ ಗಾಂಧೀವಾದಿಗಳು!. ಹಾಗೂ ನಕ್ಸಲ್ ಸಮಸ್ಯೆಯ ಬಗ್ಗೆ ಕಾಂಗ್ರೆಸ್ಗೆ ಯಾವುದೇ ಕಾಳಜಿಯಿಲ್ಲ ಎಂದೂ ಕೆಲವರು ಹೇಳುತ್ತಾರೆ. ಆದರೆ, ಚಂದ್ರಬಾಬು ನಾಯ್ಡು ಅವರ ಕಾಲದಲ್ಲಿ ಮುಖ್ಯಮಂತ್ರಿಯವರ ಕಾರಿಗೇ ಬಾಂಬ್ ಇಡುವಷ್ಟು ಹೆಚ್ಚಿಕೊಂಡಿದ್ದ ಆಂಧ್ರದ ನಕ್ಸಲರನ್ನು ಆಪರೇಷನ್ ಗ್ರೀನ್ ಹಂಟ್ ಹೆಸರಿನಲ್ಲಿ ಬಗ್ಗು ಬಡಿದದ್ದು ಅದೇ ಕಾಂಗ್ರೆಸ್ ಪಕ್ಷದ ವೈ.ಎಸ್ ರಾಜಶೇಖರ ರೆಡ್ಡಿಯವರಲ್ಲವೇ?
ಇಷ್ಟೆಲ್ಲವನ್ನೂ ಕಾಂಗ್ರೆಸ್ ಪಕ್ಷವನ್ನು ಸಾರಾಸಗಟಾಗಿ ಸಮರ್ಥಿಸಲು ಇಲ್ಲಿ ಹೇಳುತ್ತಿಲ್ಲ. ಬದಲಾಗಿ ಈಗಿನ ಪಾದಯಾತ್ರೆಗೂ ಕಾಂಗ್ರೆಸ್ ನ  ಇಲ್ಲಿಯವರೆಗಿನ ಧೋರಣೆಗಳಿಗೂ ಸಂಬಂಧ ಕಲ್ಪಿಸಿ ಒಂದು ದೊಡ್ಡ ಮೋಸದ ಜಾಲವನ್ನು ಸಮರ್ಥಿಸಲು ಯಾರೂ ಮುಂದಾಗಬಾರದು. ಮುಂದೆ ಮತಾಂತರ-ಗೋಹತ್ಯೆ-ಭಯೋತ್ಪಾದನೆಯ ವಿಷಯಗಳು ಬಂದಾಗ ಆ ಪಕ್ಷವನ್ನು ಅಗತ್ಯವಿದ್ದಲ್ಲಿ ವಿರೋಧಿಸೋಣ. ಆದರೆ, ಇದು ಸರಿಯಾದ ಕಾಲವಲ್ಲ. ಈ ಯಾತ್ರೆಯಿಂದ ಕಾಂಗ್ರೆಸ್ನಲ್ಲಿ ನಾಲ್ಕೈದು ಜನ ಪ್ರಭಾವಿ ನಾಯಕರು ಹೊರಹೊಮ್ಮಿ ಪ್ರತಿಪಕ್ಷ ಗಟ್ಟಿಯಾದರೆ ಲಾಭ ಯಾರಿಗೆ? ಪ್ರಜಾಪ್ರಭುತ್ವಕ್ಕೇ ಅಲ್ಲವೇ? ಅಷ್ಟೇ ಅಲ್ಲದೇ ಪ್ರತಿಪಕ್ಷಕ್ಕೆ ವಿದೇಶಗಳಲ್ಲಿ Government-in-Waiting ಎಂದು ಹೇಳುತ್ತಾರೆ. ಅಧಿಕಾರದ ಗದ್ದುಗೆ ಏರಬೇಕೆನ್ನುವುದು ಪ್ರತಿಯೊಂದು ವಿರೋಧಪಕ್ಷದ ಗುರಿಯಾಗಿರುತ್ತದೆ, ಇದಕ್ಕೆ ಕಾಂಗ್ರೆಸ್ ಕೂಡಾ ಹೊರತಲ್ಲ. ಈ ದಿಕ್ಕಿನಲ್ಲಿ ಚರ್ಚೆ ಮುಂದುವರಿಯಲಿ. ದಯವಿಟ್ಟು ಈ ಲೇಖನ ಬರೆದವ ನಾನು ಯಾವ ಪಕ್ಷದವನು ಎಂಬುದರಿಂದ ಯೋಚಿಸಲು ಪ್ರಾರಂಭಿಸದಿರೋಣ, ನಿಜ ಪ್ರಜಾಪ್ರಭುತ್ವವಾದಿಗಳಾಗೋಣ.

ಗುರುವಾರ, ಜುಲೈ 15, 2010

ಕ್ರೀಡೋದ್ಯಮ-ಕ್ರೀಡಾಸ್ತ್ರ; ಕಳೆದು ಕಳೆದು ಹೋಯ್ತು ಕ್ರೀಡಾಶಯ

ಕ್ರೀಡೋದ್ಯಮ-ಕ್ರೀಡಾಸ್ತ್ರ; ಕಳೆದು ಕಳೆದು ಹೋಯ್ತು ಕ್ರೀಡಾಶಯ

          ಆ ದೇಶಕ್ಕೆ ಸ್ವಾತಂತ್ರ್ಯ ಲಭಿಸಿದ್ದು ಮದ್ದು ಗುಂಡುಗಳಿಂದಲ್ಲ, ರಾಜತಾಂತ್ರಿಕ ಒಪ್ಪಂದಗಳಿಂದಲ್ಲ, ಸತ್ಯಾಗ್ರಹಗಳಿಂದಲ್ಲ. ಅದು ಸಾಧ್ಯವಾಗಿದ್ದು ಕ್ರೀಡೆಯಿಂದ! ಯುನೈಟೆಡ್ ಕಿಂಗ್ಡಮ್ ಆಡಳಿತದಿಂದ ಹೊರಗೆ ಬಂದು ರೋಡೀಸಿಯಾ ಎಂಬ ದೇಶಕ್ಕಾಗಿ ಹೋರಾಟ ನಡೆಸುತ್ತಿದ್ದ ಸಮಯದಲ್ಲಿ ಅಲ್ಲಿಯ ಜನರ ಬೆಂಬಲಕ್ಕೆ ಬಂದದ್ದು 1968ರ ಒಲಿಂಪಿಕ್ ಕ್ರೀಡಾಕೂಟ  ದಲ್ಲಿ ಭಾಗವಹಿಸಲು ಬಂದ ಆಹ್ವಾನ. ತಕ್ಷಣವೇ ಎಚ್ಚೆತ್ತ ಅವರು ತಮ್ಮ ದೇಶದ ಹೊಸ ಧ್ವಜ, ಲಾಂಛನಗಳೊಂದಿಗೆ ಒಲಿಂಪಿಕ್ ಅಂಗಳದೊಳಗೆ ಇಳಿದೇಬಿಟ್ಟರು. ಮುಂದೆ 1969ರಲ್ಲೇ ರೋಡೀಸಿಯಾ ರಿಪಬ್ಲಿಕ್ ಎಂಬ ಹೆಸರಿನಲ್ಲಿ ಹೊಸ ದೇಶ ಅಸ್ತಿತ್ವಕ್ಕೆ ಬಂತು. ಇದು ಒಂದು ಕ್ರೀಡಾಕೂಟಕ್ಕೆ ಇರುವ ಶಕ್ತಿಯಾಗಿತ್ತು, ಇಂದೂ ಆಗಿದೆ. ಇಂದು ಕ್ರೀಡೆ ಕೇವಲ ಆಟವಾಗಿ ಉಳಿದಿಲ್ಲ. ಒಲಿಂಪಿಕ್ ಎನ್ನುವುದು ಒಂದು ಸಂಚಾರಿ ಬೃಹತ್ ಉದ್ಯಮವಾಗಿದೆ. ನಾಲ್ಕು ವರ್ಷಗಳಗೊಮ್ಮೆ ಬೇರೆ-ಬೇರೆ ದೇಶಗಳಲ್ಲಿ ಸ್ಥಾಪನೆಗೊಂಡು, ಉದ್ಯಮ ಸ್ನೇಹೀ ವಾತಾವರನವನ್ನು ನಿರ್ಮಿಸಿ, ಆಯಾ ದೇಶದ ಪ್ರವಾಸೋದ್ಯಮವನ್ನು ಪ್ರಭಾವಿಸಿ, ತಯಾರಿಯ ಹೆಸರಿನಲ್ಲಿ ಸ್ಥಳೀಯರಿಗೆ ಹಿಂಸೆ ನೀಡಿ, ದುಂದುವೆಚ್ಚ ಮಾಡಿ,.... ಹೀಗೇ ಒಳ್ಳೆಯದು ಹಾಗೂ ಕೆಟ್ಟದರ ಪಟ್ಟಿ ಬೆಳೆಯುತ್ತಾ ಹೋಗುತ್ತದೆ.

ಕ್ರೀಡೆಯು ಎರಡು ದೇಶಗಳ ನಡುವಣ ಸಂಬಂಧ ವೃದ್ಧಿಗೊಳಿಸಲು ಉಪಕರಣ(Tool) ಆಗಿಯೂ ಬಳಕೆಯಾಗುತ್ತಿದೆ. ಕ್ರೀಡೆಯನ್ನು ಅಂತರರಾಷ್ಟ್ರೀಯ ಸಂಬಂಧಗಳಿಗೆ ಬಳಸಿಕೊಂಡ ಉತ್ತಮ ಉದಾಹರಣೆಯೆಂದರೆ, 1971ರಲ್ಲಿ ಅಮೇರಿಕಾ ಹಾಗೂ ಚೀನಾ ನಡುವಣ ನಡೆದ ಟೇಬಲ್ ಟೆನ್ನಿಸ್ ಪಂದ್ಯಾವಳಿಗಳು. 1949 ರಲ್ಲಿ ಕಮ್ಯೂನಿಸ್ಟ್ ರಾಜ್ಯಭಾರ ಪ್ರಾರಂಭವಾದಂದಿನಿಂದ ಮೊದಲ ಬಾರಿಗೆ ಒಂದು ಕ್ರೀಡಾ ತಂಡವನ್ನು ಚೀನಾಕ್ಕೆ ಕಳುಹಿಸಲು ಅಮೇರಿಕಾ ಅಧ್ಯಕ್ಷ ನಿಕ್ಸನ್ ಒಪ್ಪಿದ್ದರು. ಚೀನಾದಲ್ಲಿ ಅತ್ಯುತ್ತಮ ಟಿ.ಟಿ ಆಟಗಾರರಿದ್ದರು. ಆದರೆ ಅಮೇರಿಕಾ ಆ ಆಟದಲ್ಲಿ ಇನ್ನೂ ಕೂಸು. ಅಂದುಕೊಂಡಂತೆಯೇ ಚೀನಾ, ಈ ಪಂದ್ಯಾವಳಿಗಳಲ್ಲಿ ಗೆದ್ದಿತು. ಇಷ್ಟಕ್ಕೇ ಸುಮ್ಮನಿರದ ಚೀನಾ, ಒಂದು ಬಾಸ್ಕೆಟ್ ಬಾಲ್ ಕ್ರೀಡಾಕೂಟವನ್ನು ಆಯೋಜಿಸಲು ನಿರ್ಧರಿಸಿತು. ಆದರೆ ಬಾಸ್ಕೆಟ್ ಬಾಲ್ನಲ್ಲಿ ಅಮೇರಿಕಾ ಹೆಚ್ಚು ಪ್ರಾವಿಣ್ಯತೆ ಪಡೆದಿದ್ದರೆ, ಚೀನಾ ಇನ್ನೂ ಕಲಿಯುತ್ತಿತ್ತು. ಇಲ್ಲೂ ಸಹಾ ಅಂದುಕೊಂಡಂತೆಯೇ ಅಮೇರಿಕಾ ಗೆದ್ದಿತು. ಆದರೆ, ಈ ಸೋಲು ಗೆಲುವುಗಳ ನಡುವೆ ಎರಡೂ ದೇಶಗಳ ನಡುವಣ 20 ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ವ್ಯಾಪಾರ ಒಪ್ಪಂದಗಳು ಮತ್ತೆ ಪ್ರಾರಂಭಗೊಂಡವು. ಈ ಪರಿಣಾಮ 1979ರಲ್ಲಿಯೇ ನಿಕ್ಸನ್ ಚೀನಾಭೇಟಿಯನ್ನೂ ಮಾಡಿದರು. ಕ್ರೀಡೆಯು ಎರಡು ಬೃಹತ್ ರಾಷ್ಟ್ರಗಳ ನಡುವಣ ಸಂಬಂಧಗಳನ್ನು ಮರುಸ್ಥಾಪಿಸಲು ಬಳಕೆಯಾಯಿತು.
ಆದರೆ, ಅದೇ ಚೀನಾ, ಕಳೆದ ಒಲಿಂಪಿಕ್ನಲ್ಲಿ ಅಮೇರಿಕಾಕ್ಕಿಂತ ಮೇಲೆಂದು ತೋರಿಸಿಕೊಳ್ಳಲು ಒಲಿಂಪಿಕ್ ಅನ್ನೇ ಉಪಕರಣವಾಗಿಯಲ್ಲಾ, ಅಸ್ತ್ರವಾಗಿ ಉಪಯೋಗಿಸಿದ್ದು ಪರಿಸ್ಥಿತಿಯ ದುರಂತವೇ ಸರಿ. ದೇಶದ ಹಲವೆಡೆ ಕಿತ್ತು ತಿನ್ನುವ ಬಡತನವಿದ್ದರೂ ಆ ಸ್ಥಳಗಳಿಗೆ ಮಾಧ್ಯಮದವರು ಹೋಗದಂತೆ, ಕೇವಲ ವಿಜೃಂಭಣೆಯಿಂದ ತಯಾರುಮಾಡಿದ ಹಕ್ಕಿಗೂಡು (ಒಲಿಂಪಿಕ್ ಕ್ರೀಡಾಂಗಣ) ಸುತ್ತ ಬಣ್ಣ-ಬಣ್ಣದ ಸೆಟ್ಅನ್ನು ತೋರಿಸಿ, ಇದೇ ಚೀನಾ ಎಂದು ಹೇಳಿತು. ಮೂರು-ನಾಲ್ಕು ವರ್ಷಗಳಿಂದ ತಮ್ಮ ತನವನ್ನೇ ಅಡವಿಟ್ಟು, ಗಂಡ-ಮಕ್ಕಳ ಮುಖವನ್ನೂ ನೋಡಲಾರದಂತಹ ಮಾನಸಿಕ ಸಂದಿಗ್ಧದಲ್ಲಿ ಅಭ್ಯಾಸ ಮಾಡಿ ಚಿನ್ನದ ಪದಕ ಗೆದ್ದುಕೊಟ್ಟ ಹೆಣ್ಣುಮಕ್ಕಳನ್ನು ತೋರಿಸಿ ಇದೇ ನಿಜವಾದ Sportiveness ಎಂದಿತು. ಒಲಿಂಪಿಕ್ನಂತರ ಕರ್ಪ್ಯೂನಂತಹ ಆ ಸ್ಥಿತಿ ತಿಳಿಗೊಂಡ ನಂತರವೇ ಚೀನಾದ ಈ ಹುಳುಕುಗಳೆಲ್ಲಾ ಹೊರಗಡೆ ಬಂದದ್ದು.
ಇನ್ನು, ಭಾರತದ ವಿಷಯದಲ್ಲಿ, ಕ್ರೀಡೆ ಎನ್ನುವ ಪದದ ವ್ಯಾಪಕತೆಯನ್ನೇ ಮೀರಿ ಬೆಳೆದುನಿಂತಿರುವುದು ಕ್ರಿಕೆಟ್. Cricket is the Largest practicing religion in India ಎಂದು ಹಲವರು ಹೇಳಿದ್ದನ್ನು ನಾವು ಕೇಳಿರುತ್ತೇವೆ. ಇಂಟರ್ನೆಟ್ನ ವಿವಿಧ ವಿಭಾಗಗಳಲ್ಲಿ ವ್ಯಾಪಾರ, ರಾಜಕೀಯ, ದೇಶ, ಅಂತರರಾಷ್ಟ್ರೀಯ, ಕ್ರೀಡೆ ಎಂಬವುಗಳ ಜೊತೆಗೆ ಕ್ರಿಕೆಟ್ ಎಂಬ ವಿಭಾಗವೇ ಪ್ರತ್ಯೇಕವಾಗಿದೆ. ತನ್ನ ಸ್ವಯಂಕೃತ ಅಪರಾಧಗಳಿಂದಲೇ ಪಾತಾಳಕ್ಕಿಳಿದಿರುವ ಹಾಕಿಯೆಂಬ ಭಾರತದ ಅಧಿಕೃತ ರಾಷ್ಟ್ರೀಯ ಆಟವನ್ನು ಇದರ ನೆರಳು ಆವರಿಸಿದೆ ಎನ್ನುವಷ್ಟರ ಮಟ್ಟಿಗೆ ಕ್ರಿಕೆಟ್ ಬೆಳೆದು ನಿಂತಿದೆ. ಇದೇ ಕ್ರಿಕೆಟ್ ನೋಡಲು ಪಾಕಿಸ್ತಾನದಿಂದ ಬಂದ ವೀಕ್ಷಕರು ! ವರ್ಷಗಳೇ ಕಳೆದರೂ ಭಾರತದಿಂದ ವಾಪಸ್ ತವರು ದೇಶಕ್ಕೆ ಹೋಗಿಲ್ಲ. ಅವರೆಲ್ಲಾ ಇಲ್ಲೇ ಉಳಿದು ಭಾರತದಲ್ಲಿ ನಿರಂತರ ನಡೆಯುತ್ತಿರುವ ಭಯೋತ್ಪಾದನೆಗೆ ಪ್ರಚೋದಿಸುತ್ತಿರುವ ಅನುಮಾನಗಳೂ ದಟ್ಟವಾಗಿವೆ. ಇಂತಹವರಿಗೆ ಕ್ರಿಕೆಟ್ ಎನ್ನುವುದು ಭಯವನ್ನು ಉತ್ಪಾದನೆ ಮಾಡಲು ಸಹಕಾರಿಯಾದ ಒಂದು ಉತ್ಪಾದನಾ ಕಾರ್ಖಾನೆ (Production Industry). ದೇಶ-ದೇಶಗಳು ಯುದ್ಧ ಭೂಮಿಯಲ್ಲಿ ಹೊಡೆದಾಡಿ ಸಾಯುವ ಬದಲು, ಕ್ರೀಡಾಂಗಣದಲ್ಲಿ ಒಂದಾಗಲಿ ಎನ್ನುವುದು ಕ್ರೀಡೆಗಳ ಆಶಯವಾದರೆ, ಅದೇ ಕ್ರೀಡೆಗಳಿಂದಲೇ ರಣಾಂಗಣಕ್ಕೆ ಟಿಕೆಟ್ ಪಡೆಯುತ್ತಿರುವುದು ವಿಪಯರ್ಾಸ. ಒಂದು ಬಟ್ಟೆಯ ತುಂಡು ಒಬ್ಬನಿಗೆ ಕರವಸ್ತ್ರವಾಗಿ, ಒಬ್ಬನಿಗೆ ಸ್ಕಾರ್ಪ್ ಆಗಿ, ಮತ್ತೊಬ್ಬನಿಗೆ ಧ್ವಜವಾಗಿ ಕಾಣುವಂತೆ, ಶಾಂತಿ ಸ್ಥಾಪಿಸಲು ಹೊರಟ ಕ್ರೀಡೆಯೂ ಉಗ್ರರಿಗೆ ಅಸ್ತ್ರವಾಗಿ ಕಾಣುತ್ತಿದೆ. ಭಾರತದ ಮಟ್ಟಿಗೆ ಕ್ರೀಡೆ ಎನ್ನುವುದು ಒಂದು ನಕಾರಾತ್ಮಕ ಅಂಶವಾಗಿಯೇ ಉಳಿದಿದೆ. ಅಥ್ಲೆಟಿಕ್ ಕ್ರೀಡೆಗಳಲ್ಲಿ ಪದಕ ಗೆಲ್ಲಲು ತಿಣುಕಾಡಿದರೆ ಕ್ರಿಕೆಟ್, ಪರಸ್ಪರ ಸಂಬಂಧಗಳನ್ನು ಬೆಳೆಸುವ ಬದಲು, ಪಾಕಿಸ್ತಾನದ ಜೊತೆ ಸಂಬಂಧ ಹಳಸಲು ಸಹಕರಿಸಿದ್ದೇ ಹೆಚ್ಚು. ಅದಕ್ಕೆ ತಕ್ಕಂತೆ ನಮ್ಮ ಮಾಧ್ಯಮಗಳು ನೀಡಿದ ಭಾರತ-ಪಾಕ್ ರನ್ ಸಮರ, ಭಾರತದ ಸಾಂಪ್ರದಾಯಿಕ ಎದುರಾಳಿ ಪಾಕ್, ನಾಳೆಯ ಪಂದ್ಯಕ್ಕೆ ರಣತಂತ್ರ,..... ಎನ್ನುವಂತಹ ತಲೆಯಿಲ್ಲದೇ ನೀಡಿದ ತಲೆಬರಹಗಳ ಕಾರಣದಿಂದ ಆಟ ಎನ್ನುವುದು ರಣರಂಗವೇ ಆಗಿದೆ.
ಇನ್ನೊಂದು ಕಡೆ ಕ್ರೀಡಾಕೂಟಗಳನ್ನು ಬಹಿಷ್ಕರಿಸುವ ಮೂಲಕ ಇನ್ನೊಂದು ದೇಶದೊಡನೆ ರಾಜತಾಂತ್ರಿಕ ಒತ್ತಡ ಹಾಕುವ ಕೆಲಸಗಳೂ ನಡೆದಿವೆ. ಅದು ಪ್ಯಾಲೆಸ್ತೀನಿನ ಜನರ ಹೋರಾಟದ ಬೆಂಬಲಕ್ಕೋಸ್ಕರ 2004ರ ಒಲಿಂಪಿಕ್ನ್ನೇ ಬಹಿಷ್ಕರಿಸಿದ ಇರಾನಿನ ಜೂಡೋ ಆಟಗಾರ Arash Miresmaeli  ಯಿಂದ ಮೊದಲ್ಗೊಂಡು, ಪಾಕಿಸ್ತಾನದಲ್ಲಿ ಶ್ರೀಲಂಕಾ ಕ್ರಿಕೆಟ್ ತಂಡದ ಮೇಲಿನ ಉಗ್ರರ ಆಕ್ರಮಣ ಆಗುವವರೆಗೂ ಕ್ರೀಡೆಯನ್ನು ಬಳಸಿಕೊಂಡು ಬ್ಲಾಕ್ಮೇಲ್ ಮಾಡುವ ತಂತ್ರಗಳೂ ನಡೆದಿವೆ. ಪಾಕಿಸ್ತಾನದಲ್ಲಾದ ಆ ಘಟನೆ ನಡೆದಾಗಿನಿಂದ, ಅಲ್ಲಿ ಯಾವುದೇ ಅಂತಾರಾಷ್ಟ್ರೀಯ ಪಂದ್ಯಗಳಲ್ಲೂ ಭಾಗವಹಿಸುವುದಿಲ್ಲವೆಂದು ಹಲವು ದೇಶಗಳು ಹೇಳಿದ ಮೇಲಂತೂ, ಪಾಕಿಸ್ತಾನದ ಮಾನ ಅಂತಾರಾಷ್ಟ್ರೀಯ ಮಟ್ಟದಲ್ಲಿ(ಮಾರುಕಟ್ಟೆಯಲ್ಲಿ !) ಹರಾಜಗುತ್ತಿರುವುದು ಕ್ರೀಡೆಯ ಪ್ರಭಾವವನ್ನು ಸೂಚಿಸುತ್ತದೆ. ಈ ರೀತಿಯ ಬಹಿಷ್ಕಾರಗಳು, ಬೆದರಿಕೆಗಳು ಭಾರತವನ್ನೂ ಬಿಟ್ಟಿಲ್ಲಾ ಎನ್ನುವುದೂ ಸತ್ಯ.
ಇವೆಲ್ಲವುಗಳ ನಡುವೆಯೂ ಹಲವು ಒಳ್ಳೆಯ ಪಂದ್ಯಗಳು ನೋಡಲು ಸಿಗುತ್ತಿವೆ, ಆರೋಗ್ಯಕರ ಸೆಣೆಸಾಟಗಳೂ ನಡೆಯುತ್ತಿವೆ. ಇಂದು ಆರ್ಕುಟ್ ಒಂದರಲ್ಲೇ ಕ್ರಿಕೆಟ್ ಹೆಸರಿನಲ್ಲಿ ಸಾವಿರಕ್ಕೂ ಹೆಚ್ಚು ಕಮ್ಯೂನಿಟಿಗಳಿವೆ, ಸಾವಿರಕ್ಕೂ ಹೆಚ್ಚು ಜನರ ಪ್ರೊಫೈಲ್ನಲ್ಲಿನ ಕ್ರೀಡೆಗಳ ಪಟ್ಟಿಯಲ್ಲಿ ಕ್ರಿಕೆಟ್ ಅಗ್ರಸ್ಥಾನ ಪಡೆದಿದೆ. ಇನ್ನೊಂದು ವಿಷಯವೆಂದರೆ ಕ್ರಿಕೆಟ್, ಹಾಕಿ, ಫುಟ್ಬಾಲ್, ಶೂಟಿಂಗ್, ಬಾಕ್ಸಿಂಗ್ ಎಂಬ ಯಾವ ಭೇದವೂ ಸಾಮಾನ್ಯ ಜನರಿಗಿಲ್ಲ ಎನ್ನುವುದು ಹಲವುಬಾರಿ ಸಾಬೀತಾಗಿದೆ. ಬುಗುರಿಯ ಆಟದಲ್ಲಿ ಭಾರತ ಒಲಿಂಪಿಕ್ ಚಿನ್ನದ ಪದಕ ಗೆದ್ದರೂ ಜನರು ಅದನ್ನೂ ಇಷ್ಟ ಪಡುತ್ತಾರೆ ಎನ್ನುವುದರಲ್ಲಿ ಎರಡು ಮಾತಿಲ್ಲ. ರಾಜಕೀಯ(ಕೆಟ್ಟ) ರಹಿತ ಕ್ರೀಡೆಗಳನ್ನು ಆಡಿದ್ದೇ ಆದರೆ ದೇಶದ ಬೊಕ್ಕಸಕ್ಕೆ ಆದಾಯ, ದೇಶದ ಹೆಸರಿಗೆ ಕೀತಿ, ಎರಡನ್ನೂ ತಂದುಕೊಡುವ ಉಪಕರಣವಾಗಿ ಕ್ರೀಡೆ ರೂಪುಗೊಳ್ಳುತ್ತದೆ ಎನ್ನುವುದರಲ್ಲಿ ಅತಿಶಯವಿಲ್ಲಾ ಎನ್ನಿಸುತ್ತದೆ.

ಬುಧವಾರ, ಮಾರ್ಚ್ 31, 2010

ಎಲ್ಲಾರಿಗೂ ದೊಡ್ದಪುರದ ರಮೇಶನ ದೊಡ್ಡ ನಮಸ್ಕಾರಗಳು.....

               ಅಲ್ಲಿ-ಇಲ್ಲಿ ಕೇಳಿದ್ದು-ಓದಿದ್ದು ಎಲ್ಲಾನೂ ಸೇರಿಸಿ ಅವಾಗವಾಗ ಲೇಖನಗಳನ್ನ ಬರೀತಾ ಇರ್ತೀನಿ. ನೀವು ಹೋದಾಗ-ಬಂದಾಗ-ಬಿಡುವಾದಾಗಲೆಲ್ಲಾ ಇದನ್ನ ಒದ್ತಾ ಇರಿ. ನಿಮಗೆ ಸರಿ-ತಪ್ಪು ಅನ್ಸಿದ್ದನ್ನ ಇನ್ನೊಬ್ರಿಗೆ ಬೇಜಾರಗ್ದಿರೋ ರೀತಿ ಕಾಮೆಂಟ್ ಮಾಡಿ. ನೀವೂ ಅವಾಗವಾಗ ಬರ್ದು-ಗಿರ್ದು ಮಾಡ್ತಾ ಇರಿ.

ಇಂತಿ,
ರಮೇಶ ದೊಡ್ಡಪುರ

ಕೊಟ್ಟಾರೆ ಕೊಡು ಶಿವನೇ ಚಿರಂಜೀವಿಯಗಿಸೋ ವರವಾ...!

               ಹಳ ದಿನಗಳಿಂದ ಅದೇಕೋ ಅದೇ ವಿಷಯ ತಲೆಯನ್ನು ಕೊರೀತಾ ಇತ್ತು. ಹೀಗೆಲ್ಲಾ ಯಾಕೆ ಆಗುತ್ತೆ? ಭಗವದ್ಗೀತೆಯಲ್ಲಿ ಶ್ರೀ ಕೃಷ್ಣನೇ ಹೇಳಿದ್ದಾನೆ, ಬಟ್ಟೆಯನ್ನು ಬದಲಿಸಿದಂತೆ ದೇಹವನ್ನು ಆತ್ಮವು ಬದಲಿಸುತ್ತದೆ ಎಂದು. ಆದರೂ ಏಕೆ ಈ ಜನಕ್ಕೆ ಆಗಿಹೋಗಿರುವ ಒಬ್ಬ ’ಆಪ್ತ’ನ ಸಾವನ್ನು ಒಪ್ಪಿಕೊಳ್ಳಲು ಆಗುವುದಿಲ್ಲ?....

               ಅವತ್ತು ಆಫೀಸ್ ಮುಗಿಸಿಕೊಂಡು ಬಿರಬಿರನೆ ಮನೆಕಡೆಗೆ ಹೊರಟು ಖೋಡೇಸ್ ವೃತ್ತದ ಸಿಗ್ನಲ್ ನಲ್ಲಿ ಹಸಿರು ನಿಶಾನೆಗಾಗಿ ಕಾಯುತ್ತಾ ನಿಂತಿದ್ದೆ. ತಕ್ಷಣ ಆಶ್ಚರ್ಯ, ನಗು, ಕೋಪ ಎಲ್ಲಾ ಒಟ್ಟೊಟ್ಟಿಗೇ ಆದ ಅನುಭವ. ಪೇಪರ್ ಮಾರುವ ಹುಡುಗನ ಕೈಲಿದ್ದ ಹಳದೀ(ಪೀತ) ಪತ್ರಿಕೆಯೊಂದರ ಮುಖಪುಟದಲ್ಲಿ ಬರೆದಿತ್ತು, "ಸಿಂಹ ಸಾಯಲಿಲ್ಲ- ಗುರಿಯಿಟ್ಟು ಹೊಡೆದರು". ಸಾಹಸ ಸಿಂಹ ವಿಷ್ಣುವರ್ಧನ್ ಸಾವಿನ ಕುರಿತು ಬರೆಯಲಾಗಿದ್ದ ತಲೆಯಿಲ್ಲದ ತಲೆಬರಹ ಅದು. ಇನ್ನು ಅದನ್ನು ಕೊಂಡು ಓದಿ ಒಂಭತ್ತು ರೂಪಾಯಿ ಹಾಳುಮಾಡಿಕೊಳ್ಳುವಷ್ಟು ಮೂರ್ಖನಾಗಿಲ್ಲದಿದ್ದರಿಂದ ಒಳಗೆ ಏನಿರಬಹುದೆಂದು ಊಹಿಸಿ ಸುಮ್ಮನಾದೆ.

               ತಕ್ಷಣ ಟ್ಯೂಬ್ ಲೈಟ್ ಹತ್ತಿಕೊಂಡಿತು! ಆ ಗಲಾಟೆಗಳಿಗೆಲ್ಲಾ ಇಂತಹ ಪತ್ರಿಕೆಗಳೇ ಕಾರಣ ಇರಬಹುದು. ಇಲ್ಲ ಸಲ್ಲದ್ದನ್ನೆಲ್ಲಾ ’ಬರೆ’ದು ತಮಾಷೆ ನೋಡುವ ಇಂಥವರಿಂದಲೇ ಇದೆಲ್ಲ. ತಿಳಿನೀರಿನಂತಿರುವ ಜನರ ಮನಸ್ಸಿಗೆ ಕಲ್ಲೆಸೆದು ತರಂಗಗಳನ್ನು ನೋಡುತ್ತಾ, ಏಳುವ ಬಗ್ಗಡವನ್ನು ಬಣ್ಣಿಸುತ್ತಾ ಕೂರುವವರು ಇವರು ಎನ್ನಿಸಿತು.

               ವಿಷ್ಣುವರ್ಧನ್ ನಿಧನದ ನಂತರ ನಡೆದ ಗಲಭೆಗಳನ್ನೆಲ್ಲಾ ನೆನೆಸಿಕೊಂಡರೆ ನಿಜವಾಗಲೂ ಬೇಸರವಾಗುತ್ತದೆ. ಯಾಕೆ ಬೇಕು ಈ ಜನಕ್ಕೆ ಈ ಪರಿಯ ಹುಚ್ಚು? ಒಬ್ಬ ಮನುಷ್ಯನ ಪ್ರಾಣ ಹೋದದ್ದಕ್ಕೆಲ್ಲಾ ಈ ಪಾಟಿ ಪ್ರತಿಕ್ರಿಯೆಯಾ? "ವಿಷ್ಣುವರ್ಧನ್ನೂ ಒಬ್ಬ ಮನುಷ್ಯ ತಾನೇ? ಅವನು ಸತ್ತದ್ದಕ್ಕೆ ಇವರೆಲ್ಲಾ ಯಾಕೆ ಬಾಯಿ ಬಡ್ಕೋ ಬೇಕು?" ಅಂದ್ರು ಗೆಳೆಯರೊಬ್ಬರು. ಹೌದು ಅನ್ನಿಸಿತ್ತು, ಆ ಸಮಯಕ್ಕೆ. ಆದರೂ, ಒಬ್ಬರ ಮೇಲೆ ಈ ಪಾಟಿ ಭಕ್ತಿ, ಪ್ರೀತಿಗಳನ್ನು ಇಟ್ಟುಕೊಳ್ಳಲು ಸಾಧ್ಯವೇ? ಆ ವ್ಯಕ್ತಿ ಜನರ ಮನಸ್ಸಿನಲ್ಲಿ ಏಳಿಸಿ ಹೋಗಿರುವ ಕಂಪನ ಯಾವ ರೀತಿಯದ್ದು ಅನ್ನಿಸಿತು. ೨೦೦೬ ರಲ್ಲಿ ವರನಟ ರಾಜ್ ಕುಮಾರ್ ನಿಧನದ ಸಮಯದಲ್ಲಿ ಆದ ಗಲಭೆ, ಗೋಲಿಬಾರ್ ವಿಷಯಗಳೆಲ್ಲಾ ಇನ್ನೂ ಹಸಿಯಾಗಿವೆ. ಸ್ವಲ್ಪ ಹೆಚ್ಚಿಗೆ ದೊಂಬಿಯಾದರೂ ಏಟು ಬೀಳುತ್ತದೆ ಅನ್ನುವುದು ಗೊತ್ತಿದೆ. ಆದರೂ ಈ ಜನ ಬೀದಿಗಿಳಿದು ತಮ್ಮ ಹತಾಶೆ, ಆಕ್ರೋಶಗಳನ್ನು ತೀರಿಸಿಕೊಳ್ಳುತ್ತಾರೆ. ಇನ್ನು, ಯಾರೋ ದುಡ್ಡು ಕೊಟ್ಟು ಇದನ್ನೆಲ್ಲಾ ಮಾಡಿಸುತ್ತಾರೆ ಎನ್ನುವುದು ಅರ್ಧ ಸತ್ಯ ಎನ್ನಿಸುತ್ತದೆ. ಈ ಗಲಾಟೆ, ದೊಂಬಿಗಳನ್ನೆಲ್ಲಾ ಬದಿಗಿಟ್ಟು ಒಮ್ಮೆ ನೋಡಿದರೆ, ನಿಧನರಾದ ಇಂತಹವರ ಜೀವನವೇ ಧನ್ಯ ಎನ್ನಿಸುತ್ತದೆ. ’ಒಬ್ಬ ಮನುಷ್ಯ ಎಷ್ಟು ದೊಡ್ಡವನು ಎಂದು ಅವನು ಸತ್ತ ನಂತರ ಅವನಿಗಾಗಿ ಎಷ್ಟು ಜನ ಕಂಬನಿ ಮಿಡಿಯುತ್ತಾರೆ ಎನ್ನುವುದರಿಂದ ತಿಳಿಯುತ್ತದೆ’ ಎಂದು ಎಲ್ಲೋ ಕೇಳಿದ ನೆನಪು.

               ಆಂಧ್ರ ಮುಖ್ಯಮಂತ್ರಿ ವೈ.ಎಸ್.ರಾಜಶೇಖರರೆಡ್ಡಿ ತೀರಿಕೊಂಡಾಗಲಂತೂ ೬೦-೭೦ ಜನ ಆತ್ಮಹತ್ಯೆ ಮಾಡಿಕೊಂಡರು ಎಂಬ ಸುದ್ದಿ ಕೇಳಿದವರಿಗೆ ರಾಜಶೇಖರರೆಡ್ಡಿ ತೀರಿಕೊಂಡದ್ದಕ್ಕಿಂತಲೂ ದೊಡ್ಡ ಆಘಾತವಾಗಿರುತ್ತದೆ. ಇನ್ನೂ ರಾಜಕೀಯದಿಂದ ನಿವೃತ್ತಿ ತೆಗೆದುಕೊಳ್ಳುತ್ತಿಲ್ಲ, ಇವನು ಅದ್ಯಾವಾಗ ಸಾಯ್ತಾನೋ ಅಂದೇ ಈ ದೇಶ ಉದ್ಧಾರ ಆಗುತ್ತೆ ಅಂತ ಜನರ ಬಾಯಿಯಿಂದ ಬೈಯ್ಯಿಸಿಕೊಳ್ಳುತ್ತಿರುವ ಅದೆಷ್ಟೋ ರಾಜಕಾರಣಿಗಳಿಗೆ ರಾಜಶೇಖರರೆಡ್ಡಿ ಒಂದು ಆದರ್ಶವಾಗಬೇಕು. (ಇದರರ್ಥ ಬೇಗ ಸಯಬೇಕು ಅಂತಲ್ಲ, ಬದುಕಿರೋವರೆಗೆ ಒಂದಷ್ಟು ಒಳ್ಳೇ ಕೆಲಸ ಮಾಡ್ಬೇಕು ಅಂತ).

               ದಿಟ್ಟ ನಿಲುವು ಎಂದು ಹೇಳಿಕೊಳ್ಳುವ ಅನೇಕ ಪತ್ರಿಕೆಗಳು, ಟಿ.ವಿ ವಾಹಿನಿಗಳು ಅನೇಕ ಪ್ರಮುಖ ವ್ಯಕ್ತಿಗಳ ಮೇಲೆ ಸುಳ್ಳು-ಸುಳ್ಳು ಬರೆಯುತ್ತಿರುತ್ತವೆ. ಆದರೆ ಅದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದ ಜನ, ವೈ.ಎಸ್.ಆರ್ ಸಾವಿನ ಹಿಂದೆ ಅಂಬಾನಿ ಸೋದರರ ಸಂಚಿದೆ ಎಂಬ ಸಣ್ಣ ಸುದ್ದಿ ನೋಡಿದ ತಕ್ಷಣ ಹಿಂದೆ-ಮುಂದೆ ಯೋಚಿಸದೇ, "ರಿಲಯನ್ಸ್" ಎಂದು ಬರೆದಿದ್ದ ಯಾವ ಅಂಗಡಿ, ವ್ಯಾಪಾರವನ್ನೂ ಬಿಡದೇ ಚಚ್ಚಿ ಹಾಕುತ್ತಾರೆ ಅಂದರೆ ರಾಜಶೇಖರರೆಡ್ಡಿ ಇವರಲ್ಲಿ ತುಂಬಿಹೋಗಿರುವ ಭಾವನೆ ಎಂತಹದ್ದು? ನಿಜಕ್ಕೂ ವೈ.ಎಸ್.ಆರ್ ಗೊಂದು ಹ್ಯಾಟ್ಸಾಫ್.

               ಆಗಲೇ ಹೇಳಿದಂತೆ (ನಾನಲ್ಲ, ಕೃಷ್ಣ ಹೇಳಿದಂತೆ) ಹುಟ್ಟಿದ ಮೇಲೆ ಎಂದಾದರೂ ಸಾಯಲೇ ಬೇಕು. ಹಾಗೆಯೇ ಇಂದು ತಮಿಳು ತೆಲುಗು, ಹಿಂದಿ ಚಿತ್ರರಂಗದ ದೇವತೆಗಳೂ ಸಹಾ.....! ಹಾಗಾದಾಗ ಈ ಜನರ ಪಾಡೇನು? ಏಕೆಂದರೆ ಒಬ್ಬ ರಾಜ್ ಕುಮಾರ್ ಮೇಲೆ ಜನರು ಇಟ್ಟಿರುವಷ್ಟೇ ಪ್ರೀತಿಯನ್ನು ರಜನೀಕಾಂತ್ ಮೇಲೆ ಇಟ್ಟಿರುವವರ ಗತಿಯೇನು ಎಂದು ಊಹಿಸಿಕೊಂಡರೇ ಭಯವಾಗುತ್ತದೆ. ಒಬ್ಬ ಕರುಣಾನಿಧಿ, ಒಬ್ಬ ಜಯಲಲಿತಾ, ಒಬ್ಬ ಚಿರಂಜೀವಿ, ಒಬ್ಬ ಅಮಿತಾಭ್, ಒಬ್ಬ ಶಾರೂಖ್....... ರನ್ನೂ ಸಹಾ ಜನ ಅಷ್ಟೇ ಆರ‍ಾಧಿಸುತ್ತಾರೆ. ಅಂತಹ ಸಮಯದಲ್ಲಿ ಆಗುವ ಕೋಲಾಹಲಗಳನ್ನು ತಡೆಯಲು ಯಾರು ಏನು ತಾನೇ ಮಾಡಲು ಸಾಧ್ಯ? ಸರ್ಕಾರದಿಂದ ಪ್ರತಿಯೊಬ್ಬನಿಗೂ ಪೋಲೀಸ್ ಕಾವಲು ಹಾಕಲಂತೂ ಆಗುವುದಿಲ್ಲ. ಇನ್ನೇನು ಮಾಡಬಹುದು?

               ನಮ್ಮವರು ತೀರಿಕೊಂಡಾಗ, ಮನಸ್ಸಿಗೆ ಆಘಾತವಾದಾಗ, ಪ್ರಪಂಚವೇ ತಲೆಕೆಳಕಾದಂತೆ ಅನ್ನಿಸಿದಾಗ, ಜೀವನವೇ ಬೇಡವೆನಿಸಿದಾಗ ನಮ್ಮ ಜನಕ್ಕೆ ಅದನ್ನೆಲ್ಲಾ ತಡೆದುಕೊಳ್ಳುವ ಶಕ್ತಿ-ಸಾಮರ್ಥ್ಯಗಳನ್ನು ಕೊಡು ಎಂದು ಆ ದೇವರಲ್ಲಿ ಪ್ರಾರ್ಥಿಸಬಹುದು ಅಥವಾ ನಮ್ಮ ನೆಚ್ಚಿನ ಸಿನಿಮಾ ತಾರೆಯರು, ರಾಜಕಾರಣಿಗಳು, ಗುರುಗಳನ್ನೆಲ್ಲರನ್ನೂ ಹನುಮಂತನಂತೆ ಚಿರಂಜೀವಿಗಳನ್ನಾಗಿಸು ಎಂದು ಬೇಡಬಹುದಷ್ಟೇ.

               ಹುಲು ಮಾನವರು ನಾವು. ಆ ದೈತ್ಯ ಪ್ರೀತಿಯ ಮುಂದೆ ಇನ್ನೇನು ಮಾಡಲು ಸಾಧ್ಯ?

ಶುಕ್ರವಾರ, ಫೆಬ್ರವರಿ 26, 2010

ನಿರೀಕ್ಷೆಯಿರುವುದು ನ್ಯಾಯದ್ದಲ್ಲ, ನಿರೀಕ್ಷಣಾ ಜಾಮೀನುಗಳದ್ದು


          'ಒಂದು ದೊಡ್ಡ ಮರ ಬಿದ್ದಾಗ ಭೂಮಿ ಅಲುಗಾಡುವುದು ಸಹಜ' ಎಂದಿದ್ದರು ನಮ್ಮ ಅಂದಿನ A Prime Minister with vision ,ರಾಜೀವ ಗಾಂಧಿಯವರು. ಅವರ ಈ ಹುಂಕಾರ ಬಂದದ್ದು 1984ರಲ್ಲಿ ಇಂದಿರಾ ಗಾಂಧಿಯವರ ಹತ್ಯೆಯ ಸೇಡಿಗಾಗಿ ಕಾಂಗ್ರೆಸ್ ಕಾರ್ಯಕರ್ತರು, ದೆಹಲಿಯ ಬೀದಿ-ಬೀದಿಗಳಲ್ಲಿ ಸಿಖ್ಖರನ್ನು ಹುಡುಕಿ-ಹುಡುಕಿ ಕೊಲ್ಲುತ್ತಿದ್ದ ಬಗ್ಗೆ ಪ್ರತಿಕ್ರಿಯೆಯಾಗಿ. ಇಂದಿರಾ ಗಾಂಧಿಯವರನ್ನು ಕೊಂದದ್ದು ಒಬ್ಬ ಸಿಖ್ಖ್ ಎಂಬ ಒಂದೇ ಕಾರಣಕ್ಕಾಗಿ 3000 ಸಿಖ್ಖರನ್ನು ಬಲಿತೆಗೆದುಕೊಂಡ ಈ ನರಮೇಧವನ್ನು ಕಾರ್ಯರೂಪಕ್ಕೆ ತಂದದ್ದು ಅಂದಿನ ದೆಹಲಿಯ ಲೋಕಸಭಾ ಸದಸ್ಯರುಗಳಾಗಿದ್ದ ಜಗದೀಶ್ ಟೈಟ್ಲರ್, ಸಜ್ಜನ್ ಕುಮಾರ್, ಹಾಗೂ ಇತರರು ಎಂಬ ಗುಮಾನಿ 27 ವರ್ಷಗಳ ನಂತರವೂ ಹಾಗೆಯೇ ಇದೆ, ಮೊಕದ್ದಮೆ ನಡೆಯುತ್ತಿದೆ, ನಡೆಯುತ್ತಲೇ ಇದೆ, ........ಲೇ ಇರುತ್ತದೆ ಎನ್ನುವ ನಂಬಿಕೆಯೂ ಅಷ್ಟೇ ಬಲವಾಗುತ್ತಾ ಇದೆ. ಮೊನ್ನೆ 26ನೇ ತಾರೀಖು ಈ ಮೊಕದ್ದಮೆಯಲ್ಲಿ ಸಜ್ಜನ್ ಕುಮಾರ್ ಗೆ ನೀರೀಕ್ಷಣಾ ಜಾಮೀನು ಸಿಕ್ಕಿದೆ. ಅದ್ಯಾರು Anticipatory bail ಎಂಬ ಇಂಗ್ಲೀಷ್ ಪದಕ್ಕೆ ನೀರೀಕ್ಷಣಾ ಜಾಮೀನು ಎಂದು ಹೇಳಿದರೋ, ಇಂತಹ ಪ್ರಕರಣಗಳಲ್ಲಿ 'ನೀರೀಕ್ಷಣೆ'ಯಲ್ಲೇ ನ್ಯಾಯದ ಸಾವೂ ಆಗಿಹೋಗುತ್ತದೆ.
ಚಿದಂಬರಂ ಮೇಲೆ ಶೂ ಎಸೆಯುತ್ತಿರುವ ಪತ್ರಕರ್ತ
          ಕಳೆದ ವರ್ಷ ಟೈಟ್ಲರ್ ಹಾಗೂ ಸಜ್ಜನ್ ಕುಮಾರ್ ಗೆ ಲೋಕಸಭಾ ಟಿಕೆಟ್ ನೀಡದಂತೆ, ಕುಪಿತ ಸಿಖ್ಖ್ ಪತ್ರಕರ್ತನೊಬ್ಬ ಚಿದಂಬರಂ ಮೇಲೆ ಶೂ ಎಸೆದು, ಚುನಾವಣೆಯಲ್ಲಿ ಸ್ಪರ್ಧಿಸದಂತೆ ತಡೆದದ್ದಾಯಿತು. ಆದರೆ ಆಗಬೇಕಾದ ಶಿಕ್ಷೆಯ ಸುಳಿವೇ ಇಲ್ಲ. ಅಲ್ಪ ಸಂಖ್ಯಾತರಿಗೆ ದೇಶದ ಸಂಪನ್ಮೂಲಗಳನ್ನು ಬಳಸುವ ಮೊದಲ ಅಧಿಕಾರ ಇದೆ ಎಂದು ಹೇಳುವ 'ಅಲ್ಪ'ರದೂ ಈ ಬಗ್ಗೆ ಜಾಣ ಮೌನ. ತಮ್ಮದೇ ಸಮುದಾಯದವರಾಗಿದ್ದರೂ ಸಹ ಇಂತಹ ಕೊಲೆಗಡುಕರನ್ನು ರಕ್ಷಿಸುವ ಕಾರ್ಯ ಒಂದೆಡೆ ಆಗುತ್ತಿದ್ದರೆ, ಗುರುಗೋವಿಂದ ಸಿಂಹ, ಬಂದಾ ಬಹದ್ದೂರರ ನೈಜ ಸಂತಾನಗಳೂ ಇಂದು ಇವೆ. ಪಾಕಿಸ್ತಾನದಲ್ಲಿ ಇರುವ ಅಲ್ಪಸಂಖ್ಯಾತ ಸಿಖ್ಖ್ ಯುವಕರನ್ನು ಅಪಹರಣ ಮಾಡಿ, ನಿನ್ನ ಜುಟ್ಟನ್ನು ಕತ್ತರಿಸು, ಇಸ್ಲಾಂ ಸ್ವೀಕರಿಸು ಎಂದೆಲ್ಲಾ ಎಷ್ಟೇ ಹಿಂಸಿಸಿದರೂ ಸಹ ಒಪ್ಪಿಕೊಳ್ಳದೇ ಪ್ರಾಣವನ್ನು ಬಲಿಕೊಟ್ಟೂ ಸಹ ತಮ್ಮ Identity ಯನ್ನು ಉಳಿಸಿಕೊಂಡ ಜಸ್ಪಾಲ್ ಸಿಂಗ್, ಮಹಾಲ್ ಸಿಂಗ್ ಇಂದಿನ ಯುವಕರಿಗೆ ನಿಜವಾದ ಮಾದರಿಗಳು. ಕೃತ್ಯವನ್ನು ಖಂಡಿಸಿ ಜಮ್ಮುವಿನ ಪೂಂಛ್ ನಿಂದ ಹಿಡಿದು ಅಮೇರಿಕಾದಲ್ಲಿರುವ ಸಿಖ್ಖರವರೆಗೂ ಎಲ್ಲರೂ ಕ್ರೋಧಗೊಂಡಿದ್ದರೂ ಸಹಿತ, ಈ ಬಗ್ಗೆ ನಮ್ಮ ಸರ್ಕಾರದ ಪ್ರತಿಕ್ರಿಯೆ ಏನು? Pakistan must ensure safety of Minorities ಎಂಬ ವಿದೇಶಾಂಗ ಸಚಿವ ಕೃಷ್ಣಾ ಅವರ ಸೀದಾ ಅನಿಸಿಕೆ, Hope Pakistan will take proper action ಎನ್ನುವ ರಕ್ಷಣಾ ಸಚಿವ ಆಂಟನಿ ಅವರ ಸಾದಾ ಹೇಳಿಕೆ. ಇದನ್ನೆಲ್ಲಾ ಪ್ರತಿಕಿಯೆ ಇನ್ನಲೂ ಆಗುವುದಿಲ್ಲ. ಇದು ಪುಕ್ಕಲುತನದ ಪರಮಾವಧಿ ಅಷ್ಟೆ. ಇಂತಹ ಭಾಷೆ ಪಾಕಿಸ್ತಾನಕ್ಕೆ ಅರ್ಥ ಅಗೋದಿಲ್ಲ ಎಂದು ಈ  'ಹಿರಿಯ’ರಿಗೆ ಗೊತ್ತಿಲ್ಲವೇ? 

ಸಜ್ಜನ್‌ ಕುಮಾರ್ ಮತ್ತು ಜಗದೀಶ್  ಟೈಟ್ಲರ್
          ಕರ್ನಾಟಕದಲ್ಲಿ ಚರ್ಚ್ ಮೇಲೆ ಧಾಳಿಯಾದರೆ ಅದು ಜಾರ್ಜ್ ಬುಷ್ ವರೆಗೆ ತಲುಪುತ್ತದೆ. ಕಸಬ್ಗೆ ತೊಂದರೆ ಆದರೆ ಪಾಕಿಸ್ತಾನಕ್ಕೆ ಕೇಳಿಸುತ್ತದೆ. ಆದರೆ ಸಿಖ್ಖರು ಎಲ್ಲಿ ಹೋಗಬೇಕು? 2002ರಲ್ಲಿ ನಡೆದ ಗೋಧ್ರಾ ನಂತರದ ಘಟನೆಗಳನ್ನು ಮಾತ್ರ ಎಳೆ ಏಳೆಯಾಗಿ ಬಿಡಿಸಲು ಹೋಗುವ ನಮ್ಮ ಜನ್ಮ’ದತ್ತ’ ಪತ್ರಕಾರರಿಗೆ, ಕಾಶ್ಮೀರಕ್ಕೆ ’ಸ್ವಾತಂತ್ರ್ಯ’ಕೊಡಬೇಕೆನ್ನುವ ’ರಾಯ’ರಿಗೆ, ಮಾನವ ಹಕ್ಕು ಹೋರಾಟಗಾರರಿಗೆ ಇದೆಲ್ಲಾ ಒಂದು ಸಾಮಾನ್ಯ ವರದಿಯಾಗಿದೆ, ಸಿಖ್ಖರ ಹತ್ಯೆ ಬಗ್ಗೆ ಮಾತನಾಡುವುದು ಒಂದು ಕೋಮುವಾದಿ ಅಜೆಂಡಾ ಆಗಿಬಿಟ್ಟಿದೆ. 
          ಇಷ್ಟರ ಮಧ್ಯೆಯೂ  ಪಾಕಿಸ್ತಾನದೊಂದಿಗೆ ’ಶಾಂತಿ !’ಮಾತುಕತೆಗೆ ನಮ್ಮ ವಿದೇಶಾಂಗ ಸಚಿವರು ದುಂಬಾಲು ಬಿದ್ದು ಓಡಾಡುತ್ತಿದ್ದಾರೆ. 26/11 ರ ಮುಂಬೈ ಆಕ್ರಮಣಕ್ಕೆ ನ್ಯಾಯ ಸಿಗುವವರೆಗೆ ಪಾಕಿಸ್ತಾನದೊಂದಿಗೆ ಯಾವುದೇ ಮಾತುಕತೆ ನಡೆಯುವುದಿಲ್ಲ ಎಂದುಕೊಂಡಿದ್ದವರಿಗೆ ನಿರಾಶೆ ಆಗಿದೆ. 
          ಆದರೆ, ಇಲ್ಲಿ ನಿಜವಾಗಿ ಕಾಡುವುದು ರಾಜಕೀಯ ಹಾಗೂ ಹಣದ ಆಮಿಷಕ್ಕೊಳಗಾಗಿ ಸಿಂಹಗಳಂತಿದ್ದ ಸಿಖ್ಖ್ ಸಮುದಾಯವೂ ನೀವೀರ್ಯವಾಯಿತೆ? ತಮ್ಮದೇ ಸಮುದಾಯದ ಪ್ರಧಾನಮಂತ್ರಿಯ ಸ್ಥಾನಕ್ಕೆ ಕುತ್ತು ತರಬಾರದೆಂದು ಅದು ಒಟ್ಟಾರೆ ಸರ್ಕಾರದ ಮೇಲೆ ಸುಮ್ಮನೆ ’ಗಾಳಿಯಲ್ಲಿ ಗುಂಡು’ ಹಾರಿಸುತ್ತಿದೆಯೇ? ಎಂಬ ಪ್ರಶ್ನೆ. ಹಾಗಂತ ಇವರೂ ಜಿಹಾದ್ ಮಾಡಬೇಕೆಂದಲ್ಲ. ಎಲ್ಲ ರಾಜಕೀಯವನ್ನೂ ಮರೆತು, ಪಕ್ಷ ರಹಿತವಾಗಿ ಸರ್ಕಾರದ ಮೇಲೆ ಒತ್ತಡ ತಂದರೆ ಪಾಕಿಸ್ತಾನದಲ್ಲಿರುವ, ಸಿಖ್ಖರನ್ನೊಳಗೊಂಡಂತೆ ಎಲ್ಲಾ ಹಿಂದೂಗಳಿಗೂ ರಕ್ಷಣೆ ಸಿಗಬಹುದು.