ನಮ್ಮ ಇಂದಿಗಾಗಿ ತಮ್ಮ ನಾಳೆಗಳನ್ನು ತ್ಯಾಗ ಮಾಡಿದರು ಅವರು

ಅವರಲ್ಲಿದ್ದ ಸ್ಫೂರ್ತಿ, ಚೇತನವನ್ನು ಪಡೆಯೋಣ,
ಬಲಿದಾನವನ್ನು ನೆನೆಯೋಣ.
ನಮ್ಮ ಆಸೆ ಈಡೇರಿಸಿಕೊಳ್ಳಲು ಏನು ತ್ಯಾಗ ಮಾಡಬಹುದು ನಾವು?
ನಿದ್ದೆ- ಊಟ? ಮನೆ-ಮಠ? ಅಷ್ಟೇ ತಾನೇ ?
ತ್ಯಾಗಿಗಳಲ್ಲ ಅವರು, ಪರಮ ಸ್ವಾರ್ಥಿಗಳು
ತ್ಯಜಿಸಿದರು ದೇಹವನ್ನೇ ತಮ್ಮ ಆಸೆ, ಆಕಾಂಕ್ಷೆ, ಗುರಿಗಾಗಿ.
ಅವರಂತೆ ಕಳೆಯುವುದರಲ್ಲಿ ಪಡೆಯುವುದ ಕಲಿಯೋಣ
ಬಲಿದಾನವನ್ನು ನೆನೆಯೋಣ.
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ