ಲೇಬಲ್ಗಳು
ವಿಜಯವಾಣಿ
(55)
ಪತ್ರಿಕೋದ್ಯಮ
(48)
Karnataka
(34)
ಕರ್ನಾಟಕ
(26)
Politics
(24)
ಕನ್ನಡ ಮತ್ತು ಸಂಸ್ಕೃತಿ
(23)
National
(22)
ಸಂದರ್ಶನ
(17)
ವಿವಾದ
(11)
ಜೀವನ
(10)
Commerce
(8)
Justice
(7)
ಆರೆಸ್ಸೆಸ್
(7)
Congress
(6)
ಭಗವದ್ಗೀತೆ
(6)
ಭ್ರಷ್ಟಾಚಾರ
(6)
Book
(5)
External Affairs
(5)
Vijay Karnataka
(5)
ರಾಜಕೀಯ
(5)
Army
(4)
Budget
(4)
Religion
(4)
ಟೌನ್ ಹಾಲ್
(4)
ಶಿಕ್ಷಣ
(4)
Kashmir
(3)
SL Bhyrappa
(3)
Vijayavani
(3)
ಸಾಹಿತ್ಯ
(3)
Freedom
(2)
Modi
(2)
Yedyurappa
(2)
ಇಸ್ರೊ
(2)
ಉದ್ಯೋಗ
(2)
ಪರಿಸರ ಮಾಲಿನ್ಯ
(2)
ಬಾಹ್ಯಾಕಾಶ
(2)
ವಂಚನೆ
(2)
ವಿಜ್ಞಾನ
(2)
Arundhati Roy
(1)
Bhagat singh
(1)
Bharat
(1)
Fashion
(1)
Internet
(1)
Interview
(1)
Mohan Bhagwat
(1)
Muslim
(1)
Opinion
(1)
Poem
(1)
RSS
(1)
Real Estate
(1)
Sikh
(1)
Sports
(1)
ಕನ್ನಡ ಪ್ರಭ
(1)
ಚೀನಾ
(1)
ಹೊಸ ದಿಗಂತ
(1)
ಭಾನುವಾರ, ಏಪ್ರಿಲ್ 10, 2011
ಶನಿವಾರ, ಏಪ್ರಿಲ್ 09, 2011
ಊರಿಗೂರೇ ಹೊರಗಿದ್ದರೂ ಗೂಡು ಬಿಡದ ಯುವ ಹಕ್ಕಿಗಳು
ಭ್ರಷ್ಟಾಚಾರದ ವಿರುದ್ಧದ ಹೋರಾಟದಲ್ಲಿ ಬಹುದೊಡ್ಡ ತಿರುವು ಅಣ್ಣಾ ಹಜಾರೆಯವರ ಹೋರಾಟದಿಂದ ದೊರಕಿದೆ. ಸ್ವತಂತ್ರ ಭಾರತದ ಇತಿಹಾಸದಲ್ಲಿ ಜೆ.ಪಿ ಆಂದೋಲನ ಹಾಗೂ ಭಾರತ ಕ್ರಿಕೆಟ್ ಗೆದ್ದಾಗ ಬಿಟ್ಟರೆ ಇಷ್ಟು ಮಟ್ಟದಲ್ಲಿ ಯುವಕರು ಬೀದಿಗಿಳಿದದ್ದು ಇದೇ ಮೊದಲು. ಆದರೆ, ಇಂತಹ ಬಹುದೊಡ್ಡ ಹೋರಾಟದ ಸಮಯದಲ್ಲಿ ರಾಜಕೀಯ ಪಕ್ಷಗಳಲ್ಲಿರುವ ಯುವ ಮುಖಂಡರು ಏನು ಮಾಡುತ್ತಿದ್ದರು?

ಕರ್ನಾಟಕದಲ್ಲಿ ಹಿಂದೆಂದೂ ಕೇಳರಿಯದಷ್ಟು ಮೊದಲನೇ ಬಾರಿ ಚುನಾವಣೆ ಗೆದ್ದವರಿದ್ದಾರೆ, ಅವರಲ್ಲಿ ಬಹುತೇಕರು ಯುವಕರು, ವಿದ್ಯಾವಂತರು, ವಿದೇಶದಿಂದ ಮರಳಿದವರು.... ಹೀಗೇ ಯುವ ರಾಜಕಾರಣಿಗಳ ದಂಡೇ ಇದೆ. ಕೃಷ್ಣ ಭೈರೇಗೌಡ, ಸಿ.ಟಿ. ರವಿ, ಸುನಿಲ್ ಕುಮಾರ್, ಜನಾರ್ಧನ ಸ್ವಾಮಿ.....ಯಂತಹ ಹಲವರು ಇಲ್ಲಿದ್ದಾರೆ. ಒಂದು ಆಶ್ಚರ್ಯದ ವಿಷಯವೆಂದರೆ, ಅಣ್ಣಾ ಹಜಾರೆಯವರ 98ಗಂಟೆಗಳ ಉಪವಾಸದ ಸಮಯದಲ್ಲಿ ಇವರಾರೂ ತಮ್ಮ ಗೂಡು ಬಿಟ್ಟು ಹೊರಗೆ ಬರಲೇ ಇಲ್ಲ. ಕಾರಣ ಸ್ಪಷ್ಟ. ತಾವು ಪ್ರತಿನಿಧಿಸುತ್ತಿರುವ ಪಕ್ಷದಿಂದ ಈ ಪ್ರತಿಭಟನೆಯಲ್ಲಿ ಭಾಗವಹಿಸಲು ಅಥವಾ ಬೆಂಬಲ ಸೂಚಿಸಲು ಆಜ್ಞೆ ಬಂದಿಲ್ಲ. ಪಕ್ಷದ ಸೂಚನೆಯಿಲ್ಲದೇ ಬಾಗವಹಿಸಿದರೆ ಮುಂದಿನ ಚುನಾವಣೆಯಲ್ಲಿ ಟಿಕೆಟ್ ಸಿಗುವುದಿಲ್ಲ, "ತಮ್ಮ ಬವಿಷ್ಯ" ಮಂಕಾಗುತ್ತದೆ ಎಂದು.
ಮುಂದೆ ನಮ್ಮನ್ನು ಆಳಲಿರುವ ಇವರು ಇದಾಗಲೇ ಅಧಿಕಾರದ, ಖುರ್ಚಿಯ ಆಸೆಗೆ ಬಿದ್ದಿದ್ದಾರೆ. ಪಕ್ಷ, ಸಿದ್ದಾಂತಗಳ ಸುಳಿಯಲ್ಲಿ ಸಿಲುಕಿ ಒದ್ದಾಡುತ್ತಿದ್ದಾರೆ. ಮೊದಲು ಇಂತಹ ಯವ ರಾಜಕಾರಣಿಗಳು ತಮ್ಮ ಆವರಣ ಮೀರಿ ರಾಜಕೀಯ ಮಾಡುವುದನ್ನು ಕಲಿಯಬೇಕು. ಪಕ್ಷದ ಸಿದ್ದಾಂತ ಏನೇ ಇರಲಿ, ವಿಷಯಾಧಾರಿತವಾಗಿ ರಾಜಕೀಯ ವಿರೋಧಿಗಳಿಗೂ ಬೆಂಬಲ ಸೂಚಿಸುವಷ್ಟು ದೊಡ್ಡ ಮನಸ್ಸಿನವರಾಗಬೇಕು. ಹೆಚ್ಚು ಲೆಕ್ಕಾಚಾರ ಹಾಕುವುದನ್ನು ಬಿಟ್ಟು ಬೀದಿಗಿಳಿಯಬೇಕು, ವಯಸ್ಸಿನಲ್ಲಿ ಮಾತ್ರ ಅಲ್ಲ, ಮನಸ್ಸಿನಲ್ಲೂ ಯುವಕರಾಗಬೇಕು.
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)