ಬುಧವಾರ, ಡಿಸೆಂಬರ್ 22, 2010

Why blame Arundhati for supporting Kashmiri people? - U R Ananthamurthy


     ಉಡುಪಿ, ಡಿ. 22 : "ಕಾಶ್ಮೀರ ಯಾವತ್ತೂ ಭಾರತದ ಅಂಗವಾಗಿರಲೇ ಇಲ್ಲ" ಎಂದು ಹೇಳಿಕೆ ನೀಡಿ ಇಡೀ ದೇಶದ ವೈರುಧ್ಯ ಕಟ್ಟಿಕೊಂಡಿರುವ ಲೇಖಕಿ ಅರುಂಧತಿ ರಾಯ್ ಅವರಿಗೆ ಕರ್ನಾಟಕದ ಜ್ಞಾನಪೀಠ ಪ್ರಶಸ್ತಿ ವಿಜೇತ ಲೇಖಕ ಡಾ.ಯು.ಆರ್. ಅನಂತಮೂರ್ತಿ ಅವರಿಂದ ಬೆಂಬಲ ದೊರೆತಿದೆ.
     79 ವಸಂತಗಳನ್ನು ಪೂರೈಸಿ 80ನೇ ವರ್ಷಕ್ಕೆ ಕಾಲಿಟ್ಟಿರುವ ಅನಂತಮೂರ್ತಿ ಅವರನ್ನು ಸನ್ಮಾನಿಸಿ, 'ಅನಂತಮೂರ್ತಿ ಮಾತುಕತೆ : ಹತ್ತು ಸಮಸ್ತರ ಜೊತೆ' ಕೃತಿಯನ್ನು ಮಂಗಳವಾರ ಬಿಡುಗಡೆ ಮಾಡಿದ ಸಂದರ್ಭದಲ್ಲಿ ಅವರು ಅರುಂಧತಿ ರಾಯ್ ಗೆ ಬೆಂಬಲ ಸೂಚಿಸಿ ಮಾತನಾಡಿದ್ದಾರೆ.
     ಅರುಂಧತಿ ಅವರು ಮಾನವೀಯತೆಯ ಆಧಾರದ ಮೇಲೆ ಕಾಶ್ಮೀರದ ಜನರ ಹಕ್ಕಿನ ಕುರಿತು ಮಾತನಾಡಿದರೆ ಅವರನ್ನು ಭಾರತ ವಿರೋಧಿ ಎಂದು ಪಟ್ಟಕಟ್ಟುವುದು ಎಷ್ಟು ಸಮಂಜಸ ಎಂದು ಅನಂತಮೂರ್ತಿ ವಿಷಾದ ವ್ಯಕ್ತಪಡಿಸಿದರು. ಕಾಶ್ಮೀರಿ ಜನರಿಗಾಗಿ ದನಿ ಎತ್ತಿದ್ದಕ್ಕಾಗಿ ಅವರನ್ನು ದೇಶದ್ರೋಹಿ ಎಂದು ಕರೆಯುವುದು ನಾನು ಒಪ್ಪಲಾರೆ ಎಂದು ಅವರು ನುಡಿದರು.
    ಅರುಂಧತಿ ಅವರ ವಿಷಯದಲ್ಲಿ ಎತ್ತಲಾಗಿರುವ ರಾಷ್ಟ್ರೀಯತೆಯ ಕಲ್ಪನೆ ನಿಜಕ್ಕೂ ಅಪಾಯಕಾರಿ. ಮೂಲಭೂತವಾದಿಗಳ ರಾಷ್ಟ್ರೀಯತೆಗೂ ದೇಶಪ್ರೇಮಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ನಮಗೆ ಈ ಸಂದರ್ಭದಲ್ಲಿ ಬೇಕಿರುವುದು ರಾಷ್ಟ್ರೀಯತೆಗಿಂತ ಹೆಚ್ಚಾಗಿ ಗಾಂಧೀಜಿ ಮತ್ತು ಟಾಗೋರ್ ಪ್ರತಿಪಾದಿಸಿರುವ ನಾಗರಿಕತೆ. ರಾಷ್ಟ್ರೀಯತೆ ಎನ್ನುವುದು ಹಿಂದೂತ್ವದ ಮೇಲೆ ಆಧಾರಿತವಾಗಿದೆ. ನಮಗೆ ಬೇಕಿರುವುದು ನಾಗರಿಕತೆ ಮತ್ತು ಮಾನವೀಯತೆ ಎಂದು ಅವರು ವಿಶ್ಲೇಷಿಸಿದರು.


          Udupi, Dec 21:Renowned writer and Jnanpeeth awardee U R Ananthamurthy today disapproved the outbursts against writer Arundhati Roy and levelling charges of sedition when she was only raising a voice for Kashmiri people.
Speaking at a Kannada book release Ananthamurthy Mathukathe and Parampare, he asked how could people brand the writer as anti-Indian, when she has upheld Kashmiri people's rights purely on humanitarian grounds.
He said "the concept of nationalism, after what one saw in the Ms Roy episode, was dangerous as it is imbibed with fanatic fundamentalist ideologies and totally differs from patriotism." Prof. Ananthamurthy said “I love religious India and not communal India" adding that the spirit of nationalism gave birth to two world wars and made humans blind.
 

 
  



The Original News and Photos were published in ThatsKannada and Manglorean



ಸೋಮವಾರ, ಡಿಸೆಂಬರ್ 20, 2010

Bill Gates - What I'm Thinking - Real-World Solutions from World's Youth - The Gates Notes


      ಪ್ರಪಂಚದ ದೊಡ್ಡ ಸಮಸ್ಯೆಗಳಿಗೆ ಪರಿಹಾರ ಹುಡುಕುತ್ತಿರುವ ಸಾಮಾಜಿಕ ಸಂಘಟನೆಗಳಿಗೆ ಬುದ್ದಿವಂತ, ಸಮಾಜ ಸುಧಾರಣೆಯ ತುಡಿತವಿರುವ, ಉತ್ಸಾಹಿ ಯುವಕರಿಂದಲೇ ದಾರಿ ತೋರಿಸುವ ಇಮ್ಯಾಜಿನ್ ಕಪ್ 2011ರಲ್ಲಿ ಭಾಗವಹಿಸಲು ವಿದ್ಯಾರ್ಥಿಗಳಿಗೆ ಇದೊಂದು ಮುಕ್ತ ಆಹ್ವಾನ. 

     ಪ್ರಪಂಚದ ಬೇರೆ ಬೇರೆ ಕಡೆ ಹೋದಂತೆಲ್ಲಾ ನನಗೆ ಅಲ್ಲಿನ ಉತ್ಸಾಹಿ ಯುವಕರನ್ನು ಭೇಟಿಯಾಗುವ ಅವಕಾಶ ಸಿಗುತ್ತದೆ. ಪ್ರಪಂಚದ ಅತಿ ದೊಡ್ಡ ಸಮಸ್ಯೆಗಳನ್ನು ಬಗೆಹರಿಸಬೇಕೆಂದು ಅವರಲ್ಲಿರುವ ತುಡಿತದಿಂದ ನನಗೆ ಸಂತೋಷವಾಗಿದೆ. ಈ ನಿಟ್ಟಿನಲ್ಲಿ ಅವರನ್ನು ಪ್ರೌತ್ಸಾಹಿಸಲು ಹಾಗೂ ಪರಿಹಾರ ಕಂಡುಹಿಡಿಯುವ ಕೆಲಸದಲ್ಲಿ ಇನ್ನೂ ಹೆಚ್ಚು ತೊಡಗಿಸಿಕೊಳ್ಳುವಂತೆ ಮಾಡಲು, ಮೈಕ್ರೋಸಾಫ್ಟ್  ಸಂಸ್ಥೆಯು ಇದೀಗ ತನ್ನ 9ನೇ ವರ್ಷದಲ್ಲಿರುವ ಇಮ್ಯಾಜಿನ್ ಕಪ್ ಪ್ರಾರಂಭಿಸಿತು. ಕಳೆದ ವರ್ಷಗಳ ಸ್ಪರ್ಧೆಗಳಲ್ಲಿ ಸಾವಿರಾರು ವಿದ್ಯಾರ್ಥಿಗಳು ಪರಿಸರ, ಶಿಕ್ಷಣ, ವಿಕೋಪ ಪರಿಹಾರ ಮಾರ್ಗಗಳು ಹಾಗೂ ಆರೋಗ್ಯದ ಕುರಿತಾದ ದೊಡ್ಡ ಸಮಸ್ಯೆಗಳಿಗೆ ವಿನೂತನ ಪರಿಹಾರ ಮಾರ್ಗಗಳೊಂದಿಗೆ ಸಾವಿರಾರು ಸಂಖ್ಯೆಯಲ್ಲಿ ಭಾಗವಹಿಸಿದ್ದಾರೆ.

English Article Link.
     ಆದರೆ ಈ ವರ್ಷದ ಸ್ಪರ್ಧೆಯ ಸ್ವರೂಪ ಸ್ವಲ್ಪ ಬದಲಾಗಿದೆ. ವಿಶ್ವದ ಸಮಸ್ಯೆಗಳನ್ನು ಪರಿಹರಿಸಲು ದಾರಿ ಹುಡುಕುತ್ತಿರುವ ವಿವಿಧ ಸಂಘ ಸಂಸ್ಥೆಗಳ ಪ್ರಾಕ್ಟಿಕಲ್ ಸಮಸ್ಯೆಗಳಿಗೆ ವಿದ್ಯಾರ್ಥಿಗಳು ಪರಿಹಾರ ಸೂಚಿಸಬೇಕಾಗಿದೆ. ಈ ಬಾರಿಯ ಸ್ಪರ್ಧೆಯು, ಯುವಕರ ಹೊಸ ಆಲೋಚನೆಗಳನ್ನು ಮಾರುವ (ಹಣಕ್ಕಲ್ಲ)  ಮಾರುಕಟ್ಟೆಯಂತಾಗಿರುತ್ತದೆ, ಅವು ಸಂಬಂಧಪಟ್ಟ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವ ಸಂಘಟನೆಗಳಿಂದ ಅತಿ ಶೀಘ್ರದಲ್ಲಿ ಕಾರ್ಯರೂಪಕ್ಕಿಳಿಯುತ್ತವೆ.
     ಕೇವಲ ಬಹುಮಾನಕ್ಕಾಗಿ ನಡೆಯುವ ಸ್ಪರ್ಧೆ ಇದಲ್ಲ. ಪ್ರಪಂಚದ ಸಮಸ್ಯೆಗಳಿಗೆ ನಿಜವಾದ ಪರಿಹಾರ ಸೂಚಿಸುತ್ತದೆ. ಉದಾಹರಣೆಗೆ, ಕಳೆದ ವರ್ಷದ ಸ್ಪರ್ಧೆಯಲ್ಲಿ ನ್ಯಾಷನಲ್ ಟೀಮ್ ವಿನ್ನರ್ ಬಹುಮಾನ ಗೆದ್ದ ಝೆಕ್ ಗಣರಾಜ್ಯದ ತಂಡವೊಂದು ನಿರ್ಮಿಸಿದ ತಂತ್ರಜ್ಞಾನ, GINA (Geographical Information Assistant) ಅಮೆರಿಕದಲ್ಲಿ ಉಂಟಾದ ಹೈಟಿ ಭೂಕಂಪದ ನಂತರದ ಪರಿಹಾರ ಕಾರ್ಯಗಳನ್ನು ಸುಗಮವಾಗಿ ನಡೆಸಲು ಉಪಯೋಗವಾಗಿದೆ. ಘಟನೆ ನಡೆದ ಸ್ಥಳದ ಸ್ಪಷ್ಟ ಭೌಗೋಳಿಕ ಚಿತ್ರಣ ನೀಡುವ ಈ ತಂತ್ರಜ್ಞಾನದಿಂದಾಗಿ ಅಲ್ಲಿನ ಪರಿಹಾರ ಕಾರ್ಯಗಳಲ್ಲಿ ತೊಡಗಿದ್ದವರಿಗೆ ಬಹಳ ಅನುಕೂಲವಾಯಿತು. ಹೈಟಿಯಲ್ಲಿ ಈಗ ನಡೆಯುತ್ತಿರುವ ಅಭಿವೃದ್ದಿ ಕಾರ್ಯಗಳನ್ನು ವೀಕ್ಷಿಸಬಲ್ಲ ವೆಬ್ಸೈಟೊಂದನ್ನು GINA ತಂಡ ಇತ್ತೀಚೆಗಷ್ಟೇ ಬಿಡುಗಡೆ ಮಾಡಿದೆ.

     ಈ ರೀತಿಯಾಗಿ, ಸಮಸ್ಯೆಗಳಿಗೆ ನಿಜವಾದ ಪರಿಹಾರಗಳನ್ನು ಒದಗಿಸುವ ಉದ್ದೇಶ ಇಮ್ಯಾಜಿನ್ ಕಪ್ ನದ್ದು. ಇಂತಹ ಪರಿಹಾರ ಮಾರ್ಗಗಳನ್ನು ಪಡೆಯಲು ಸಂಯುಕ್ತ ರಾಷ್ಟ್ತ್ರಗಳ (United Nations) ಹಲವು ಸಂಘ ಸಂಸ್ಥೆಗಳು ಇದೀಗ ಮುಂದೆ ಬಂದಿವೆ. ಅಭಿವೃದ್ದಿ, ಯುವಜನತೆ, ಆಹಾರ ಮತ್ತು ಕೃಷಿ, ಆರೋಗ್ಯ ಮತ್ತು ಪರಿಸರದಂತಹ ವಿಷಯಗಳ ಮೇಲೆ ಈ ಸಂಘಟನೆಗಳು ಕೆಲಸಮಾಡುತ್ತಿವೆ . ಪ್ರಮುಖವಾಗಿ, U.S. Agency for International Development (USAID) ಮತ್ತು ಸ್ಥಳೀಯ ನ್ಯೂಯಾರ್ಕ್ ನಗರದ ಸಾಮಾಜಿಕ ಸಂಸ್ಥೆ        Robin Hood Foundation ಈಗ ನೊಂದಾಯಿಸಿಕೊಂಡಿದ್ದು, ಈ ಪಟ್ಟಿ ಇನ್ನೂ       ಬೆಳೆಯುವ ವಿಶ್ವಾಸ ನಮ್ಮದು.

     ಈಗಿರುವ ಸಾಮಾಜಿಕ ನೆಟ್ವರ್ಕ್ ತಾಣಗಳು(social networks), ಸಂಯುಕ್ತರಾಷ್ಟ್ತ್ರ ಸಂಘದ ಮಹಾತ್ವಾಕಾಂಕ್ಷಿ ಯೋಜನೆಗಳಾದ ಬಡತನ ಹಾಗೂ ಹಸಿವು ನಿರ್ಮೂಲನೆ, ಶಿಕ್ಷಣ ಹಾಗೂ ಎಚ್.ಐ.ವಿ/ಏಯ್ದ್ಸ್  ವಿರುದ್ಧ ಹೋರಾಡಲು ವಿಶ್ವದ ಎಲ್ಲ ಯುವಕರನ್ನು ಒಟ್ಟುಗೂಡಿಸುವಷ್ಟು ಶಕ್ತವಾಗಿಲ್ಲ. ಭಾಷೆ, ತಂತ್ರಜ್ಞಾನ ಸಂಸ್ಕ್ಕತಿಗಳ ಭಿನ್ನತೆಗಳು ಇದಕ್ಕೆ ತೊಡಕಾಗಿವೆ ಎಂದು ಹೇಳುವ UN Programme on Youth ಎಂಬ ಸಂಸ್ಥೆಯು,  ಭಾಷೆ, ತಂತ್ರಜ್ಞಾನ ಸಂಸ್ಕ್ಕತಿಗಳ ಭಿನ್ನತೆಯ ಹೊರತಾಗಿಯೂ ಮೊಬೈಲ್, ವಿಡಿಯೋ ಹಾಗೂ ಇನ್ನಿತರ ತಂತ್ರಜ್ಞಾನದ ಸಹಾಯದಿಂದ ಪ್ರಪಂಚದ ಯುವಕರಿಂದಲೇ ಪರಿಹಾರ ಸಿಗಲಿ, ಅದೂ ಸಹ ಇಮ್ಯಾಜಿನ್ ಕಪ್ನಲ್ಲೇ ಸಿಗಬಹುದು ಎಂಬ ವಿಶ್ವಾಸದಲ್ಲಿದೆ.

     ಇದೇ ಸಮಯದಲ್ಲಿ USAID ಸಂಸ್ಥೆಯು ಬಡರಾಷ್ಟ್ತ್ರಗಳಲ್ಲಿನ ಶಿಕ್ಷಣದ ಸಮಸ್ಯೆಗಳಿಗೆ ಪರಿಹಾರಕ್ಕೌಸ್ಕರ ಎದಿರು ನೋಡುತ್ತಿದೆ. ಶಾಲೆಯ ಮೊದಲ ಮೂರು ವರ್ಷಗಳಲ್ಲಿ ಮಕ್ಕಳು ಓದುವುದು, ಬರೆಯುವುದು, ಕೂಡು-ಕಳೆಯುವ ಲೆಕ್ಕಗಳನ್ನು ಕಲಿಯುವಂತೆ ಮಾಡುವುದೇ ಸಂಸ್ಥೆಯ ಗುರಿಯಾಗಿದೆ. ಅಧ್ಯಯನಗಳು ಹೇಳುವಂತೆ, ಯಾವ ಮಕ್ಕಳು ಈ ಗುರಿಯನ್ನು ತಲುಪುವುದಿಲ್ಲವೋ, ಅವರು ಜೀವನ ಪರ್ಯಂತ ಬಡವರಾಗಿಯೇ ಮುಂದುವರಿಯುವ ಸಾಧ್ಯತೆಗಳು ಹೆಚ್ಚು. USAID ಯು ಇಮ್ಯಾಜಿನ್ ಕಪ್ ಗೆ ಬರುವ ಯುವಕರಿಂದ, ಪುಟ್ಟ ಹಾಗೂ ಬಡ ಮಕ್ಕಳನ್ನು ಶಿಕ್ಷಿತರನ್ನಾಗಿಸಲು ಸಹಾಯಕವಾಗುವ ಹೊಸ ಸಂಶೋಧನೆಗಳನ್ನು ನೀರೀಕ್ಷಿಸುತ್ತಿದೆ.

     ಪ್ರಪಂಚದ ಯುವಕರಲ್ಲಿ ನನ್ನ ಕರೆಯೇನೆಂದರೆ, ಈಗಲೇ ಇಮ್ಯಾಜಿನ್ ಕಪ್ ಗೆ ಹೆಸರು ನೋದಾಯಿಸಿಕೊಳ್ಳಿ, ವಿವಿಧ ಸಂಸ್ಥೆಗಳ ಅವಶ್ಯಕತೆಗನುಸಾರವಾಗಿ ನಿಮ್ಮ ಆಲೋಚನೆಗಳನ್ನು ಹರಿಯಬಿಡಿ, ಹೊಸ-ಹೊಸ ಮಾರ್ಗೋಪಾಯಗಳನ್ನು ಸೂಚಿಸಿ.

     ಹಾಗೂ, ಸರ್ಕಾರಿ ಸಂಸ್ಥೆಗಳು, ಸರ್ಕಾರೇತರ ಸಂಸ್ಥೆಗಳು ಹಾಗೂ ವಿವಿಧ ಸಾಮಾಜಿಕ ಸಂಸ್ಥೆಗಳು ಇಮ್ಯಾಜಿನ್ ಕಪ್ ನಲ್ಲಿ ತಮ್ಮ ಭಾಗವಹಿಸುವಿಕೆಯನ್ನು ಖಚಿತಪಡಿಸಿಕೊಂಡು, ಸಮಾಜದ ಸಮಸ್ಯೆಗಳಿಗೆ ಯುವಕರಿಂದ ಅತ್ಯುತ್ತಮವಾದ ಮಾರ್ಗಗಳನ್ನು ಕಂಡುಕೊಳ್ಳಬೇಕೆಂದು ನಾನು ಆಶಿಸುತ್ತೇನೆ.

     ಎಲ್ಲರೂ ಇದರಲ್ಲಿ ಭಾಗಿಗಳಾಗೋಣ, ಸ್ಪರ್ಧೆಯ ಸೋಲು-ಗೆಲುವುಗಳ ಕಡೆ ಗಮನ ಕೊಡದೇ, ಇಡೀ ಪ್ರಪಂಚವನ್ನೇ ಗೆಲ್ಲಿಸುವ ಸಂಕಲ್ಪ ಮಾಡೋಣ.

ಬುಧವಾರ, ಡಿಸೆಂಬರ್ 15, 2010

Vir Sanghvi's reliability itself is doubtable-Dr. Koenraad Elst

      World famous historian Dr. Koenraad Elst delivered an thoughtful lecture onAyodhya Verdict: A Historian’s perspective” in Mythic Society’s Dally Memorial lecture Hall in Bangalore today December 15th.

DR KOENRAAD ELST on Ayodhya verdict
      Dr. Koenrad Elst opiniopned that Lord Buddha was never  a rebel against the Hinduism,  even Sikh religion founder Gurunanak says, he is Direct dissident of Rama.  


      The pseudo-secularists says, “the site which was called as Rama’s Birth place is not original one, but Vikramaditya picks any land in his territory and announces it is the Birthplace and Builds a temple there. After Vikramaditya, the Ayodhya was the centre of learning of Buddhists and was a one of intellectual capital of India. As far as the Lord Rama's birth place issue is concerned, both sides have agreed that the Babri Masjid was built around  1528 on a remaining of a temple. The archaeologist experts  have accepted that the Mosque was not in the style of Mughal. In the Muslim documents itself, the name of masjid is written as Masjid-e-Janmasthan. There are many Muslims who accepts the place is Birthplace of Ram


Audience
       Hindus are not the losers, they don’t  problem of Unity, always.   
      One of leading Journalist Vir Sanghvi writes article against Hindus about Ayodhya verdict, His integrity and his reliability itself is doubtable now a days.
      The Programme was organized by Mythic Society part of its Lecture Series of the month. The programme was attended by a select audience, presided by Dr. MKLN Shasthry, senior Educationist also President of Mythic Society.Senior Scientist Dr.Navarathna S Rajaram was the chief guest.